ಇಂಗಳಿ : ಪ್ರಧಾನಿ ನರೆಂದ್ರ ಮೋದಿಯವರನ್ನು ಎದುರಿಸಲು ಮಹಾಗಠಬಂಧನ ಹೆಸರಿನಲ್ಲಿ ಒಂದಾಗಿರುವ ಪ್ರತಿಪಕ್ಷ ಗಳು ಎಷ್ಟೇ ತಿಪ್ಪರಲಾಗ ಹಾಕಿದರೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರು ಎಂದು ನಿರ್ಧರಿಸುವಲ್ಲಿ ವಿಫಲವಾಗಿರುವ ಮಹಾಗಠಬಂಧನದ ಪಕ್ಷಗಳು ಸೂಕ್ತ ನಾಯಕನಿಲ್ಲದೆ ಅಧಿಕಾರಕ್ಕಾಗಿ ಒಂದಾಗಿವೆ. ಈಗಾಗಲೇ ಎನ್ಡಿಎ ಮಿತ್ರ ಪಕ್ಷ ಗಳು ದಕ್ಷಿಣ ಭಾರತದ ತಮಿಳನಾಡು ಮತ್ತು ಮಹಾರಾಷ್ಟ್ರದಲ್ಲಿ ಸ್ಥಾನ ಹೊಂದಾಣಿಕ ಮಾಡಿಕೊಂಡು ಚುನಾವಣೆ ಸನ್ನದ್ಧವಾಗಿವೆ ಆದರೆ ದೇಶದ ಜನತೆ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಮಂತ್ರಿ ಮಾಡಲು ಪಣ ತೊಟ್ಟಿದೆ ಎಂದರು.
ಜಿಲ್ಲೆಯ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷ ದ ಅಭ್ಯರ್ಥಿಗಳ ಗೆಲವು ನಿಶ್ಚಿತವಾಗಿದೆ ಬೆಳಗಾವಿ ಕ್ಷೇತ್ರ ಕಳೆದ ಮೂರು ಅವಧಿಯಿಂದ ಪಕ್ಷ ದ ಹಿಡಿತದಲ್ಲಿದ್ದು ಈ ಬಾರಿಯೂ ಪಕ್ಷ ದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಮತ್ತು ಚಿಕ್ಕೋಡಿ ಕ್ಷೇತ್ರ ಕಾಂಗ್ರೆಸ್ ಪಕ್ಷ ದಿಂದ ಈ ಸಲ ಬಿಜೆಪಿ ವಶಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಬೂತ್ ಮಟ್ಟದಿಂದ ಬಿಜೆಪಿ ಕಾರ್ಯಕರ್ತರನ್ನು ಸಂಘಟಿಸುತ್ತಿದೆ ಎಂದರು.
ಲೋಕಸಭಾ ಚುನಾವಣೆ ಸಿದ್ದತೆಗಾಗಿ ಪಕ್ಷ ಫೆ. 12 ರಿಂದ 'ನನ್ನ ಪರಿವಾರ ಬಿಜೆಪಿ ಪರಿವಾರ' ಕಾರ್ಯಕ್ರಮ ಆಯೋಜಿಸಿದೆ. ಇದರಲ್ಲಿ 5 ಕೋಟಿ ಮನೆಗಳ ಮೇಲೆ ಪಕ್ಷ ದ ಧ್ವಜ ಹಾರಲಿದೆ. 24 ರಂದು ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಬಿಜೆಪಿ ಕಾರ್ಯಕರ್ತರು ಪ್ರತಿ ಮನೆಗೆ ಭೇಟಿ ನೀಡಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳ ಕರ ಪತ್ರ ಹಂಚುವ ಮೂಲಕ ಬೂತ್ ಮಟ್ಟದಲ್ಲಿ 5 ವರ್ಷದ ಸಾಧನೆ ತಿಳಿಸುವ ಕೆಲಸ ಮಾಡುವರು ಎಂದರು.
ಫೆ. 26 ರಂದು ಕಮಲ ಜ್ಯೋತಿ ಸಂಕಲ್ಪ ಯಾತ್ರೆ ನಡೆಸಲಾಗುವುದು. ಅಂದು ಕೇಂದ್ರ ಸರಕಾರದ ಫಲಾನುಭವಿಗಳನ್ನು ಗುರುತಿಸಿ ಅವರ ಮನೆಯಲ್ಲಿ ದೀಪ ಹಚ್ಚುವ ಮೂಲಕ ಕಮಲ ಜ್ಯೋತಿ ಕಾರ್ಯಕ್ರಮ ನಡೆಸಲಾಗುವುದಲ್ಲದೆ ಫೆ. 28 ರಂದು 'ಮೆರಾ ಬೂತ್ ಮಜಬೂತ್' ಎನ್ನುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೇರ ಸಂವಾದ ನಡೆಸುವರು ಎಂದರು.
ಮಾ. 2 ರಂದು ರಾಜ್ಯ 224 ವಿಧಾನಸಭಾ ಕ್ಷೇತ್ರಗಳಲ್ಲಿ ವಿಜಯ ಸಂಕಲ್ಪ ಮೋಟಾರ್ ರಾರಯಲಿ ನಡೆಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರ ಬೈಕ್ಗಳ ಮೂಲಕ ರಾರಯಲಿ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿ ಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ದ ಗೆಲುವಿಗೆ ಶ್ರಮಿಸಲಾಗುವುದು ಎಂದರು.
ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರು ಎಂದು ನಿರ್ಧರಿಸುವಲ್ಲಿ ವಿಫಲವಾಗಿರುವ ಮಹಾಗಠಬಂಧನದ ಪಕ್ಷಗಳು ಸೂಕ್ತ ನಾಯಕನಿಲ್ಲದೆ ಅಧಿಕಾರಕ್ಕಾಗಿ ಒಂದಾಗಿವೆ. ಈಗಾಗಲೇ ಎನ್ಡಿಎ ಮಿತ್ರ ಪಕ್ಷ ಗಳು ದಕ್ಷಿಣ ಭಾರತದ ತಮಿಳನಾಡು ಮತ್ತು ಮಹಾರಾಷ್ಟ್ರದಲ್ಲಿ ಸ್ಥಾನ ಹೊಂದಾಣಿಕ ಮಾಡಿಕೊಂಡು ಚುನಾವಣೆ ಸನ್ನದ್ಧವಾಗಿವೆ ಆದರೆ ದೇಶದ ಜನತೆ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಮಂತ್ರಿ ಮಾಡಲು ಪಣ ತೊಟ್ಟಿದೆ ಎಂದರು.
ಜಿಲ್ಲೆಯ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷ ದ ಅಭ್ಯರ್ಥಿಗಳ ಗೆಲವು ನಿಶ್ಚಿತವಾಗಿದೆ ಬೆಳಗಾವಿ ಕ್ಷೇತ್ರ ಕಳೆದ ಮೂರು ಅವಧಿಯಿಂದ ಪಕ್ಷ ದ ಹಿಡಿತದಲ್ಲಿದ್ದು ಈ ಬಾರಿಯೂ ಪಕ್ಷ ದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಮತ್ತು ಚಿಕ್ಕೋಡಿ ಕ್ಷೇತ್ರ ಕಾಂಗ್ರೆಸ್ ಪಕ್ಷ ದಿಂದ ಈ ಸಲ ಬಿಜೆಪಿ ವಶಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಬೂತ್ ಮಟ್ಟದಿಂದ ಬಿಜೆಪಿ ಕಾರ್ಯಕರ್ತರನ್ನು ಸಂಘಟಿಸುತ್ತಿದೆ ಎಂದರು.
ಲೋಕಸಭಾ ಚುನಾವಣೆ ಸಿದ್ದತೆಗಾಗಿ ಪಕ್ಷ ಫೆ. 12 ರಿಂದ 'ನನ್ನ ಪರಿವಾರ ಬಿಜೆಪಿ ಪರಿವಾರ' ಕಾರ್ಯಕ್ರಮ ಆಯೋಜಿಸಿದೆ. ಇದರಲ್ಲಿ 5 ಕೋಟಿ ಮನೆಗಳ ಮೇಲೆ ಪಕ್ಷ ದ ಧ್ವಜ ಹಾರಲಿದೆ. 24 ರಂದು ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಬಿಜೆಪಿ ಕಾರ್ಯಕರ್ತರು ಪ್ರತಿ ಮನೆಗೆ ಭೇಟಿ ನೀಡಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳ ಕರ ಪತ್ರ ಹಂಚುವ ಮೂಲಕ ಬೂತ್ ಮಟ್ಟದಲ್ಲಿ 5 ವರ್ಷದ ಸಾಧನೆ ತಿಳಿಸುವ ಕೆಲಸ ಮಾಡುವರು ಎಂದರು.
ಫೆ. 26 ರಂದು ಕಮಲ ಜ್ಯೋತಿ ಸಂಕಲ್ಪ ಯಾತ್ರೆ ನಡೆಸಲಾಗುವುದು. ಅಂದು ಕೇಂದ್ರ ಸರಕಾರದ ಫಲಾನುಭವಿಗಳನ್ನು ಗುರುತಿಸಿ ಅವರ ಮನೆಯಲ್ಲಿ ದೀಪ ಹಚ್ಚುವ ಮೂಲಕ ಕಮಲ ಜ್ಯೋತಿ ಕಾರ್ಯಕ್ರಮ ನಡೆಸಲಾಗುವುದಲ್ಲದೆ ಫೆ. 28 ರಂದು 'ಮೆರಾ ಬೂತ್ ಮಜಬೂತ್' ಎನ್ನುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೇರ ಸಂವಾದ ನಡೆಸುವರು ಎಂದರು.
ಮಾ. 2 ರಂದು ರಾಜ್ಯ 224 ವಿಧಾನಸಭಾ ಕ್ಷೇತ್ರಗಳಲ್ಲಿ ವಿಜಯ ಸಂಕಲ್ಪ ಮೋಟಾರ್ ರಾರಯಲಿ ನಡೆಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರ ಬೈಕ್ಗಳ ಮೂಲಕ ರಾರಯಲಿ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿ ಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ದ ಗೆಲುವಿಗೆ ಶ್ರಮಿಸಲಾಗುವುದು ಎಂದರು.