ಆ್ಯಪ್ನಗರ

ರಂಗಭೂಮಿ ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಒತ್ತಾಯ

ರಾಮದುರ್ಗ: ರಂಗಭೂಮಿ ಕಲಾವಿದರಿಗೆ ಸರಕಾರ ನೀಡುತ್ತಿರುವ 1 ಸಾವಿರ ಮಾಸಾಶನವನ್ನು 3 ಸಾವಿರಕ್ಕೆ ಏರಿಸಬೇಕು ಎಂದು ಹಿರಿಯ ರಂಗಭೂಮಿ ಕಲಾವಿದೆ ಹಾಗೂ ಚಿತ್ರನಟಿ ...

Vijaya Karnataka 3 Aug 2018, 5:00 am
ರಾಮದುರ್ಗ: ರಂಗಭೂಮಿ ಕಲಾವಿದರಿಗೆ ಸರಕಾರ ನೀಡುತ್ತಿರುವ 1 ಸಾವಿರ ಮಾಸಾಶನವನ್ನು 3 ಸಾವಿರಕ್ಕೆ ಏರಿಸಬೇಕು ಎಂದು ಹಿರಿಯ ರಂಗಭೂಮಿ ಕಲಾವಿದೆ ಹಾಗೂ ಚಿತ್ರನಟಿ ಪಂಕಜಾ ರವಿಶಂಕರ್‌ ಒತ್ತಾಯಿಸಿದ್ದಾರೆ.
Vijaya Karnataka Web BEL-02RD4


ಅವರು ಪಟ್ಟಣದಲ್ಲಿ ಪ್ರೆಸ್‌ ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಸದ್ಯ ಕಲಾವಿದೆಯಾಗಿರುವ ಚಿತ್ರನಟಿ ಜಯಮಾಲಾ ಅವರು ಸಚಿವರಾಗಿದ್ದು, ಈ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ಹೇರಬೇಕು. ಅದೆಷ್ಟೋ ರಂಗ ಕಲಾವಿದರು ಇಂದು ಇಳಿ ವಯಸ್ಸಿನಲ್ಲಿ ಕುಟುಂಬದಿಂದ ತಿರಸ್ಕೃತಗೊಂಡು ಬೀದಿಗೆ ಬರುವಂತಾಗಿದೆ. ಅಂತಹ ಕಲಾವಿದರ ನೆರವಿಗೆ ಮಾತೃಶ್ರೀ ಕಲಾ ಸಂಘ ಹಾಗೂ ಸಾಯಿ ಸೇವಾ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ವತಿಯಿಂದ ರಾಜ್ಯಾದ್ಯಂತ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಸಹಾಯ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಸುಧಾರಿತ 'ಗೌಡ್ರಗದ್ಲ' ಪ್ರದರ್ಶನ:
ಪಟ್ಟಣದ ಬಸವೇಶ್ವರ ಶಾಲಾ ಮೈದಾನದಲ್ಲಿ ಆ.26ರಂದು ಮಧ್ಯಾಹ್ನ 3.30ಕ್ಕೆ ಹಾಗೂ ಸಂಜೆ 6.30ಕ್ಕೆ ಉತ್ತರ ಕರ್ನಾಟಕ ಭಾಗದವರ ಮೆಚ್ಚುಗೆಗೆ ಪಾತ್ರವಾಗಿರುವ ಸಾಮಾಜಿಕ ನಾಟಕ 'ಗೌಡ್ರಗದ್ಲ' ಪ್ರದರ್ಶನವಾಗಲಿದೆ. ಗೌಡನ ಪಾತ್ರವನ್ನು ಸ್ವತಃ ತಾವೇ ನಿರ್ವಹಿಸುತ್ತಿದ್ದು, ನಾಟಕದಲ್ಲಿ ಹಿಂದೆ ಇದ್ದ ಅಶ್ಲೀಲ ಪದಗಳನ್ನು ತೆಗೆದು ಹಾಕಿ ಶರಣರ ತತ್ವಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ನಿಟ್ಟಿನಲ್ಲಿ ಗೌಡನ ಪಾತ್ರದ ಸಂಭಾಷಣೆಯನ್ನು ಬದಲಾವಣೆ ಮಾಡಲಾಗಿದೆ ಎಂದರು.

ನಾಟಕ ಪ್ರದರ್ಶನದಿಂದ ಬಂದ ಹಣದಲ್ಲಿ ಶೇ.25 ರಷ್ಟು ರಂಗಭೂಮಿ ಆಸಕ್ತ ಕಲಾವಿದರ ಸಹಾಯಕ್ಕೆ, ಶೇ.25 ರಷ್ಟನ್ನು ಬಡರೈತರ ಮಕ್ಕಳ ಶಿಕ್ಷ ಣಕ್ಕೆ ಹಾಗೂ ಶೇ.25 ರಷ್ಟನ್ನು ಅಂಧ ಮಕ್ಕಳ ಸಂಗೀತ ಶಾಲೆಗೆ ನೀಡಲಾಗುವುದು. ಆಸಕ್ತರು ನಾಟಕ ವೀಕ್ಷಿಸಿ ಆಸಕ್ತ ರಂಗಭೂಮಿ ಕಲಾವಿದರ ನೆರವಿಗೆ ಬರಬೇಕು ಎಂದು ವಿನಂತಿಸಿದರು.

ಬಿಜೆಪಿ ಯುವ ಧುರೀಣ ಮಲ್ಲಣ್ಣ ಯಾದವಾಡ ಮಾತನಾಡಿ, ನಿರ್ಗಗತಿಕರಾಗಿರುವ ರಂಗಭೂಮಿ ಹಿರಿಯ ಕಲಾವಿದರ ನೆರವಿಗಾಗಿ ಚಿತ್ರನಟಿ ಪಂಕಜಾ ರವಿಶಂಕರ್‌ ಅವರು ನಾಟಕ ಪ್ರದರ್ಶನ ಮಾಡುತ್ತಿರುವುದು ಹಮ್ಮೆಯ ಸಂಗತಿಯಾಗಿದೆ. ಅವರಿಗೆ ತಾಲೂಕಿನಿಂದ ಅಗತ್ಯ ನೆರವು ನೀಡುವದಾಗಿ ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ