ಆ್ಯಪ್ನಗರ

ಹುಕ್ಕೇರಿ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಿಗೆ ಆಮಂತ್ರಣ

ಸಂಕೇಶ್ವರ: ಪುಣ್ಯಭೂಮಿ ನಿಡಸೋಸಿಯಲ್ಲಿ ನಡೆಯುತ್ತಿರುವ ಹುಕ್ಕೇರಿ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಯ್ಕೆ ಸಮಿತಿಯು ನನ್ನನ್ನು ಸರ್ವಾಧ್ಯಕ್ಷನನ್ನಾಗಿ ...

Vijaya Karnataka 18 Feb 2019, 5:00 am
ಸಂಕೇಶ್ವರ : ಪುಣ್ಯಭೂಮಿ ನಿಡಸೋಸಿಯಲ್ಲಿ ನಡೆಯುತ್ತಿರುವ ಹುಕ್ಕೇರಿ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಯ್ಕೆ ಸಮಿತಿಯು ನನ್ನನ್ನು ಸರ್ವಾಧ್ಯಕ್ಷನನ್ನಾಗಿ ಆಯ್ಕೆ ಮಾಡಿರುವುದು ಪೂರ್ವಜನ್ಮದ ಪುಣ್ಯ ಎಂದು ಹಿರಿಯ ಸಾಹಿತಿ ಪ್ರಾ. ಎಲ್‌.ವಿ. ಪಾಟೀಲ ಹೇಳಿದರು.
Vijaya Karnataka Web BEL-17-SANK-01


ಅವರು ಪಟ್ಟಣದ ಹೌಸಿಂಗ್‌ ಕಾಲನಿಯಲ್ಲಿರುವ ತಮ್ಮ ಸ್ನೇಹಜೀವಿ ನಿವಾಸದಲ್ಲಿ ಹುಕ್ಕೇರಿ ಸಾಹಿತ್ಯ ಸಮ್ಮೇಳನ್ನು ಕಸಾಪ ತಾಲೂಕು ಅಧ್ಯಕ್ಷ ಪ್ರಕಾಶ ದೇಶಪಾಂಡೆ ಅವರಿಂದ ದಂಪತಿ ಸಮೇತ ಅಧಿಕೃತ ಆಮಂತ್ರಣ ಸ್ವೀಕರಿಸಿ ಮಾತನಾಡಿದರು.

ನಂತರ ಮಾತನಾಡಿದ ಕಸಾಪ ತಾಲೂಕಾಧ್ಯಕ್ಷ ದೇಶಪಾಂಡೆ ಅವರು 'ಗಡಿಭಾಗದಲ್ಲಿ ಕನ್ನಡ ನಾಡು-ನುಡಿ ಸಾಹಿತ್ಯದ ಬೆಳವಣಿಗೆಗೆ ಕಳೆದ ಹಲವು ವರ್ಷಗಳಿಂದ ಶ್ರಮಿಸುತ್ತಿರುವ ಪ್ರಾ. ಎಲ್‌.ವಿ. ಪಾಟೀಲ ಅವರನ್ನು ಸರ್ವಾನುಮತದಿಂದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಫೆ.24ರಂದು ನಿಡಸೋಸಿಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಸಮ್ಮೇಳನಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಆಗಮಿಸಲಿದ್ದಾರೆ ಎಂದರು.

ಈ ವೇಳೆ ಸಂಶೋಧಕ ಡಾ. ಶಿ.ಬಾ. ಪಾಟೀಲ, ಡಾ. ಗುರುಪಾದ ಮರಿಗುದ್ದಿ, ಡಾ. ರಾಜಶೇಖರ ಇಚ್ಚಂಗಿ, ನಂಜುಂಡಪ್ಪ, ಡಾ. ಜಿ.ಕೆ. ಹಿರೇಮಠ, ಕಾರ್ಯದರ್ಶಿ ಬಾಬು ಮುನ್ನೋಳಿ, ಪ್ರಕಾಶ ಅವಲಕ್ಕಿ, ಶಿವಾನಂದ ಗುಂಡಾಳಿ, ಎಂ.ಬಿ. ಖರಾಡೆ, ಅ.ಮ. ಮುಂಡಾಸಿ, ಕಿರಣ ನೇಸರಿ, ಕಾಡೇಶ ಬಸ್ತವಾಡೆ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ