ಆ್ಯಪ್ನಗರ

ಮೃತ ವ್ಯಕ್ತಿ ಕುಟುಂಬಕ್ಕೆ 20 ಸಾವಿರ ಪರಿಹಾರ ಚೆಕ್‌ ವಿತರಣೆ

ಪಾಲಬಾವಿ: ಕಬ್ಬು ಸಾಗಾಟದ ವೇಳೆ ಸಂಭವಿಸಿದ ಅವಘಡದಲ್ಲಿ ಮೃತಪಟ್ಟ ಕಪ್ಪಲಗುದ್ದಿ ಗ್ರಾಮದ ಕುಮಾರ ನಾಯಿಕ ಅವರ ಕುಟುಂಬಕ್ಕೆ ಸಮೀರವಾಡಿಯ ಗೋದಾವರಿ ಸಕ್ಕರೆ ...

Vijaya Karnataka 26 Jun 2019, 5:00 am
ಪಾಲಬಾವಿ : ಕಬ್ಬು ಸಾಗಾಟದ ವೇಳೆ ಸಂಭವಿಸಿದ ಅವಘಡದಲ್ಲಿ ಮೃತಪಟ್ಟ ಕಪ್ಪಲಗುದ್ದಿ ಗ್ರಾಮದ ಕುಮಾರ ನಾಯಿಕ ಅವರ ಕುಟುಂಬಕ್ಕೆ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯಿಂದ 20 ಸಾವಿರ ರೂ. ಪರಿಹಾರದ ಚೆಕ್‌ ಮಂಗಳವಾರ ವಿತರಿಸಲಾಯಿತು.
Vijaya Karnataka Web issuing 20 thousand compensation check to deceased family
ಮೃತ ವ್ಯಕ್ತಿ ಕುಟುಂಬಕ್ಕೆ 20 ಸಾವಿರ ಪರಿಹಾರ ಚೆಕ್‌ ವಿತರಣೆ


ಕಾರ್ಖಾನೆ ಪರವಾಗಿ ಗ್ರಾಪಂ ಉಪಾಧ್ಯಕ್ಷ ಬರಮಪ್ಪ ಬಾಗೋಜಿ ಅವರು ಚೆಕ್‌ನ್ನು ಕುಮಾರ ಅವರ ಪತ್ನಿ ಪ್ರಭಾವತಿ ಅವರಿಗೆ ಹಸ್ತಾಂತರಿಸಿದರು. ಕಳೆದ ವರ್ಷ ಡಿ.16ರಂದು ಗ್ರಾಮದ ನಿವಾಸಿ ಕುಮಾರ ಕಲ್ಲಪ್ಪ ನಾಯಿಕ ಅವರು ಕಬ್ಬು ಕಟಾವು ಹಂಗಾಮಿನಲ್ಲಿ ಬೆಳಗ್ಗೆ ಟ್ರ್ಯಾಕ್ಟರ್‌ ಕ್ಯಾರಿಯರ್‌ನಲ್ಲಿ ಕಬ್ಬು ಹೇರಿಕೊಳ್ಳುತ್ತಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದು ತೀವ್ರ ಗಾಯಗೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.

ಚೆಕ್‌ ವಿತರಣೆ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಲಕ್ಕಪ್ಪ ಕುರನಿಂಗ, ಈರಪ್ಪ ಬಂಗಿ, ಲಕ್ಷ ್ಮಣ ಕುಡಲಗಿ, ಮಹಾದೇವ ನಾಯಿಕ, ನೀಲವ್ವ ನಾಯಿಕ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ