ಆ್ಯಪ್ನಗರ

ಭಾರತ ಬಂದ್‌: ಸಂತೆಗೆ ಬಂದವರ ಪರದಾಟ

ಯಮಕನಮರಡಿ: ಭಾರತ್‌ ಬಂದ್‌ನ ಮೊದಲ ದಿನವಾದ ಮಂಗಳವಾರ ಯಮಕನಮರಡಿ ಸಂತೆಗೆ ಬಂದ ಹಳ್ಳಿಯ ಜನ ಖಾಸಗಿ ವಾಹನಗಳಿಗಾಗಿ ಪರದಾಡುವಂತಾಯಿತು...

Vijaya Karnataka 9 Jan 2019, 5:00 am
ಯಮಕನಮರಡಿ : ಭಾರತ್‌ ಬಂದ್‌ನ ಮೊದಲ ದಿನವಾದ ಮಂಗಳವಾರ ಯಮಕನಮರಡಿ ಸಂತೆಗೆ ಬಂದ ಹಳ್ಳಿಯ ಜನ ಖಾಸಗಿ ವಾಹನಗಳಿಗಾಗಿ ಪರದಾಡುವಂತಾಯಿತು.
Vijaya Karnataka Web BEL-8YMD2


ಇದನ್ನೇ ನೆಪವಾಗಿಸಿಕೊಂಡು ಖಾಸಗಿ ವಾಹನಗಳ ಚಾಲಕರು ಪ್ರಯಾಣಿಕರನ್ನು ವಾಹನದ ಟಾಪ್‌ ಮೇಲೆ ರಾಜಾರೋಷವಾಗಿ ಕುಳ್ಳಿರಿಸಿಕೊಂಡು ಹೋಗುವುದು ಸಾಮಾನ್ಯವಾಗಿತ್ತು. ರಾಷ್ಟ್ರೀಕೃತ ಬ್ಯಾಂಕ್‌ಗಳು ಬ್ಯಾಂಕಿನ ಅರ್ಧ ಬಾಗಿಲು ಮುಚ್ಚಿ ದೈನಂದಿನ ಯಾವುದೇ ವ್ಯವಹಾರದಲ್ಲಿ ತೊಡಗದೆ ಮುಷ್ಕರಕ್ಕೆ ಬೆಂಬಲ ಸೂಚಿಸಿದರು. ಸಹಕಾರಿ ಸಂಘ-ಸಂಸ್ಥೆಗಳು ಎಂದಿನಂತೆ ಕಾರ್ಯ ಪ್ರವೃತ್ತರಾಗಿ ಕೆಲಸ ನಿರ್ವಹಿಸಿದವು. ಹತ್ತರಗಿ ಬಸ್‌ ನಿಲ್ದಾಣದಲ್ಲಿ ಬಸ್‌ಗಳಿಲ್ಲದೆ ಬಿಕೋ ಎನ್ನುತ್ತಿತ್ತು. ಶಾಲಾ-ಕಾಲೇಜುಗಳು ರಜೆ ಘೋಷಣೆ ಇದ್ದರೂ ಸರಿಯಾದ ಮಾಹಿತಿಯ ಕೊರತೆಯಿಂದ ಹಳ್ಳಿಯಿಂದ ಬಹಳಷ್ಟು ವಿದ್ಯಾರ್ಥಿಗಳು ಯಮಕನಮರಡಿಗೆ ಬಂದು ಮರಳಿ ಮನೆಗಳಿಗೆ ತೆರಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ