ಆ್ಯಪ್ನಗರ

ಜೆಓಸಿ ಅರೆಕಾಲಿಕ ನೌಕರರ ಸೇವೆ ಮುಂದುವರಿಸಲು ಒತ್ತಾಯ

ವೃತ್ತಿ ಶಿಕ್ಷ ಣದ ಅರೆಕಾಲಿಕ ಬೋಧಕ, ಬೋಧಕೇತರ ಸಿಬ್ಬಂದಿ ಸೇವೆ ಮುಂದುವರಿಸುವಂತೆ ಒತ್ತಾಯಿಸಿ ಶುಕ್ರವಾರ ಕರ್ನಾಟಕ ರಾಜ್ಯ ಜೆಓಸಿ ವಿಲೀನ ವಿಧೇಯಕ ಬಾಧಿತ ನೌಕರರ ಹೋರಾಟ ಸಂಘದ ಸದಸ್ಯರು ಸುವರ್ಣ ವಿಧಾನಸೌಧದ ಸಮೀಪ ಪ್ರತಿಭಟನೆ ನಡೆಸಿದರು.

Vijaya Karnataka 15 Dec 2018, 5:00 am
ಬೆಳಗಾವಿ: ವೃತ್ತಿ ಶಿಕ್ಷ ಣದ ಅರೆಕಾಲಿಕ ಬೋಧಕ, ಬೋಧಕೇತರ ಸಿಬ್ಬಂದಿ ಸೇವೆ ಮುಂದುವರಿಸುವಂತೆ ಒತ್ತಾಯಿಸಿ ಶುಕ್ರವಾರ ಕರ್ನಾಟಕ ರಾಜ್ಯ ಜೆಓಸಿ ವಿಲೀನ ವಿಧೇಯಕ ಬಾಧಿತ ನೌಕರರ ಹೋರಾಟ ಸಂಘದ ಸದಸ್ಯರು ಸುವರ್ಣ ವಿಧಾನಸೌಧದ ಸಮೀಪ ಪ್ರತಿಭಟನೆ ನಡೆಸಿದರು.
Vijaya Karnataka Web BEL-14 LBS 7


ಜೆಓಸಿ ಕೋರ್ಸ್‌ ನಿಲ್ಲಿಸಿದ ಬಳಿಕ ಐದು ವರ್ಷಗಳ ಗರಿಷ್ಠ ಸೇವೆಯ ನಿಯಮದ ನೆಪ ಮಾಡಿ 530 ನೌಕರರ ಸೇವೆ ವಿಲೀನಗೊಳಿಸದೆ ಸೇವೆಯಿಂದ ಬಿಡುಗಡೆಗೊಳಿಸಿದೆ. ಕನಿಷ್ಠ ಎರಡು ವರ್ಷ ಸೇವೆಯ ಮಾನದಂಡದ ನಿರ್ದೇಶನ ಇದ್ದರೂ, ಸರಕಾರ ಪರಿಗಣಿಸಿಲ್ಲ. ಆದ್ದರಿಂದ ಎರಡು ವರ್ಷಗಳ ಸೇವೆ ಪರಿಗಣಿಸಿ ಸೇವೆಯಿಂದ ಕೈಬಿಟ್ಟ 530 ಜನರನ್ನು ತಕ್ಷ ಣ ವೃತ್ತಿ ಶಿಕ್ಷ ಣ ಅರೆಕಾಲಿಕ ನೌಕರರಾಗಿ ಮುಂದುವರಿಸಲು ಕ್ರಮಕೈಗೊಳ್ಳಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.

ಡಾ. ಆರ್‌.ಎಸ್‌. ದೊಡ್ಡನಿಂಗಪ್ಪಗೋಳ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ