ಆ್ಯಪ್ನಗರ

ಪಾದರಕ್ಷೆ, ಶೂ ತಯಾರಿಕೆ ತರಬೇತಿ ನೀಡುವಂತೆ ಒತ್ತಾಯ

ಬೈಲಹೊಂಗಲ : ಕಳೆದ ಮೂರು ವರ್ಷಗಳಿಂದ ಪಾದರಕ್ಷೆ, ಶೂ ತಯಾರಿಕಾ ತರಬೇತಿ ಶಿಬಿರಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರೂ ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆಯವರು ತರಬೇತಿ ...

Vijaya Karnataka 26 Oct 2018, 5:00 am
ಬೈಲಹೊಂಗಲ : ಕಳೆದ ಮೂರು ವರ್ಷಗಳಿಂದ ಪಾದರಕ್ಷೆ, ಶೂ ತಯಾರಿಕಾ ತರಬೇತಿ ಶಿಬಿರಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರೂ ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆಯವರು ತರಬೇತಿ ಆಯೋಜಿಸುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಸಮಗಾರ ಹರಳಯ್ಯ ಸಮಾಜ ಮಹಾಮಂಡಳದಿಂದ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
Vijaya Karnataka Web BEL-25HTP3


ಇಲಾಖೆಯ 2018-19ನೇ ಸಾಲಿನ 60 ದಿನಗಳ ಪಾದರಕ್ಷೆ ಮತ್ತು ಶೂ ತಯಾರಿಕಾ ತರಬೇತಿ ಶಿಬಿರಕ್ಕಾಗಿ ಅ.20ರೊಳಗಾಗಿ 32 ಜನ ಫಲಾನುಭವಿಗಳು ಎಲ್ಲ ದಾಖಲಾತಿ ಲಗತ್ತಿಸಿ ಅರ್ಜಿ ಸಲ್ಲಿಸಿದ್ದಾರೆ. ಬೆಳಗಾವಿಯ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಈ ಬಗ್ಗೆ ಕಾಳಜಿವಹಿಸಬೇಕು. ಶೀಘ್ರ ಮನವಿಗೆ ಸ್ಪಂದಿಸದಿದ್ದರೆ ಉಪವಿಭಾಗಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಪುಂಡಲೀಕ ರಾಯಬಾಗ, ಅಧ್ಯಕ್ಷ ಚಂದ್ರಕಾಂತ ಕಟ್ಟಿಮನಿ, ತಿಪ್ಪಣ್ಣ ಸವದತ್ತಿ, ಸಾಗರ ಕಿತ್ತೂರ, ಪರಶುರಾಮ ರಾಯಭಾಗ, ಬಸವರಾಜ ಕಟ್ಟಿಮನಿ, ಏಕನಾಥ ಕಿತ್ತೂರ, ಕೃಷ್ಣ ತೋರಗಲ್ಲ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ