ಆ್ಯಪ್ನಗರ

ಪ್ರಾಧಿಕಾರ ವಿರೋಧಿಸಿದರೆ ಮರಾಠಿಗರಿಗೇ ಅನ್ಯಾಯ; ಎಂಇಎಸ್‌ಗೆ ಶಾಸಕ ಅನಿಲ್‌ ಬೆನಕೆ ರಾಜಕೀಯ ಪಾಠ

ಬೆಳಗಾವಿ: ಸರಕಾರದ ಅಭಿವೃದ್ಧಿ ಪರ ಕ್ರಮ ವಿರೋಧಿಸಿದರೆ ...

Vijaya Karnataka 22 Nov 2020, 5:00 am
ಬೆಳಗಾವಿ: ಸರಕಾರದ ಅಭಿವೃದ್ಧಿಪರ ಕ್ರಮ ವಿರೋಧಿಸಿದರೆ ನೀವೂ ಮರಾಠಿಗರಿಗೆ ಅನ್ಯಾಯ ಮಾಡಿದಂತೆ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌)ಗೆ ಶಾಸಕ ಅನಿಲ್‌ ಬೆನಕೆ ರಾಜಕೀಯ ಪಾಠ ಮಾಡಿದ್ದಾರೆ.
Vijaya Karnataka Web Anil Benake
ಶಾಸಕ ಅನಿಲ್‌ ಬೆನಕೆ


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕರ್ನಾಟಕ ಬಂದ್‌‍ಗೆ ಕರೆ ನೀಡಿದ ಸಂಘಟನೆಗಳಲ್ಲಿಮರಾಠಾ ಸಮುದಾಯದವರಿದ್ದಾರೆ. ಮರಾಠಾ, ಮರಾಠಿ ನಡುವಿನ ಅಂತರವನ್ನು ಸಂಘಟನೆಗಳು ಅರ್ಥ ಮಾಡಿಕೊಳ್ಳಬೇಕು. ಕನ್ನಡ ಮಾತನಾಡುವ ಬಹಳಷ್ಟು ಜನರು ಮರಾಠಾ ಸಮುದಾಯದಲ್ಲಿಇದ್ದಾರೆ. ಮರಾಠಾ ಸಮುದಾಯದ ಅಭಿವೃದ್ಧಿಗಾಗಿ ಸರಕಾರ ಪ್ರಾಧಿಕಾರ ರಚನೆ ಮಾಡಿದೆ'', ಎಂದರು.

''ಮರಾಠಾ ಸಮುದಾಯದಲ್ಲಿರುವ ಕನ್ನಡಿಗರಿಗೆ ಅನ್ಯಾಯ ಆಗಬಾರದು. ಮರಾಠಾ ಸಮುದಾಯದೊಳಗೆ ಎಂಇಎಸ್‌ ಇದೆ. ಅದು ಕೇವಲ ಒಂದು ಸಂಘಟನೆ. ಅಂತಹ ಎಂಇಎಸ್‌‍ನವರು ಮರಾಠಾ ಪ್ರಾಧಿಕಾರ ವಿರೋಧಿಸಿದರೆ ಅದು ಮರಾಠಿಗರಿಗೆ ಮಾಡುವ ದೊಡ್ಡ ಅವಮಾನ'', ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ