ಆ್ಯಪ್ನಗರ

ಬೆಳಗಾವಿಯಲ್ಲಿ ಜ.17 ರಂದು ಜನ ಸೇವಕ ಸಮಾವೇಶ ಸಮಾರೋಪ; ಸಚಿವ ರಮೇಶ್ ಜಾರಕಿಹೊಳಿ ಪರಿಶೀಲನೆ

ಜನವರಿ 17ರಂದು ಬೆಳಗಾವಿಯಲ್ಲಿ ಜನ ಸೇವಕ ಸಮಾವೇಶ ಸಮಾರೋಪ ನಡೆಯಲಿದ್ದು, ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಇಂದು(ಜ.13)ರಂದು ಪರಿಶೀಲನೆ ನಡೆಸಿದರು.

Vijaya Karnataka Web 13 Jan 2021, 1:50 pm
ಬೆಳಗಾವಿ : ಜನ ಸೇವಕ ಸಮಾವೇಶದ ಸಮಾರೋಪ ಸಮಾರಂಭ ನಡೆಯುವ ಜಿಲ್ಲಾ ಕ್ರೀಡಾಂಗಣಕ್ಕೆ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web ರಮೇಶ್ ಜಾರಕಿ ಹೊಳಿ ಪರಿಶೀಲನೆ


ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜ.17 ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಜನ ಸೇವಕ ಸಮಾವೇಶದ ಸಮಾರೋಪ‌ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಜನತೆ ಉದ್ದೇಶಿಸಿ ಮಾತನಾಡಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇಡೀ ಸಚಿವ ಸಂಪುಟ ಸಮಾವೇಶದಲ್ಲಿ ಭಾಗವಹಿಸಲಿದೆ. 3-4 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಕಾರ್ಯಕರ್ತರು ಉತ್ಸಾಹದಿಂದ ಸಮಾವೇಶದ ಕೆಲಸ ಮಾಡುತ್ತಿದ್ದಾರೆ. ಮೊದಲಿನ ಪಕ್ಷದಲ್ಲಿ ಎಲ್ಲ ಕೆಲಸವೂ ನಾವೇ ಮಾಡಬೇಕಿತ್ತು. ಈಗ ಎಲ್ಲವೂ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಕೆಲಸ ಮಾಡಲು ಖುಷಿ ಆಗುತ್ತಿದೆ ಎಂದರು.
ಎಸ್ಟಿ ಮೀಸಲು ಏರಿಕೆ ಆಗದಿದ್ದರೆ ಶ್ರೀಗಳು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ: ರಮೇಶ್‌ ಜಾರಕಿಹೊಳಿ
ನಾವು ಅಂದುಕೊಂಡಂತೆ ಸಚಿವ ಸಂಪುಟ ವಿಸ್ತರಣೆ ಆಗುತ್ತಿದೆ. ಏಳು ಜನರು ಸಚಿವರಾಗಲಿದ್ದಾರೆ. ಸಚಿವರಾದವರು ಉತ್ಸಾಹ ಕಳೆದುಕೊಳ್ಳದೇ ಮಾರ್ಚ್ ಅಥವಾ ಎಪ್ರಿಲ್ ನಲ್ಲಿ ಸಚಿವ ಸಂಪುಟದ ಪುನರ್ ರಚನೆ ಸಮಯದಲ್ಲಿ ಅವಕಾಶ ಸಿಗಲಿದೆ. ಹಾಗಾಗಿ ಎಲ್ಲರೂ ಸಿಎಂ ಯಡಿಯೂರಪ್ಪ ಅವರ ಕೈಬಲಪಡಿಸಿ, ಮುಂದಿನ ಅವಧಿಯಲ್ಲಿ ಉತ್ತಮ ಸರ್ಕಾರ ನೀಡಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮೋದಿ ನಮಗೆ ಆದರ್ಶಪ್ರಾಯ ನಾಯಕ : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ .

ತಾಪಂ ಮತ್ತು ಜಿಪಂ ಚುನಾವಣೆ ನಂತರ ದೊಡ್ಡ ಪ್ರಮಾಣದಲ್ಲಿ ಸಚಿವ ಸಂಪುಟ ಪುನರ್ ರಚನೆ ಆಗಲಿದೆ. ಆ ವೇಳೆ ಎಲ್ಲರಿಗೂ ಅವಕಾಶ ಸಿಗಬಹುದು. ಈ ಸರಕಾರ ರಚನೆ ಆಗಲು ಪ್ರಮುಖ ಪಾತ್ರ ವಹಿಸಿದ ಸಿ.ಪಿ.ಯೋಗೇಶ್ವರ ಅವರಿಗೆ ಸಚಿವ ಸ್ಥಾನ ನೀಡುತ್ತಿರುವುದು ಬಹಳಷ್ಟು ಸಂತೋಷವಾಗಿದೆ. ಇನ್ನೂ ಮಹೇಶ ಕುಮಠಳ್ಳಿ, ಎಚ್.ವಿಶ್ವನಾಥ, ಮಾಲೀಕಯ್ಯ ಗುತ್ತಿಗೆದಾರ್ ಅವರಿಗೆ ಸ್ಥಾನಮಾನ ಸಿಗಬೇಕಿದೆ. ಮಾಲೀಕಯ್ಯ ಗುತ್ತೆದಾರ ಅವರು ಕಲ್ಬುರ್ಗಿ ಪ್ರಮುಖ ನಾಯಕರನ್ನು ಸೋಲಿಸಿದವರು. ಅವರು ನನಗಿಂತಲೂ ಶಕ್ತಿಶಾಲಿ ಇದ್ದಾರೆ. ಅವರಿಗೂ ಇನ್ನೂ ಸ್ಥಾನಮಾನ ಸಿಗಬೇಕಿದೆ. ವಿಶ್ವನಾಥ ಅವರು ಸಚಿವರಾಗಲು ಕಾನೂನಿನ ತೊಡಕಿದೆ. ಇಲ್ಲದಿದ್ದರೆ ಸಚಿವರಾಗುತ್ತಿದ್ದರು ಎಂದರು.
ನಾವು ಒರಿಜಿನಲ್‌ ಜನ ಸಂಘ..! ಮೂಲ-ವಲಸಿಗರ ಕಿತ್ತಾಟಕ್ಕೆ ಫುಲ್‌ ಸ್ಟಾಪ್‌ ಇಟ್ರಾ ರಮೇಶ್‌ ಜಾರಕಿಹೊಳಿ..?

ಮಾಹಿತಿ ಪ್ರಕಾರ ನಾಗೇಶ ಸೇರಿ ಯಾವುದೇ ಸಚಿವರನ್ನು ಕೈಬಿಡುತ್ತಿಲ್ಲ. ಉಮೇಶ ಕತ್ತಿ ಅವರಿಗೆ ಸಚಿವ ಸ್ಥಾನ ಮೊದಲೇ ಸಿಗಬೇಕಿತ್ತು. ಈಗ ಸಚಿವರಾಗುತ್ತಿರುವುದಕ್ಕೆ ಖುಷಿ ಇದೆ ಎಂದರು.

ಬೆಂಗಳೂರು ಮತ್ತು ಬೆಳಗಾವಿ ಹೆಚ್ಚಿನ ಸಚಿವ ಸ್ಥಾನ ಸಿಗುತ್ತಿರುವುದಕ್ಕೆ ರೇಣುಕಾಚಾರ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರಕ್ರಿಯಿಸಿದ ಸಚಿವ ಜಾರಕಿಹೊಳಿ ಅವರು, ಸಂದರ್ಭಕ್ಕೆ ಅನುಗುಣವಾಗಿ ಆಗಿದೆ. ಹೊಸ ಸರಕಾರ ರಚನೆ ಆಗಿಲ್ಲ. ಅದನ್ನು ಸಿಎಂ ಅವರು ಸರಿಪಡಿಸುತ್ತಾರೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ