ಆ್ಯಪ್ನಗರ

‘ನಾವು ಪ್ರಚಾರಕ್ಕೆ ಹೋದಲ್ಲಿ ಯಾರೂ ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿಲ್ಲ, ಬಿಜೆಪಿ ಗೆಲುವು ಖಚಿತ’; ಜಗದೀಶ ಶೆಟ್ಟರ್

ಬೆಳಗಾವಿ ಲೋಕಸಭಾ ಉಪ ಚುನಾವಣೆ ವಿಷಯವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಸೇರಿದಂತೆ ಯಾರು ಏನೇ ಪ್ರಯತ್ನ ಮಾಡಿದರೂ ಬಿಜೆಪಿ ಗೆಲುವು ತಪ್ಪಿಸಲಾಗದು ಎಂದ ಜಗದೀಶ್ ಶೆಟ್ಟರ್, ಬೆಳಗಾವಿ ಗಡಿ ವಿಚಾರವಾಗಿ ಬಿಜೆಪಿ ವಿರುದ್ಧ ಕಿಡಿಕಾರಿದ್ದ ಶಿವಸೇನೆ ಸಂಸದ ಸಂಜಯ ರಾವತ್‌ ಪ್ರಚಾರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.

Vijaya Karnataka Web 15 Apr 2021, 8:25 am
ಬೆಳಗಾವಿ: ನಾವು ಪ್ರಚಾರಕ್ಕೆ ಹೋದಲ್ಲಿ ಯಾರೂ ಕೂಡ ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿಲ್ಲ. ಹಾಗಾಗಿ ಈ ಉಪಚುನಾವಣೆಯಲ್ಲಿ ಬೆಲೆ ಏರಿಕೆ ಪರಿಣಾಮ ಬೀರಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.
Vijaya Karnataka Web Jagadish Shettar
ಸಂಗ್ರಹ ಚಿತ್ರ


ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಬೆಲೆ ಏರಿಕೆಯನ್ನೇ ಇಶ್ಯೂ ಮಾಡಿದರೆ ಪ್ರಯೋಜನ ಆಗದು. ನರೇಂದ್ರ ಮೋದಿ ನಾಯಕತ್ವಕ್ಕೆ ಜನ ತುಂಬು ಹೃದಯದಿಂದ ಬೆಂಬಲಿಸುತ್ತಿದ್ದಾರೆ. ಅದೇ ಟ್ರೆಂಡ್‌ ಇವತ್ತಿಗೂ ಮುಂದುವರಿದಿದೆ. ಯಾರೇ ಡಿಸ್ಟರ್ಬ್‌ ಮಾಡಿದರೂ ಬದಲಾವಣೆ ಸಾಧ್ಯವಿಲ್ಲ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
‘ನಾವು ಹಿಟ್ಲರ್‌ ಅಪ್ಪಂದಿರು. ದಾದಾಗಿರಿ ಹುಟ್ಟು ಹಾಕಿದ್ದೇ ಶಿವಸೇನೆ’; ಬಿಜೆಪಿ ವಿರುದ್ಧ ಶಿವಸೇನೆ ಕಿಡಿ
ಬೆಳಗಾವಿ ಲೋಕಸಭಾ ಉಪ ಚುನಾವಣೆ ವಿಷಯವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಸೇರಿದಂತೆ ಯಾರು ಏನೇ ಪ್ರಯತ್ನ ಮಾಡಿದರೂ ಬಿಜೆಪಿ ಗೆಲುವು ತಪ್ಪಿಸಲಾಗದು ಎಂದ ಜಗದೀಶ್ ಶೆಟ್ಟರ್, ಬೆಳಗಾವಿ ಗಡಿ ವಿಚಾರವಾಗಿ ಬಿಜೆಪಿ ವಿರುದ್ಧ ಕಿಡಿಕಾರಿದ್ದ ಶಿವಸೇನೆ ಸಂಸದ ಸಂಜಯ ರಾವತ್‌ ಪ್ರಚಾರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ