ಆ್ಯಪ್ನಗರ

ಜೆಒಸಿ ಸಿಬ್ಬಂದಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ 14ರಂದು ಪ್ರತಿಭಟನೆ

ಅಥಣಿ : ಕರ್ನಾಟಕ ರಾಜ್ಯ ವೃತ್ತಿ ಶಿಕ್ಷ ಣ ಇಲಾಖೆ ಜೆಒಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 530 ಜನ ಬೋಧಕ-ಬೋಧಕೇತರ ಸಿಬ್ಬಂದಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಡಿ...

Vijaya Karnataka 12 Dec 2018, 5:00 am
ಅಥಣಿ : ಕರ್ನಾಟಕ ರಾಜ್ಯ ವೃತ್ತಿ ಶಿಕ್ಷ ಣ ಇಲಾಖೆ ಜೆಒಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 530 ಜನ ಬೋಧಕ-ಬೋಧಕೇತರ ಸಿಬ್ಬಂದಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಡಿ.14ರಂದು ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ವಿಲೀನ ವಂಚಿತ ನೌಕರರ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಡಾ. ರಾಮಣ್ಣಾ ದೊಡ್ಡನಿಂಗಪ್ಪಗೋಳ ತಿಳಿಸಿದ್ದಾರೆ.
Vijaya Karnataka Web joc staff protest protest on 14th
ಜೆಒಸಿ ಸಿಬ್ಬಂದಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ 14ರಂದು ಪ್ರತಿಭಟನೆ


ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರಕಾರವೇ ಜೆಒಸಿಯಲ್ಲಿರುವ 3746 ಜನ ಒಟ್ಟು ಸಿಬ್ಬಂದಿಯನ್ನು ಅವರವರ ವಿದ್ಯಾರ್ಹತೆಗನುಗುನವಾಗಿ ವಿಲೀನಾತಿ ನೀಡಬೇಕೆಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಅಂಗೀಕರಿಸಿತ್ತು. ಎಲ್ಲ ನೌಕರರಿಗೂ ವಿಲೀನ ನೀಡುವ ಉದ್ದೇಶಕ್ಕಾಗಿಯೇ ಸರಕಾರವು ಜೆಒಸಿ ಕೋರ್ಸ್‌ ಮುಚ್ಚಿತು. 2011 ರಲ್ಲಿ ಕೇವಲ 5 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದವರಿಗೆ ಮಾತ್ರ ವಿಲೀನಾತಿ ನೀಡಿ 5 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದ ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸಿ ಕೈ ತೊಳೆದುಕೊಂಡಿದೆ ಎಂದು ದೂರಿದರು.

ಸರಕಾರವೇ ವೃತ್ತಿ ಶಿಕ್ಷ ಣ ಇಲಾಖೆಯನ್ನು ಮುಚ್ಚಿರುವುದರಿಂದ ಇತ್ತ ಅರೆಕಾಲಿಕ ಹುದ್ದೆಯಿಲ್ಲದೆ ಸರಕಾರದಲ್ಲಿ ವಿಲೀನಾತಿಯನ್ನೂ ಹೊಂದದೆ ಅತಂತ್ರ ಸ್ಥಿತಿಯಲ್ಲಿ ಬದುಕುವಂತಾಗಿದೆ. ಇಂಥವರಿಗೆ ಬೇರೆ ಇಲಾಖೆಯಲ್ಲಿ ನೇಮಕಾತಿ ಹೊಂದುವ ಅವಕಾಶವೂ ಇಲ್ಲ.

ಸರಕಾರ ಮಾನವೀಯತೆಯ ಆಧಾರದ ಮೇಲೆ ಅತಂತ್ರ ಸ್ಥಿತಿಯಲ್ಲಿರುವ ಸಿಬ್ಬಂದಿಗೆ ವಿಲೀನಾತಿ ಪ್ರಕ್ರಿಯೆಯಲ್ಲಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು. ಗುರುರಾಜ ಜಾಧವ, ಎಸ್‌.ಬಿ.ಬನ್ನಿಮಟ್ಟಿ ಹಾಗೂ ಶೀತಲ, ಪ್ರಮೋದ ಕಂಗ್ರಾಳಕರ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ