ಆ್ಯಪ್ನಗರ

ನಾಳೆ ಸ್ವಗ್ರಾಮ ಜುಗೂಳಕ್ಕೆ ಜಂಗಲ್‌ವಾಲೆ ಬಾಬಾ

ಕಾಗವಾಡ: ರಾಷ್ಟ್ರಸಂತ ಚಿನ್ಮಯಸಾಗರ ಮುನಿ ಮಹಾರಾಜ(ಜಂಗಲವಾಲೆ ಬಾಬಾ)ರು ಚಾತುರ್ಮಾಸ ನಿಮಿತ್ತ ಜು11 ರಂದು ಅವರ ಸ್ವಗ್ರಾಮವಾದ ಜುಗೂಳಕ್ಕೆ ಆಗಮಿಸಲಿದ್ದಾರೆ...

Vijaya Karnataka 10 Jul 2019, 5:00 am
ಕಾಗವಾಡ : ರಾಷ್ಟ್ರಸಂತ ಚಿನ್ಮಯಸಾಗರ ಮುನಿ ಮಹಾರಾಜ(ಜಂಗಲವಾಲೆ ಬಾಬಾ)ರು ಚಾತುರ್ಮಾಸ ನಿಮಿತ್ತ ಜು.11 ರಂದು ಅವರ ಸ್ವಗ್ರಾಮವಾದ ಜುಗೂಳಕ್ಕೆ ಆಗಮಿಸಲಿದ್ದಾರೆ.
Vijaya Karnataka Web BEL-09 KAGWAD 1 NEWS PHOTO


ಶ್ರೀಗಳನ್ನು ಬರಮಾಡಿಕೊಳ್ಳಲು ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಜಾರ್ಖಂಡ್‌, ರಾಜಸ್ಥಾನ, ಮಧ್ಯಪ್ರದೇಶ ದೇಶದ ಅನೇಕ ರಾಜ್ಯಗಳ ಉದ್ಯಮಿಗಳು, ಧರ್ಮಪ್ರೇಮಿಗಳು ಆಗಮಿಸಲಿದ್ದಾರೆ.

ಜುಗೂಳ ಗ್ರಾಮ ಪಂಚಾಯಿತಿ, ನಾನಾ ಸಂಘ ಸಂಸ್ಥೆಗಳ ಮುಖಂಡರು ಒಂದುಗೂಡಿ ಈಗಾಗಲೇ ಗ್ರಾಮದಲ್ಲಿ ಸ್ವಚ್ಛತೆ ಕೈಗೊಂಡಿದ್ದಾರೆ.

ಶ್ರೀಗಳು 11 ರಂದು ಮಹಾರಾಷ್ಟ್ರದ ನೆರೆಯ ಗ್ರಾಮ ಬುಬನಾಳ, ಅಲಾಸ್‌, ಮಂಗಾವತಿ ಮುಖಾಂತರ ಜುಗೂಳ ಗ್ರಾಮಕ್ಕೆ ಆಗಮಿಸುತ್ತಿದ್ದು ಜು. 21 ರಂದು ಚಾತುರ್ಮಾಸ ಕಲಶ ಸ್ಥಾಪನೆ ನೆರವೇರಲಿದೆ.

ಮುಂದಿನ 4 ತಿಂಗಳ ಕಾಲ ಇಲ್ಲಿ ಸಾಮಾಜಿಕ ಸಮಾನತೆ, ವ್ಯಸನಮುಕ್ತಿಗಾಗಿ ವಿಶೇಷ ಪ್ರವಚನಗಳ ಮುಖಾಂತರ ಯುವಕರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ