ಆ್ಯಪ್ನಗರ

ಹುದ್ದೆ ಭರ್ತಿಯಲ್ಲಿ ಸ್ಥಳೀಯರಿಗೆ ಅನ್ಯಾಯ ಆರೋಪ

ಮುಗಳಖೋಡ : ಪಟ್ಟಣದ ವಾರ್ಡ್‌ ಸಂಖ್ಯೆ 4ರ ಅಂಗನವಾಡಿ ಕೇಂದ್ರಕ್ಕೆ ಹೊಸತಾಗಿ ಅಂಗನವಾಡಿ ಸಹಾಯಕಿ ಹುದ್ದೆಯ ಸ್ಥಾನಕ್ಕೆ ನೇಮಕವಾಗಿರುವ ಸದಸ್ಯೆ ಮೂಲತಃ ವಾರ್ಡ್‌ ...

Vijaya Karnataka 9 Oct 2018, 5:00 am
ಮುಗಳಖೋಡ: ಪಟ್ಟಣದ ವಾರ್ಡ್‌ ಸಂಖ್ಯೆ 4ರ ಅಂಗನವಾಡಿ ಕೇಂದ್ರಕ್ಕೆ ಹೊಸತಾಗಿ ಅಂಗನವಾಡಿ ಸಹಾಯಕಿ ಹುದ್ದೆಯ ಸ್ಥಾನಕ್ಕೆ ನೇಮಕವಾಗಿರುವ ಸದಸ್ಯೆ ಮೂಲತಃ ವಾರ್ಡ್‌ ಸಂಖ್ಯೆ 5ರ ನಿವಾಸಿಯಾಗಿದ್ದು ಅವರ ಅವರ ನೇಮಕಾತಿಯಿಂದ 4 ನೇ ವಾರ್ಡ್‌ನಿಂದ ಅರ್ಜಿ ಸಲ್ಲಿಸಿರುವ ತಮಗೆ ಅನ್ಯಾಯವಾಗಿದೆ ಎಂದು 4ನೇ ವಾರ್ಡ್‌ನ ಅರ್ಜಿದಾರ ಕಾಮಣ್ಣ ದೇವಣ್ಣವರ ಮತ್ತಿತರರು ಆರೋಪಿಸಿದ್ದಾರೆ.
Vijaya Karnataka Web in the recruitment of the post the locals are accused of injustice
ಹುದ್ದೆ ಭರ್ತಿಯಲ್ಲಿ ಸ್ಥಳೀಯರಿಗೆ ಅನ್ಯಾಯ ಆರೋಪ


ಈ ಕುರಿತು ಕುಲಂಕೂಷವಾಗಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಅಂಗನವಾಡಿ ಸಹಾಯಕಿಯಾಗಿ ನೇಮಕವಾಗಿರುವ ಸುನಂದಾ ಕರಿಭೀಮಗೋಳ ಅವರ ಚುನಾವಣೆ ಗುರುತಿನ ಚೀಟಿಯಲ್ಲಿ ಅವರು 5ನೇ ವಾರ್ಡ್‌ ನಿವಾಸಿ ಎಂದಿದೆ. ಅವರು ಅಲ್ಲಿಯ ನಿವಾಸಿಗಳೇ ಆಗಿದ್ದಾರೆ. ಆದರೆ ಸ್ಥಳೀಯ 4 ನೇ ವಾರ್ಡ್‌ದಿಂದ ಅರ್ಜಿ ಸಲ್ಲಿಸಿರುವ 4 ಜನರಿಗೆ ಅನ್ಯಾಯವಾಗಿದೆ ಎಂದರು.

ತಮ್ಮಿಂದ ಏನೂ ಬರೆಯದೇ ಖಾಲಿ ಕಾಗದಕ್ಕೆ ಸಹಿ ಮಾಡಿಸಿಕೊಂಡಿದ್ದು ಈ ಕುರಿತು ಪ್ರಶ್ನಿಸಿದರೆ ಅಂಗನವಾಡಿ ಕೇಂದ್ರದ ಕಟ್ಟಡಕ್ಕಾಗಿ ಅರ್ಜಿ ಸಲ್ಲಿಸಲಾಗುತ್ತಿದೆ ಎಂದು ಸುಳ್ಳು ಉತ್ತರ ನೀಡಲಾಗುತ್ತಿದೆ ಎಂದು ಅವರು ದೂರಿದರು.

ಜಯಪ್ಪ ಮಾಸ್ತರಗೋಳ, ಪ್ರೇಮಾ ಹಳಿಂಗಳಿ, ಅರುಣ ದೇವಣ್ಣವರ, ಮಾನಿಂಗ ಯಾದವಾಡ, ಸಂಗಪ್ಪ ನಡುವಿನಕೇರಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ