ಆ್ಯಪ್ನಗರ

ಅಂತಾರಾಜ್ಯ ಕಳ್ಳನ ಬಂಧನ: 2 ಲಕ್ಷ ರೂ. ವಶ

ಬೈಲಹೊಂಗಲ : ಪಟ್ಟಣದಲ್ಲಿ ಇಪ್ಪತ್ತು ದಿನಗಳ ಹಿಂದೆ ಕಳ್ಳತನವಾಗಿದ್ದ 2 ಲಕ್ಷ ರೂ...

Vijaya Karnataka 26 May 2019, 5:00 am
ಬೈಲಹೊಂಗಲ: ಪಟ್ಟಣದಲ್ಲಿ ಇಪ್ಪತ್ತು ದಿನಗಳ ಹಿಂದೆ ಕಳ್ಳತನವಾಗಿದ್ದ 2 ಲಕ್ಷ ರೂ. ಸಮೇತ ಅಂತಾರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಬೈಲಹೊಂಗಲ ಪೊಲೀಸರು ಯಶಸ್ವಿಯಾಗಿದ್ದು, ಪರಾರಿಯಾಗಿರುವ ಇನ್ನೊಬ್ಬ ಆರೋಪಿಯ ಹುಡುಕಾಟ ನಡೆಸಿದ್ದಾರೆ.
Vijaya Karnataka Web BEL-25HTP7


ಪಟ್ಟಣದ ಕರ್ನಾಟಕ ಬ್ಯಾಂಕ್‌ ಎದುರಿಗೆ ಸ್ಥಳೀಯ ವಿದ್ಯಾನಗರ ನಿವಾಸಿ ಸೊಲಬಯ್ಯ ಹಿರೇಮಠ ಅವರಿಗೆ ''ನಿಮ್ಮ ಕಾರು ಪಂಕ್ಚರ್‌ ಆಗಿದೆ'', ಎಂದು ನಂಬಿಸಿದ ಕಳ್ಳರು, ಕಾರಿನಲ್ಲಿದ್ದ 2 ಲಕ್ಷ ರೂ. ಹಾಗೂ ಲ್ಯಾಪ್‌ಟಾಪ್‌ ಲಪಟಾಯಿಸಲು ಯತ್ನಿಸಿದ್ದರು. ಆಗ ಕಳ್ಳರನ್ನು ಹಿಡಿಯಲು ಯತ್ನಿಸಿದ ಹಿರೇಮಠ ಅವರನ್ನು ನೂಕಿ ಪಲ್ಸರ್‌ ವಾಹನದ ಮೇಲೆ ಪರಾರಿಯಾಗಿದ್ದರು.

ಸಮೀಪದ ಬೈಲವಾಡ ಕ್ರಾಸ್‌ ಬಳಿ ಬಂಧಿತ ಆರೋಪಿ ಕಪರಾಲತಿಪ್ಪಾ ಗ್ರಾಮದ ನಿವಾಸಿ ಜಪಾನಿಯಾ ಮಸ್ತಾನ ಪುಲಿಕೋಟಿ (24) ಎಂದು ಗೊತ್ತಾಗಿದ್ದು, ಪರಾರಿಯಾದ ಇನ್ನೊಬ್ಬ ಆರೋಪಿ ಸಹ ಕಪರಾಲತಿಪ್ಪಾ ನಿವಾಸಿ ರಾಜು ಪ್ರಸಾದ ಕುಂಚಾಲಾ (45) ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳರು ಆಂಧ್ರ ಪ್ರದೇಶದ ಜಿಲ್ಲೆಯ ನೆಲ್ಲೂರ ಕಾವಲಿ ತಾಲೂಕಿನವರು ಎನ್ನಲಾಗಿದೆ. ಬೈಲಹೊಂಗಲ ಪೊಲೀಸ್‌ ಠಾಣೆ ಹದ್ದಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಡಿವೈಎಸ್ಪಿ ಜಿ.ಎಂ.ಕರುಣಾಕರ ಶೆಟ್ಟಿ ಮಾರ್ಗದರ್ಶನದಲ್ಲಿ ಸಿಪಿಐ ಮಂಜುನಾಥ ಕುಸುಗಲ್‌ ನೇತೃತ್ವದಲ್ಲಿ ಪಿಎಸ್‌ಐ ಎಂ.ಎಸ್‌. ಹೂಗಾರ ಹಾಗೂ ಸಿಬ್ಬಂದಿ ಕಳ್ಳನನ್ನು ವಿಚಾರಣೆಗೆ ಒಳಪಡಿಸಿದಾಗ, 2 ಲಕ್ಷ ರೂ. ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡು ತನ್ನಿಲ್ಲಿದ್ದ 2 ಲಕ್ಷ 14 ಸಾವಿರದ ಐದು ನೂರು ರೂ. ಹಣ ಒಪ್ಪಿಸಿದ್ದಾನೆ. ರಾಯಬಾಗ, ನರಗುಂದ ಪ್ರದೇಶದಲ್ಲೂ ಕಳ್ಳತನ ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಯನ್ನು ಪತ್ತೆ ಹಚ್ಚಲು ಸಿಪಿಐ ಮಂಜುನಾಥ ಕುಸುಗಲ್‌, ಪಿಎಸ್‌ಐ ಎಂ.ಎಸ್‌.ಹೂಗಾರ ಎಎಸ್‌ಐಗಳಾದ ಎಂ.ಕೆ. ಜೈನರ, ಎ.ಜಿ. ಸಾಲಿ, ಎನ್‌.ವಿ. ಪರಡ್ಡಿ, ಸಿಬ್ಬಂದಿ ಎಂ.ಎಸ್‌. ಬಸರೀಕಟ್ಟಿ, ಬಿ.ಎಂ.ಚಿಲಕಂಡಿ, ಎಸ್‌.ಎಸ್‌.ಹಾದಿಮನಿ, ಡಿ.ಎಚ್‌.ನದಾಫ, ಯು.ಆರ್‌.ಪಟ್ಟೇದ ಶ್ರಮವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ