ಆ್ಯಪ್ನಗರ

ಚನ್ನಮ್ಮ ಪ್ರತಿಮೆಗೆ ಅವಮಾನ ಆರೋಪ: ಕರವೇ ಪ್ರತಿಭಟನೆ

ಬೆಳಗಾವಿ : ಚನ್ನಮ್ಮಳ ವಿಜಯೋತ್ಸವ ದಿನದಂದು ಮಹಾನಗರ ಪಾಲಿಕೆ ರಾಣಿ ಚನ್ನಮ್ಮಳ ಪ್ರತಿಮೆಗೆ ಅವಮಾನಿಸಿದೆ ಎಂದು ಆರೋಪಿಸಿ ಕರವೇ ಮುಖಂಡರಾದ ಮಹಾದೇವ ತಳವಾರ, ದೀಪಕ ...

Vijaya Karnataka 24 Oct 2018, 5:00 am
ಬೆಳಗಾವಿ : ಚನ್ನಮ್ಮಳ ವಿಜಯೋತ್ಸವ ದಿನದಂದು ಮಹಾನಗರ ಪಾಲಿಕೆ ರಾಣಿ ಚನ್ನಮ್ಮಳ ಪ್ರತಿಮೆಗೆ ಅವಮಾನಿಸಿದೆ ಎಂದು ಆರೋಪಿಸಿ ಕರವೇ ಮುಖಂಡರಾದ ಮಹಾದೇವ ತಳವಾರ, ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರು ರಸ್ತೆ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.
Vijaya Karnataka Web BEL-R C CIRLCE (4)


ನ.1 ರಂದು ಕರ್ನಾಟಕ ರಾಜೋತ್ಸವದ ಹಿನ್ನೆಲೆಯಲ್ಲಿ ಬಣ್ಣ ಬಳಿಯುವ ಸಲುವಾಗಿ ಚನ್ನಮ್ಮಳ ಮೂರ್ತಿ ಹಾಗೂ ಕುದುರೆಗೆ ಅರ್ಧ ಪಾಲಿಶ್‌ ಮಾಡಿ ಬಿಟ್ಟಿದ್ದಾರೆ. ಚನ್ನಮ್ಮಳ ವಿಜಯೋತ್ಸವ ದಿನದಂದು ಈ ರೀತಿ ಅವಮಾನ ಮಾಡಲಾಗಿದೆ. ಸಂಬಂಧಿಸಿದ ಪಾಲಿಕೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಜರುಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾರ್ಕೆಟ್‌ ಠಾಣೆ ಎಸಿಪಿ ನಾರಾಯಣ ಭರಮನಿ ಮತ್ತು ಇತರ ಪೊಲೀಸ್‌ ಅಧಿಕಾರಿಗಳ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರ ಜತೆ ಚರ್ಚಿಸಿದರು. ನಂತರ ಸ್ಥಳಕ್ಕಾಗಮಿಸಿದ ಪಾಲಿಕೆ ಎಇಇ ನರಸನ್ನವರ, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ವೃತ್ತದ ಸುತ್ತಲೂ ಭದ್ರವಾದ ಗ್ರಿಲ್‌ಳನ್ನು ಅಳವಡಿಸುವ ಕೆಲಸವನ್ನು 28ರೊಳಗೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.

ಪಾಲಿಕೆಯ ಸದಸ್ಯರಾದ ಸರಳಾ ಹೆರೇಕರ, ಜಯಶ್ರೀ ಮಾಳಗಿ, ಕನ್ನಡ ಪರ ಹೋರಾಟಗಾರರಾದ ಎಂ.ಜಿ. ಮಕಾನದಾರ್‌, ಅಶೋಕ ಚಂದರಗಿ ಮಧ್ಯಸ್ಥಿಕೆ ವಹಿಸಿ ಪ್ರತಿಭಟನೆ ಕೈಬಿಡುವಂತೆ ಮನವೊಲಿಸಿದರು. ಪ್ರತಿಭಟನಾಕಾರರು ರಸ್ತೆ ಬಂದ್‌ ಮಾಡಿದ್ದರಿಂದ ಒಂದು ಗಂಟೆ ಸಂಚಾರ ದಟ್ಟಣೆ ಉಂಟಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ