ಆ್ಯಪ್ನಗರ

ಕಮಲೇಶ್ಚಂದ್ರ ವರದಿ ಜಾರಿಗಾಗಿ ಅನಿರ್ದಿಷ್ಟಾವಧಿ ಮುಷ್ಕರ

ಗ್ರಾಮೀಣ ಅಂಚೆ ನೌಕರರಿಗೆ ಕಮಲೇಶ್ಚಂದ್ರ ವರದಿಯಂತೆ ಏಳನೇ ವೇತನ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಗುರುವಾರ ಪಟ್ಟಣದ ಪ್ರಧಾನ ಅಂಚೆ ಕಚೇರಿ ಎದುರು ಗ್ರಾಮೀಣ ಅಂಚೆ ನೌಕರರು ...

Vijaya Karnataka 21 Dec 2018, 5:00 am
ರಾಯಬಾಗ: ಗ್ರಾಮೀಣ ಅಂಚೆ ನೌಕರರಿಗೆ ಕಮಲೇಶ್ಚಂದ್ರ ವರದಿಯಂತೆ ಏಳನೇ ವೇತನ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಗುರುವಾರ ಪಟ್ಟಣದ ಪ್ರಧಾನ ಅಂಚೆ ಕಚೇರಿ ಎದುರು ಗ್ರಾಮೀಣ ಅಂಚೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡರು.
Vijaya Karnataka Web BEL-20RAIBAG1PHOTO


ಗ್ರಾಮೀಣ ಅಂಚೆ ನೌಕರರನ್ನು ಕಾಯಂಗೊಳಿಸಬೇಕು. ಗ್ರಾಚ್ಯೂಟಿಯನ್ನು 5 ಲಕ್ಷ ರೂ. ವರೆಗೆ ಏರಿಸಬೇಕು. ವಾರ್ಷಿಕ ರಜೆ ಹೆಚ್ಚಿಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಭತ್ಯೆ ನೀಡಬೇಕು ಎಂಬ ಬೇಡಿಕೆ ಸೇರಿದಂತೆ ಇನ್ನೂ ಹಲವು ಬೇಡಿಕೆಗಳಿಗೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಚೇತನ ಮೋರೆ, ರವಿ ರಂಗೋಳಿ, ಆರ್‌.ಎಂ. ಕಾಂಬಳೆ, ಎಂ.ಎನ್‌. ಜೋರಾಪುರೆ, ತಾನಾಜಿ ಹೊಸಕೋಟೆ, ಎಸ್‌.ಎಸ್‌. ಶಮನೇವಾಡಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ