ಆ್ಯಪ್ನಗರ

ಅನಾರೋಗ್ಯ; ವ್ಯಕ್ತಿ ಸಾವು

ಇಲ್ಲಿನ ಶಹಾಪುರ ಆನಂದವಾಡಿ ಪೌರಕಾರ್ಮಿಕರ ಬಡಾವಣೆಯ ನಿವಾಸಿ ಸ್ಟೆಫಿನ್‌ಬಾಬು ದೇವಯ್ಯ ಯಲಕಪಾಟಿ(36) ಗುರುವಾರ ರಾತ್ರಿ ಮೃತಪಟ್ಟಿದ್ದಾರೆ...

Vijaya Karnataka 1 Jun 2019, 5:00 am
ಬೆಳಗಾವಿ: ಇಲ್ಲಿನ ಶಹಾಪುರ ಆನಂದವಾಡಿ ಪೌರಕಾರ್ಮಿಕರ ಬಡಾವಣೆಯ ನಿವಾಸಿ ಸ್ಟೆಫಿನ್‌ಬಾಬು ದೇವಯ್ಯ ಯಲಕಪಾಟಿ(36) ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.
Vijaya Karnataka Web BLG-3105-2-52-31RAJU-4


ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಇವರು ಮನೆಯಲ್ಲಿ ಊಟ ಮಾಡದೆ ಮಲಗಿದ್ದರು. ಏಕಾಏಕಿ ಬಿಪಿ ಲೋ ಆಗಿದ್ದರಿಂದ ಕುಟುಂಬಸ್ಥರು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಅಷ್ಟೊತ್ತಿಗಾಗಲೇ ಮೃತಪಟ್ಟಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸ್ಟೆಫಿನ್‌ಬಾಬು ವಿಪರೀತ ಸಾರಾಯಿ ಸೇವನೆ ಮಾಡುತ್ತಿದ್ದರಿಂದ ಅಸ್ವಾಭಾವಿಕ ಸಾವಿಗೀಡಾದ್ದಾನೆ ಎಂದು ಶಹಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಎಸ್‌ಐ ಎಂ.ಎಸ್‌. ವಠಾರೆ ತನಿಖೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ