ಆ್ಯಪ್ನಗರ

ಮಳೆಗಾಗಿ ದೇವ, ದೇವತೆಯರಿಗೆ ಜಲಾಭಿಷೇಕ

ಹುಕ್ಕೇರಿ: ಈ ವರ್ಷ ಉತ್ತಮ ಮಳೆಯಾಗಲಿ ಎಂದು ತಾಲೂಕಿನ ಎಲಿಮುನ್ನೋಳಿ ಗ್ರಾಮದ ಜನರು ದೇವರಿಗೆ ಹರಕೆ ಹೊತ್ತು ಗ್ರಾಮದೇವತೆ ಮಹಾಲಕ್ಷ್ಮೀ ದೇವಿ, ರಾಮಲಿಂಗೇಶ್ವರ ...

Vijaya Karnataka 30 Jun 2019, 5:00 am
ಹುಕ್ಕೇರಿ: ಈ ವರ್ಷ ಉತ್ತಮ ಮಳೆಯಾಗಲಿ ಎಂದು ತಾಲೂಕಿನ ಎಲಿಮುನ್ನೋಳಿ ಗ್ರಾಮದ ಜನರು ದೇವರಿಗೆ ಹರಕೆ ಹೊತ್ತು ಗ್ರಾಮದೇವತೆ ಮಹಾಲಕ್ಷ್ಮೀ ದೇವಿ, ರಾಮಲಿಂಗೇಶ್ವರ ದೇವಸ್ಥಾನ ಸೇರಿದಂತೆ ಗ್ರಾಮದ ಎಲ್ಲ ದೇವಸ್ಥಾನಕ್ಕೆ ತೆರಳಿದ ರೈತರು, ಯುವಕರು ದೇವರಿಗೆ ಜಲಾಭಿಷೇಕ ಮಾಡಿದರು.
Vijaya Karnataka Web BEL-29 HUKKERI 01


ಹರಕೆಯಂತೆ ಪ್ರತಿ ಶುಕ್ರವಾರ ಗ್ರಾಮದಲ್ಲಿ ಕೃಷಿ ಚಟುವಟಿಕೆ, ಮನೆಗಳಲ್ಲಿ ಕುಟ್ಟುವ, ಬೀಸುವ ಕೆಲಸ, ಭೂಮಿಯಲ್ಲಿ ಎತ್ತುಗಳ ದುಡಿಮೆಯನ್ನು ನಿಷೇಧಿಸಲಾಗಿದ್ದು, ಕರಿದ ಪದಾರ್ಥವನ್ನೂ ಈ ದಿನ ಮಾಡುವಂತಿಲ್ಲ.

ಅಲ್ಲದೆ ಶುಕ್ರವಾರದ ದಿನ ಗ್ರಾಮದಿಂದ ಬೇರೆಕಡೆಗೆ ಕೆಲಸಕ್ಕೆ ಹೋಗುವವರು ಊಟದ ಬುತ್ತಿಯನ್ನು ಸಹ ತೆಗೆದುಕೊಂಡು ಹೋಗುವಂತಿಲ್ಲ. ಹೀಗೆ ಐದು ಶುಕ್ರವಾರಗಳ ನಿಯಮ ಪಾಲಿಸಿ ಕೊನೆಯ ಶುಕ್ರವಾರ ಎಲ್ಲ ದೇವಸ್ಥಾನಗಳಿಗೆ ತೆರಳಿ ಜಲಾಭಿಷೇಕ ಪೂಜೆ ಪ್ರಾರ್ಥನೆ, ಭಜನೆ ಮತ್ತು ಪಲ್ಲಕ್ಕಿ ಉತ್ಸವ ಹಮ್ಮಿಕೊಂಡು ಮಳೆರಾಯನನ್ನು ಪಾರ್ಥಸುತ್ತಾರೆ. ಕೊನೆಯಲ್ಲಿ ಗ್ರಾಮದ ಸಾರ್ವಜನಿರಿಗೆ ಪ್ರಸಾದ ವ್ಯವಸ್ಥೆ ಮಾಡಿವುದರೊಂದಿಗೆ ಹರಕೆ ತೀರಿಸುವುದು ವಿಶೇಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ