ಆ್ಯಪ್ನಗರ

ಸಾವಯವ ಕೃಷಿ ವಿಧಾನ ಅಳವಡಿಕೆ ಕುರಿತು ಮಾಹಿತಿ

ವಿಕ ಸುದ್ದಿಲೋಕ ಸಂಕೇಶ್ವರ ಸ್ಥಳೀಯ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಸಾವಯವ ಕೃಷಿ ಪದ್ಧತಿ ಅಳವಡಿಕೆ ಕುರಿತು ಮಾಹಿತಿ ಕಾರ್ಯಕ್ರಮ ಜರುಗಿತು...

Vijaya Karnataka 12 Apr 2018, 5:00 am

ಸಂಕೇಶ್ವರ: ಸ್ಥಳೀಯ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಸಾವಯವ ಕೃಷಿ ಪದ್ಧತಿ ಅಳವಡಿಕೆ ಕುರಿತು ಮಾಹಿತಿ ಕಾರ್ಯಕ್ರಮ ಜರುಗಿತು.

ಕೃಷಿ ಅಧಿಕಾರಿ ಮಲ್ಲಿಕಾರ್ಜುನ ಕೋರೆ ಮಾತನಾಡಿ, ಸಾವಯವ ಕೃಷಿ ಕುರಿತು ಅಂಕಿ ಅಂಶಗಳನ್ನಾಧರಿಸಿ ಮಾಹಿತಿ ನೀಡಿ, ರೈತರು ಇದರ ಸದ್ಭಳಕೆ ಮಾಡಿಕೊಂಡು ಉತ್ತಮ ಆರೋಗ್ಯದ ಜತೆ ಅಧಿಕ ಉತ್ಪನ್ನ ಗಳಿಸಬಹುದಾಗಿದೆಯೆಂದರು.

ಮಹೇಶ ದೇಸಾಯಿ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ಬಿ.ಎಸ್‌.ಕಾಪಡೆ ಸಾವಯವ ಕೃಷಿ ವಿಧಾನ ತಿಳಿಸಿದರು. ಬಿ.ಎಸ್‌.ನಾಯಿಕ, ಎಲ್‌.ಎ.ಪಾಟೀಲ, ಮಹಾದೇವಿ ಪಾಟೀಲ ಮಾತನಾಡಿದರು.

ಶಿಕ್ಷ ಣ ಸಂಸ್ಥೆಯ ಸಂಸ್ಥಾಪಕ ಕಾಡಗೌಡ ಪಾಟೀಲ, ದುಂಡಪ್ಪ ಕರ್ದೆಗೌಡ ಸೇರಿದಂತೆ ರೈತರು ಪಾಲ್ಗೊಂಡಿದ್ದರು. ರಾಜು ಸೊಲ್ಲಾಪುರೆ ಸ್ವಾಗತಿಸಿದರು. ಐ.ಎಸ್‌.ಶೇಗಟಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ