ಆ್ಯಪ್ನಗರ

‘ನನ್ನ ಭೇಟಿಯಿಂದ ಜನರಿಗೆ ತೊಂದರೆ ಕಡಿಮೆಯಾಗಿದೆ’

ಗೋಕಾಕ: ತಾವು ನಗರಸಭೆಗೆ ಮೇಲಿಂದ ಮೇಲೆ ಭೇಟಿ ...

Vijaya Karnataka 25 Oct 2019, 5:00 am
ಗೋಕಾಕ: ತಾವು ನಗರಸಭೆಗೆ ಮೇಲಿಂದ ಮೇಲೆ ಭೇಟಿ ನೀಡುತ್ತಿರುವುದರಿಂದ ಇಲ್ಲಿಯ ಜನರಿಗೆ ನಗರಸಭೆಯಿಂದ ಆಗುತ್ತಿದ್ದ ತೊಂದರೆಗಳು ಕಡಿಮೆಯಾಗಿವೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.
Vijaya Karnataka Web 24GOK3_53


ಇಲ್ಲಿನ ನಗರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಜನ ಸಾಮಾನ್ಯರ ಕೆಲಸ ಕಾರ್ಯಗಳನ್ನು ಮಾಡಲು ಸತಾಯಿಸುತ್ತಿದ್ದ ಅಧಿಕಾರಿಗಳ ವರಸೆ ಸ್ವಲ್ಪಮಟ್ಟಿಗೆ ಬದಲಾಗಿದೆ. ಪೌರಕಾರ್ಮಿಕರ ವೇತನದಿಂದ 1700 ರೂಗಳ ಕಮಿಷನ್‌ ಪಡೆಯುವುದನ್ನೂ ನಿಲ್ಲಿಸಲಾಗಿದೆ'', ಎಂದರು.

''ನೆರೆ ಸಂತ್ರಸ್ತರ ಸರ್ವೆ ಕಾರ್ಯದಲ್ಲಿಕೆಲವು ಲೋಪದೋಷಗಳಾಗಿವೆ. ಮನೆಗಳ ಸರ್ವೆ ಕಾರ್ಯದಲ್ಲಿಎ, ಬಿ ಮತ್ತು ಸಿ ಕೆಟಗರಿಯಲ್ಲಿಸಮಸ್ಯೆ ಆಗಿದ್ದು, ಸುಮಾರು 248 ಸಂತ್ರಸ್ತರ ಹೆಸರುಗಳು ತಾಂತ್ರಿಕ ದೋಷದಿಂದ ಮಾಯವಾಗಿವೆ. ಇದಕ್ಕಾಗಿ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವುದರೊಳಗಾಗಿ ತಾಲೂಕಾಡಳಿತ ನೇತೃತ್ವದಲ್ಲಿಅಧಿಕಾರಿಗಳ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು'' ಎಂದರು.

ಸಾರ್ವಜನಿಕರ ಸಭೆ: ಉಪ ಚುನಾವಣೆ ಹಿನ್ನೆಲೆಯಲ್ಲಿಬುಧವಾರ ರಾತ್ರಿ ನಗರದ ಸೋಮವಾರ ಪೇಠ ಹಾಗೂ ಮರಾಠಾ ಗಲ್ಲಿಯಲ್ಲಿಸತೀಶ ಜಾರಕಿಹೊಳಿ, ಸಹೋದರ ಲಖನ್‌ ಜಾರಕಿಹೊಳಿ ಜತೆಗೂಡಿ ಸಾರ್ವಜನಿಕರ ಸಭೆ ನಡೆಸಿದರು. ಈ ಮೂಲಕ ಸಹೋದರರು ಗೋಕಾಕ ಕ್ಷೇತ್ರದಲ್ಲಿಉಪ ಚುನಾವಣೆ ಪ್ರಚಾರ ಚುರುಕುಗೊಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ