ಆ್ಯಪ್ನಗರ

ಅಡಹಳ್ಳಟ್ಟಿಯಲ್ಲಿ ಅಂತಾರಾಷ್ಟ್ರೀಯ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ

ಅಡಹಳ್ಳಿ: ಸಮೀಪದ ಅಡಹಳ್ಳಟ್ಟಿ ಗ್ರಾಮದಲ್ಲಿ ಜರುಗಿದ ಕ್ರೀಡಾಭಿಮಾನಿಗಳ ಹರ್ಷೋದ್ಘಾರದ ನಡುವೆ ಅಂತಾರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ...

Vijaya Karnataka 11 May 2019, 5:00 am
ಅಡಹಳ್ಳಿ : ಸಮೀಪದ ಅಡಹಳ್ಳಟ್ಟಿ ಗ್ರಾಮದಲ್ಲಿ ಜರುಗಿದ ಕ್ರೀಡಾಭಿಮಾನಿಗಳ ಹರ್ಷೋದ್ಘಾರದ ನಡುವೆ ಅಂತಾರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ಅಮೋಘವಾಗಿ ಜರುಗಿತು.
Vijaya Karnataka Web BEL-10 ADAHALLI 1


ಈ ವೇಳೆ ಅಂತಾರಾಷ್ಟ್ರೀಯ ಕುಸ್ತಿ ಮಾಜಿ ಪಟು ಹಾಗೂ ತರಬೇತುದಾರ ರತನಕುಮಾರ ಮಠಪತಿ ಅವರು, ದೇಶೀ ಕ್ರೀಡೆ ಕುಸ್ತಿಗೆ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಸಹಾಯ, ಸಹಕಾರ ದೊರೆಯಬೇಕಿದೆ. ಕುಸ್ತಿ ಪಟು ದಿ. ರಾಚಯ್ಯಸ್ವಾಮಿ ಮಠಪತಿ ಅವರ ಸ್ಮರಣಾರ್ಥ ಪ್ರತಿವರ್ಷ ಕುಸ್ತಿ ಆಯೋಜನೆಗೆ 51 ಸಾವಿರ ರೂ. ನೀಡುವುದಾಗಿ ವಾಗ್ದಾನ ಮಾಡಿದರು.

ಕುಸ್ತಿ ವಿಜೇತರು :
ಜಾರ್ಜಿಯಾ ದೇಶದ ಪೈಲ್ವಾನ್‌ ಮೋಗೇಲಿ ಅವರನ್ನು ಮಣಿಸಿ ಹರಿಯಾಣಾದ ಪಟು ಮನಜೀತ್‌ಸಿಂಗ್‌ ಪ್ರಥಮಸ್ಥಾನ ಪಡೆದು 'ಬಸವಕೇಸರಿ' ಪ್ರಶಸ್ತಿ ಹಾಗೂ ಬೆಳ್ಳಿಗದೆಯನ್ನು ತಮ್ಮದಾಗಿಸಿಕೊಂಡರು. ದೆಹಲಿಯ ಪೈಲ್ವಾನ್‌ ಪವನಕುಮಾರ ಅವರನ್ನು ಸೋಲಿಸಿದ ಅಡಹಳ್ಳಟ್ಟಿಯ ಪೈಲ್ವಾನ್‌ ಅಪ್ಪಸಿ ದ್ವಿತೀಯ ಸ್ಥಾನ ಪಡೆದರು. 'ಕರ್ನಾಟಕ ಕಂಠೀರವ' ಪ್ರಶಸ್ತಿ ಪುರಸ್ಕೃತ ಪೈಲ್ವಾನ್‌ ಸಂಗಮೇಶ ತೃತೀಯ, ಸಹ್ಯಾದ್ರಿ ತಾಲೀಮ್‌, ಪುಣೆಯ ಗೋಪಾಲ ಪೈಲ್ವಾನರು ಚತುರ್ಥ ಸ್ಥಾನ ಪಡೆದರು.

ಈ ವೇಳೆ ಚಿದಾನಂದ ಸವದಿ, ಜಿಪಂ ಮಾಜಿ ಸದಸ್ಯ ಬಸವರಾಜ ಬುಟಾಳೆ, ತಾಪಂ ಸದಸ್ಯ ಶಿವು ಗುಡ್ಡಾಪುರ, ಪಿಕೆಪಿಎಸ್‌ ಅಧ್ಯಕ್ಷ ಶ್ರೀಶೈಲ ತಾಂವಶಿ, ಗಂಗಪ್ಪಾ ಖೋತ, ಅಡಿವೆಪ್ಪ ಕೆಂಚಣ್ಣವರ, ಈರಗೌಡ ಪಾಟೀಲ, ಚಿದಾನಂದ ಮಠಪತಿ, ಮಹಾದೇವ ಹಿಪ್ಪರಗಿ, ಜೆ.ಡಿ. ಕೇರಿ, ಹುಸೇನ್‌ ಅವಟಿ ಇತರರು ಇದ್ದರು.

ಪ್ರಕಾಶ ಕೇರಿ ಸ್ವಾಗತಿಸಿದರು. ಗಿರೀಶ ಬಿಸಲ್‌ನಾಯಿಕ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ