ಆ್ಯಪ್ನಗರ

ಸುಗಂಧಾದೇವಿ ಜಾತ್ರೆ ಆಮಂತ್ರಣ ಪತ್ರಿಕೆ ಬಿಡುಗಡೆ

ಬಾವನಸೌಂದತ್ತಿ: ಗ್ರಾಮದಲ್ಲಿ ಮಾ...

Vijaya Karnataka 10 Mar 2019, 5:00 am
ಬಾವನಸೌಂದತ್ತಿ : ಗ್ರಾಮದಲ್ಲಿ ಮಾ.25ರಂದು ನಡೆಯಲಿರುವ ಗ್ರಾಮದೇವತೆ ಸುಗಂಧಾದೇವಿ ಜಾತ್ರೆ ಹಾಗೂ ದನಗಳ ಜಾತ್ರೆಯ ಆಮಂತ್ರಣ ಪತ್ರಿಕೆಗಳನ್ನು ಜಾತ್ರಾ ಕಮಿಟಿಯವರು ಭಕ್ತರ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು.
Vijaya Karnataka Web BEL-09 BSDT 02


ಇದರೊಂದಿಗೆ ಭಕ್ತರು ಕೊಡುವ ದೇಣಿಗೆ ಸ್ವೀಕಾರಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಕಮಿಟಿ ಅಧ್ಯಕ್ಷ ಶ್ರೀಮಂತ ಹಂಜೆ 'ಜಾನುವಾರುಗಳನ್ನು ಮಾರಲು ಬರುವ ರೈತರಿಗೆ ಸ್ಥಳ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸುತ್ತಲಿನ ಗ್ರಾಮದ ರೈತರು ತಮ್ಮ ತಮ್ಮ ಸ್ಥಳಗಳನ್ನು ನಿಗದಿಪಡಿಸಿಕೊಳ್ಳಬೇಕು. ಅಂಗಡಿ ಮುಂಗಟ್ಟುಕಾರರು ಕಮಿಟಿಯವರನ್ನು ಸಂಪರ್ಕಿಸಿ ಜಾಗ ಪಡೆಯಬೇಕು' ಎಂದು ತಿಳಿಸಿದರು.

ಈ ವೇಳೆ ತಾತ್ಯಾಸಾಹೇಬ ಕಾಟೆ, ಶ್ರೀಕಾಂತ ಮಂಗಸೂಳೆ, ರಾವಸಾಹೇಬ ಕಾಟೆ, ಅದಪ್ಪಾ ಗೌರಾಜ, ಪೋಪಟ ಕೂಗೆ, ಅಜೀತ ಖೆಮಲಾಪುರೆ, ದಶರಥ ಕಾಟೆ, ಸುಭಾಶ ಹಂಜೆ, ಮಹಾವೀರ ಜನಾಜ, ಎಗಣ್ಣಾ ಕೂಗೆ, ಅಶೋಕ ಗೂರವ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ