ಆ್ಯಪ್ನಗರ

ಬೈಕ್‌ ಸಾಹಸ ಪ್ರದರ್ಶನ ಅನುಕರಣೆ: ಯುವಕರಿಬ್ಬರಿಗೆ ಗಾಯ

ಗೋಕಾಕ: ಬೈಕ್‌ ಸಾಹಸ ಪ್ರದರ್ಶನವನ್ನು ಅನುಕರಣೆ ಮಾಡಲು ಹೋಗಿ ಯುವಕರಿಬ್ಬರು ಅಪಘಾತದಲ್ಲಿ ಗಾಯಗೊಂಡಿದ್ದಾರೆ...

Vijaya Karnataka 24 Aug 2018, 5:00 am
ಗೋಕಾಕ: ಬೈಕ್‌ ಸಾಹಸ ಪ್ರದರ್ಶನವನ್ನು ಅನುಕರಣೆ ಮಾಡಲು ಹೋಗಿ ಯುವಕರಿಬ್ಬರು ಅಪಘಾತದಲ್ಲಿ ಗಾಯಗೊಂಡಿದ್ದಾರೆ.
Vijaya Karnataka Web BEL-23GOK5A


ಬುಧವಾರ ಇಲ್ಲಿನ ಶಾಲಾ ಆವರಣವೊಂದರಲ್ಲಿ ಕೆಟಿಎಮ್‌ ಕಂಪನಿಯ ಬೈಕ್‌ ಪ್ರದರ್ಶನ ಏರ್ಪಡಿಸಲಾಗಿತ್ತು. ಮಾರಾಟಗಾರರು ಪೊಲೀಸರ ಅನುಮತಿಯೊಂದಿಗೆ ಪ್ರದರ್ಶನ ಏರ್ಪಡಿಸಿದ್ದಾಗಿ ಹೇಳಿ ಬೈಕ್‌ ಮೇಲೆ ಆಕರ್ಷಕ ಸ್ಟಂಟ್‌ ಪ್ರದರ್ಶಿಸಿದರು. ಬೈಕ್‌ಗಳ ಮಾರಾಟದ ಪ್ರಚಾರಾರ್ಥ ಸಾಹಸ ಪ್ರದರ್ಶನ ಏರ್ಪಡಿಸಿದ್ದು ಪರಿಣಿತರಲ್ಲದವರು ಇದನ್ನು ಪ್ರಯತ್ನಿಸಬಾರದೆಂದು ಪ್ರದರ್ಶನಕಾರರು ಎಚ್ಚರಿಕೆಯನ್ನೂ ನೀಡಿದ್ದರು.

ಆದರೆ ಅದೇ ದಿನ ಸಂಜೆ ನಗರದ ರಿದ್ದಿ ಸಿದ್ದಿ ಕಾರ್ಖಾನೆ ಸಮೀಪ ಬೈಕ್‌ ಸವಾರರಿಬ್ಬರು ಸಾಹಸ ಪ್ರದರ್ಶಿಸಲು ಹೋಗಿ ಗಾಯಗೊಂಡಿದ್ದಾರೆ. ಯುವಕರು ಗಾಡಿಗಳ ಗೀಳಿಗೆ ಬಿದ್ದು ಜೀವದ ಜೊತೆ ಚೆಲ್ಲಾಟವಾಡುವ ಪ್ರಕರಣಗಳು ನಡೆಯುತ್ತಲೇ ಇವೆ. ವಾಹನಗಳ ಮಾರಾಟಕ್ಕಾಗಿ ಇಂಥ ಪ್ರದರ್ಶನಗಳನ್ನು ಏರ್ಪಡಿಸಿ ಯುವಕರನ್ನು ದಾರಿತಪ್ಪಿಸುವ ಕೆಲಸ ನಿಲ್ಲಬೇಕೆಂಬುದು ಇಲ್ಲಿನ ಜನರ ಒತ್ತಾಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ