ಆ್ಯಪ್ನಗರ

ಎಪಿಎಂಸಿ ವಿರುದ್ಧದ ಪ್ರತಿಭಟನೆಗೆ ಕೈಜೋಡಿಸಿ

ಇಟಗಿ: ಬೆಳಗಾವಿಯಲ್ಲಿ ಎಪಿಎಂಸಿ ವಿರುದ್ಧ ಜು...

Vijaya Karnataka 29 Jun 2019, 5:00 am
ಇಟಗಿ : ಬೆಳಗಾವಿಯಲ್ಲಿ ಎಪಿಎಂಸಿ ವಿರುದ್ಧ ಜು. 10 ರಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ)ರೈತ ಸಂಘಟನೆ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾಮಾಜಿಕ ಹೋರಾಟಗಾರ ಶಿವಾಜಿಅಣ್ಣಾ ಕಾಗಣಿಕರ ಮುಂದಾಳತ್ವದಲ್ಲಿ ನಡೆಯುವ ಪ್ರತಿಭಟನೆಗೆ ಎಲ್ಲ ರೈತರು ಕೈಜೋಡಿಸಬೇಕು ಎಂದು ಭಾರತೀಯ ಕೃಷಿಕ ಸಮಾಜ(ಸಂಯುಕ್ತ) ರೈತ ಸಂಘಟನೆ ರಾಜ್ಯಾಧ್ಯಕ್ಷ ಸಿದಗೌಡಾ ಮೋದಗಿ ಹೇಳಿದರು.
Vijaya Karnataka Web BEL-28 ITAGI 1


ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ನಡೆದ ಎಪಿಎಂಸಿ ವಿರುದ್ಧ ಹಮ್ಮಿಕೊಂಡ ಪ್ರತಿಭಟನೆ ಅಂಗವಾಗಿ ಜಾಗೃತಿ ಮೂಡಿಸುವ ಸಭೆಯನ್ನುದ್ದೇಶಿಸಿ ಮಾತನಾಡಿ, ಎಪಿಎಂಸಿ ಶೋಷಣೆಯಿಂದ ರೈತರನ್ನು ತಪ್ಪಿಸಬೇಕು. ಆಡಳಿತದಲ್ಲಿ ಪಾರದರ್ಶಕತೆ ಬರಬೇಕು. ಗುಣಮಟ್ಟದ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ನೀಡಬೇಕು. ಕಚ್ಚಾ ರಸೀದಿ ರದ್ದು ಪಡಿಸಬೇಕು, ಸರಕಾರದ ನಿಯಮ ಅಳವಡಿಸಬೇಕು. ನಕಲಿ ಕಂಪನಿಗಳ ಹಾವಳಿ ತಡೆಯಬೇಕು, ರೈತರಿಂದ ಕಮೀಷನ್‌ ಪಡೆಯುವುದನ್ನು ತಕ್ಷ ಣ ನಿಲ್ಲಿಸುವುದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಯಲಿದೆ ಎಂದರು.

ಇಟಗಿ ಸೇರಿದಂತೆ ಕರವಿನಕೊಪ್ಪ, ಬೇಡರಟ್ಟಿ, ತುರಮರಿ, ಗಂದಿಗವಾಡ ವಿವಿಧ ಗ್ರಾಮಗಳ ರೈತರು ಆಗಮಿಸಿದ್ದರು.

ಬಸವ ಭೀಮ ಸೇನೆ ಸಂಸ್ಥಾಪಕ ಆರ್‌.ಎಸ್‌. ದರ್ಗೆ, ಗಡಿನಾಡು ಹಿತರಕ್ಷ ಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಎಂ.ಎಂ. ರಾಜೀಬಾಯಿ, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಬಸವರಾಜ ಪೂಜಾರ, ರೈತ ಮುಖಂಡರಾದ ಪಿ.ಎಸ್‌.ಬೋಗೂರ, ನಾಗಯ್ಯ ಪೂಜಾರ, ಯಲ್ಲಪ್ಪ ಘಂಟಿ, ಬಸಯ್ಯ ಮಠಪತಿ, ಸೋಮನಿಂಗ ಕಮತಗಿ ಹಾಗೂ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ