ಆ್ಯಪ್ನಗರ

ಚಾತುರ್ಮಾಸ್ಯಕ್ಕೆ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಆಹ್ವಾನ

ಹುಕ್ಕೇರಿ: ತಾಲೂಕಿನ ಯರನಾಳ ಗ್ರಾಮದಲ್ಲಿ ಜು11ರಂದು ನಡೆಯಲಿರುವ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ...

Vijaya Karnataka 30 Jun 2019, 5:00 am
ಹುಕ್ಕೇರಿ: ತಾಲೂಕಿನ ಯರನಾಳ ಗ್ರಾಮದಲ್ಲಿ ಜು.11ರಂದು ನಡೆಯಲಿರುವ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಆಹ್ವಾನ ನೀಡಲಾಯಿತು. ಧಾರವಾಡದಲ್ಲಿರುವ ಅವರ ನಿವಾಸದಲ್ಲಿ ಆಚರಣೆ ಸಮಿತಿಯವರು ಪೂಜ್ಯರನ್ನು ಭೇಟಿ ಆಗಿ ಆಹ್ವಾನ ಪತ್ರ ನೀಡಿದರು. ವರ್ಧಮಾನ ಸಾಗರಜಿ ಸಂಘದ ನೇತೃತ್ವದಲ್ಲಿ ಚಾತುರ್ಮಾನ್ಯ ಕಾರ್ಯಕ್ರಮದ ನಿಮಿತ್ತ ಜು.11ರಂದು ಬೆಳಗ್ಗೆ 11 ಗಂಟೆಗೆ ಬಡಕುಂದ್ರಿಯ ವಿವೇಕಾನಂದ ಸರ್ಕಲ್‌ ವೃತ್ತದಿಂದ ಯರನಾಳದವರೆಗೆ ಕುಂಭಮೇಳ ನಡೆಯಲಿದೆ. ಶಾಂತಿ ಸಾಗರ ಮಹಾರಾಜರ ಶತಮಾನೋತ್ಸವದ ರಾಷ್ಟ್ರೀಯ ಸಂಯೋಜಕ ಮಹಾವೀರ ನಿಲಜಗಿ, ಸಮಿತಿ ಅಧ್ಯಕ್ಷ ಪುಷ್ಪಕ್ಕ ಹನುಮನ್ನವರ, ಚಂದು ಕಲ್ಮಣಿ ಬಾಹುಬಲಿ ಸೊಲ್ಲಾಪೂರೆ, ಪಪ್ಪುಗೌಡ ಪಾಟೀಲ, ಬಾಹುಬಲಿ ನಾಗನೂರಿ ಚಂದು ಸೇರಿದಂತೆ ಇನ್ನಿತರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
Vijaya Karnataka Web BEL-29 HUKKERI 04,

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ