ಆ್ಯಪ್ನಗರ

ರಾಷ್ಟ್ರನಾಯಕರ ಭಾವಚಿತ್ರಗಳಿಗೆ ತಾರತಮ್ಯ ಮಾಡದೆ ಹೂಮಾಲೆ ಹಾಕಲು ಒತ್ತಾಯ

ಮಲ್ಲಮ್ಮನ ಬೆಳವಡಿ: ಸಮೀಪದ ಖೊದಾನಪುರ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಹಾಕಲಾಗಿರುವ ರಾಷ್ಟ್ರ ನಾಯಕರ ಎಲ್ಲ ಭಾವಚಿತ್ರಗಳಿಗೆ ತಾರತಮ್ಯ ಮಾಡದೆ ಹೂಮಾಲೆ ...

Vijaya Karnataka 25 May 2019, 5:00 am
ಮಲ್ಲಮ್ಮನ ಬೆಳವಡಿ : ಸಮೀಪದ ಖೊದಾನಪುರ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಹಾಕಲಾಗಿರುವ ರಾಷ್ಟ್ರ ನಾಯಕರ ಎಲ್ಲ ಭಾವಚಿತ್ರಗಳಿಗೆ ತಾರತಮ್ಯ ಮಾಡದೆ ಹೂಮಾಲೆ ಹಾಕುವಂತೆ ಗ್ರಾಮದ ರಿಯಾಜ್‌ ಕೋಟೂರ ಒತ್ತಾಯಿಸಿದ್ದಾರೆ.
Vijaya Karnataka Web BEL-24 DWDP 1


ಕಚೇರಿಯಲ್ಲಿ ಹಾಕಲಾಗಿರುವ ಕೆಲ ರಾಷ್ಟ್ರನಾಯಕರ ಭಾವಚಿತ್ರಕ್ಕೆ ಕಾಟಾಚಾರಕ್ಕೆಂಬಂತೆ ಹೂಮಾಲೆ ಹಾಕಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್‌ ಕಲಾಮ್‌, ಸರ್ದಾರ್‌ ವಲ್ಲಭಬಾಯಿ ಪಟೇಲರ ಭಾವಚಿತ್ರಗಳಿಗೆ ಹೂಮಾಲೆ ಹಾಕದೆ ಅವಮಾನಿಸಲಾಗುತ್ತಿದೆ. ಈ ಕುರಿತು ಅನೇಕ ಬಾರಿ ಪಿಡಿಒ ಅವರ ಗಮನಕ್ಕೆ ತರಲಾಗಿದೆ. ಪ್ರತಿಸಲವೂ 'ಹಾಕಿದರಾಯ್ತು ಬಿಡಿ' ಎಂಬ ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ದೂರಿದರು.

ಜತೆಗೆ ಗ್ರಾಮಸ್ಥರ ಕುಂದು ಕೊರತೆಗಳಿಗೆ ಪಿಡಿಒ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ. ದಾಖಲೆ ಪತ್ರಗಳನ್ನು ನೀಡಲು ಜನರನ್ನು ಗಂಟೆಗಟ್ಟಲೇ ಕಾಯಿಸುತ್ತಾರೆ ಎಂದು ಆರೋಪಿಸಿದರು.

ಗ್ರಾಮಸ್ಥರ ಕೆಲಸಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಸುಳ್ಳು. ಕಚೇರಿಯಲ್ಲಿ ರಾಷ್ಟ್ರನಾಯಕರ ಭಾವಚಿತ್ರಗಳಿಗೆ ಹೂಮಾಲೆ ಹಾಕುವ, ಹಾಕದಿರುವ ಅಥವಾ ಯಾವ ಬಗೆಯ ಹೂಮಾಲೆ ಹಾಕುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಸಿಬ್ಬಂದಿಯನ್ನು ವಿಚಾರಿಸಿ ಆರೋಪ ಸತ್ಯವಾಗಿದ್ದರೆ ಕ್ರಮ ವಹಿಸುತ್ತೇನೆ.
-ಎ.ಸಿ. ಅಂಗರಗಟ್ಟಿ, ಖೋದಾನಪುರ, ಪಿಡಿಒ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ