ಆ್ಯಪ್ನಗರ

ಪತ್ರಕರ್ತರ ಕೊರೊನಾ ತಪಾಸಣೆಗೆ ಅಡ್ಡಿ ಪ್ರಕರಣ; ಇನ್ನೊಂದು ಎಫ್‌ಐಆರ್‌ ದಾಖಲಿಸಲು ಆಗ್ರಹ

ಮೂಡಲಗಿ : ಈಚೆಗೆ ಮಂಡ್ಯ ಜಿಲ್ಲಾ ಪತ್ರಕರ್ತರ 'ಕೋವಿಡ್‌-19' ಪರೀಕ್ಷೆ ...

Vijaya Karnataka 29 Apr 2020, 5:00 am
ಮೂಡಲಗಿ: ಈಚೆಗೆ ಮಂಡ್ಯ ಜಿಲ್ಲಾಪತ್ರಕರ್ತರ 'ಕೋವಿಡ್‌-19' ಪರೀಕ್ಷೆ ನಡೆಸುತ್ತಿರುವ ಸಮಯದಲ್ಲಿವಿಧಾನ ಪರಿಷತ್‌ ಸದಸ್ಯ ಶ್ರೀಕಂಠೇಗೌಡ, ಅವರ ಪುತ್ರ ಹಾಗೂ ಅವರ ಬೆಂಬಲಿಗರು, ಕೊರೊನಾ ತಪಾಸಣೆ ನಡೆಸುತ್ತಿದ್ದ ಅಧಿಕಾರಿಗಳ ಮೇಲೆ ಹಲ್ಲೆನಡೆಸಿದ ಪ್ರಕರಣಕ್ಕೆ ಸಂಬಂಧಿಸಿ, ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಹೊಸ ಕಾನೂನಿನ ಪ್ರಕಾರ ಇನ್ನೊಂದು ಎಫ್‌ಐಆರ್‌ ದಾಖಲಿಸುವಂತೆ ನಿರ್ದೇಶನ ನೀಡಲು ಗೃಹ ಸಚಿವರಿಗೆ ಹಾಗೂ ಮಂಡ್ಯ ಎಸ್‌ಪಿಗೆ ದೂರು ನೀಡಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದ್ದಾರೆ.
Vijaya Karnataka Web 28MDL1_53
ಭೀಮಪ್ಪ ಗಡಾದ


''ಕೊರೊನಾ ವಿರುದ್ಧದ ಹೋರಾಟದಲ್ಲಿತೊಡಗಿದವರ ಮೇಲೆ ಹಲ್ಲೆನಡೆಸುವುದು ಹಾಗೂ ತಪಾಸಣೆ/ ಚಿಕಿತ್ಸೆ ಕಾರ್ಯಗಳಿಗೆ ಅಡ್ಡಿಪಡಿಸುವುದು ಶಿಕ್ಷಾರ್ಹ ಅಪರಾಧವೆಂದು ಘೋಷಿಸಿರುವ ನಮ್ಮ ಸರಕಾರ ಕೇರಳ ಹಾಗೂ ಉತ್ತರ ಪ್ರದೇಶ ರಾಜ್ಯಗಳ ಮಾದರಿಯಲ್ಲಿಸುಗ್ರಿವಾಜ್ಞೆ ಮೂಲಕ ಹೊಸ ಕಾನೂನು ಜಾರಿಗೆ ತಂದಿದೆ. ಪರಿಸ್ಥಿತಿ ಹೀಗಿರುವಾಗ ಎಂಎಲ್‌ಸಿ, ಅವರ ಪುತ್ರ ಮತ್ತು ಅವರ ಬೆಂಬಲಿಗರನ್ನು ಕಾನೂನಿನಿಂದ ರಕ್ಷಿಸಲು ರಾಜಕೀಯ ಒತ್ತಡಕ್ಕೆ ಸಿಲುಕಿದ ಪೊಲೀಸರು ಇವರ ಮೇಲೆ ಜಾಮೀನು ಸಿಗುವಂತೆ ಸಾಮಾನ್ಯ ಕೇಸು ದಾಖಲಿಸಿರುವುದನ್ನು ನೋಡಿದರೆ ಸರಕಾರವು ಕಾನೂನಿನ ಪ್ರಕಾರ ಕೆಲಸ ಮಾಡುತ್ತಿದೆಯೆ ಎಂಬ ಅನುಮಾನ ಬರದೆ ಇರದು. ಕಾರಣ ಸರಕಾರ ಕಾನೂನಿನ ಪ್ರಕಾರವೇ ಕಾರ್ಯ ನಿರ್ವಹಿಸುತ್ತಿದ್ದರೆ ಕೋವಿಡ್‌ ಪರೀಕ್ಷೆಗೆ ಅಡ್ಡಿಪಡಿಸಿದವರ ಮೇಲೆ ಹೊಸ ಕಾನೂನಿನ ಪ್ರಕಾರ ಇನ್ನೊಂದು ಎಫ್‌ಐಆರ್‌ ದಾಖಲಿಸಿ, ಕಾನೂನಿನ ಘನತೆ-ಗೌರವಗಳನ್ನು ಹೆಚ್ಚಿಸುವಂತೆ ಗೃಹ ಸಚಿವರಿಗೆ ಬರೆದಿರುವ ಈ ದೂರಿನಲ್ಲಿವಿನಂತಿಸಲಾಗಿದೆ'', ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ