ಆ್ಯಪ್ನಗರ

ಮನೆಗೆ ನುಗ್ಗಿ ಚಿನ್ನಾಭರಣ, ನಗದು ಕಳುವು

ಕಕಮರಿ : ಗ್ರಾಮದ ಮನೆಯೊಂದಕ್ಕೆ ಶನಿವಾರ ರಾತ್ರಿ ...

Vijaya Karnataka 11 Nov 2019, 5:00 am
ಕಕಮರಿ: ಗ್ರಾಮದ ಮನೆಯೊಂದಕ್ಕೆ ಶನಿವಾರ ರಾತ್ರಿ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.
Vijaya Karnataka Web 10 KAKAMARI 1082340
ಕಕಮರಿ ಗ್ರಾಮದಲ್ಲಿಕಳ್ಳತನ ನಡೆದ ಮನೆಯನ್ನು ಬೆಳಗಾವಿಯ ಶ್ವಾನದಳ ಪರಿಶೀಲಿಸುತ್ತಿರುವುದು.


ಮನೆಯಲ್ಲಿದ್ದ ಬಂಗಾರ, ನಾಲ್ಕು ತೊಲೆ ಗುಳದಾಳಿ, ಕಿವಿಯೋಲೆ 1.5 ತೊಲೆ, ಚೈನ್‌ ಒಂದೂವರೆ ತೊಲೆ, ಒಂದು ತೊಲೆ ಬೋರಮಾಳ, ಒಂದು ತೊಲೆ ಹೂ, ಸವಾತೂಕ ಗುಳದಾಳಿ, 50ಸಾವಿರ ರೂ. ನಗದನ್ನು ಕಳ್ಳರು ದೋಚಿದ್ದಾರೆ.

ಮನೆಯ ಮಾಲೀಕ ರಾಮಪ್ಪ ಮದಲಮಟ್ಟಿ ಅವರು ತೋಟದಲ್ಲಿಗೋವಿನಜೋಳ ಕಟಾವು ಇರುವದರಿಂದ ತೋಟದಲ್ಲಿವಾಸವಿದ್ದರು. ಭಾನುವಾರ ಬೆಳಗ್ಗೆ ಮನೆಗೆ ಬಂದಾಗ ಈ ವಿಷಯ ಪತ್ತೆಯಾಗಿದೆ.

ಐಗಳಿ ಪಿಎಸ್‌ಐ ನೇತೃತ್ವ ತಂಡ ಪರಿಶೀಲನೆ ನಡೆಸಿದೆ. ಬೆಳಗಾವಿ ಪೊಲೀಸ್‌ ಶ್ವಾನದಳ, ಮತ್ತು ಬೆರಳಚ್ಚು ಅಧಿಕಾರಿಗಳು ಆಗಮಿಸಿ ಸ್ಥಳ ಪರಿಸೀಲಿಸಿದರು. ಐಗಳಿ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ