ಆ್ಯಪ್ನಗರ

ಮನೆಗಳ ಬೀಗ ಮುರಿದು ಚಿನ್ನಾಭರಣ ಕಳವು

ಬೆಳಗಾವಿ: ತಾಲೂಕಿನ ಮಚ್ಛೆ, ಶಿಂದೋಳ್ಳಿ ಮತ್ತು ಹಿಂಡಲಗಾದಲ್ಲಿ ...

Vijaya Karnataka 12 Jan 2020, 5:00 am
ಬೆಳಗಾವಿ: ತಾಲೂಕಿನ ಮಚ್ಛೆ, ಶಿಂದೋಳ್ಳಿ ಮತ್ತು ಹಿಂಡಲಗಾದಲ್ಲಿಶುಕ್ರವಾರ ರಾತ್ರಿ ಸರಣಿ ಮನೆಗಳ್ಳತನ ನಡೆದಿದ್ದು, ಕಳ್ಳರು ಚಿನ್ನಾಭರಣ ಮತ್ತು ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.
Vijaya Karnataka Web 11CRIME1085453
ಶಿಂದೋಳ್ಳಿ ಗ್ರಾಮದ ಸಿಸಿ ಕ್ಯಾಮೆರಾದಲ್ಲಿದಾಖಲಾಗಿರುವ ಕಳ್ಳರು.


ಮಚ್ಛೆ ಗ್ರಾಮದ ಮೂರು ಮನೆಗಳಲ್ಲಿಶುಕ್ರವಾರ ಕಳ್ಳತನ ನಡೆದಿದೆ. ಕಳ್ಳರು ಗ್ರಾಮದ ಭೈರವನಾಥ ನಗರದ ಪರಶುರಾಮ ನಿಲಜಕರ ಮತ್ತು ಮಾಜಿ ಯೋಧ ಭರಮಾನಿ ಪಾಟೀಲ ಅವರ ಮನೆಯ ಬೀಗ ಮುರಿದು ನಗದು ದೋಚಿದ್ದಾರೆ. ಭರಮಾನಿ ಅವರ ಮನೆಯಲ್ಲಿದ್ದ ಮದ್ಯದ ಬಾಟಲಿಗಳನ್ನೂ ಕಳ್ಳರು ಕೊಂಡೊಯ್ದಿದ್ದಾರೆ. ಇದೇ ವೇಳೆ ಶೋಭಾ ಮಾನಶೆಟ್ಟಿ ಎನ್ನುವವರ ಮನೆಗೆ ನುಗ್ಗಿದ ಕಳ್ಳರು 2 ತೊಲಿ ಚಿನ್ನಾಭರಣ ಕದ್ದಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿಂಧೋಳ್ಳಿಯಲ್ಲಿ: ತಾಲೂಕಿನ ಶಿಂದೋಳ್ಳಿ ಗ್ರಾಮದ ಶ್ರೀರಾಮ ಕಾಲನಿಯ ದೀಪಕ ಹಡಪದ ಅವರ ಮನೆ ಬೀಗ ಮುರಿದ ಕಳ್ಳರು 2 ತೊಲಿ ಚಿನ್ನಾಭರಣ, 10 ತೊಲಿ ಬೆಳ್ಳಿ ಆಭರಣದ ಮತ್ತು 10 ಸಾವಿರ ರೂ. ನಗದು ದೋಚಿದ್ದಾರೆ. ಅಲ್ಲದೆ, ಇದೇ ಪ್ರದೇಶದ ಇನ್ನೊಂದು ಮನೆಯ ಬಿಗ ಮುರಿದ ಕಳ್ಳರು ಅಲ್ಲಿಏನೂ ಸಿಗದೆ ವಾಪಸ್ಸಾಗಿದ್ದಾರೆ.

ಕಳ್ಳತನವಾದ ಮನೆಗಳ ಸಮೀಪದ ಅಂಗಡಿಯಲ್ಲಿಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿಕಳ್ಳರ ಚಲನವಲನಗಳು ದಾಖಲಾಗಿವೆ. ಪ್ರಕರಣ ದಾಖಲಿಸಿಕೊಂಡಿರುವ ಮಾರಿಹಾಳ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

ಧರ್ಮದೇಟು: ಹಿಂಡಲಗಾ ಗ್ರಾಮದಲ್ಲಿಮನೆ ಕಳ್ಳತನ ಯತ್ನ ನಡೆಸಿದ್ದ ವ್ಯಕ್ತಿಯನ್ನು ಹಿಡಿದ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಪ್ರಕರಣ ದಾಖಲಾಗಿದೆ.
ರುಕ್ಷ್ಮಿಣಿ ನಗರದ ರವಿ ಬಾಬು ಹಾಲಟ್ಟಿ (21) ಬಂಧಿತ ಆರೋಪಿ. ಹಿಂಡಲಗಾ ಗ್ರಾಮದ ಸಿದ್ಧಾರ್ಥ ನಗರದ ವಿಲಾಸ ಹಿತ್ತಲಮನಿ ಕುಟುಂಬದ ಸದಸ್ಯರು ಶುಕ್ರವಾರ ಸವದತ್ತಿ ಯಲ್ಲಮ್ಮನ ಗುಡ್ಡದ ಜಾತ್ರೆಗೆ ತೆರಳಿದ್ದರು. ಮನೆಯಲ್ಲಿಯಾರೂ ಇಲ್ಲದ ಸಮಯ ಸಾಧಿಸಿದ ಕಳ್ಳರು ಮನೆಗೆ ಹಾಕಿದ್ದ ಕೀಲಿ ಮುರಿದು ಒಳನುಗ್ಗಿದ್ಧಾರೆ. ಮನೆಯಲ್ಲಿಸದ್ದು ಆಗುತ್ತಿರುವುದನ್ನು ಗಮನಿಸಿ ಪಕ್ಕದ ಮನೆಯವರು ಹೊರಗೆ ಬಂದು ಜನರನ್ನು ಸೇರಿಸುತ್ತಿದ್ದಂತೆ ಎಚ್ಚರಗೊಂಡ ಕಳ್ಳರು ಮನೆ ಚಾವಣಿ ಮೇಲೇರಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುವಾಗ ರವಿ ಹಾಲಟ್ಟಿ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದು ಸ್ಥಳೀಯರಿಗೆ ಸಿಕ್ಕಿಹಾಕಿಕೊಂಡಿದ್ದಾನೆ. ಇನ್ನುಳಿದ ನಾಲ್ವರ ವಿರುದ್ಧ ಗ್ರಾಮೀಣ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ