ಆ್ಯಪ್ನಗರ

ಸಂಪುಟ ವಿಸ್ತರಣೆಯಿಂದ ಉತ್ತರ ಕರ್ನಾಟಕಕ್ಕೆ ನ್ಯಾಯ

ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಆರು ಸಚಿವ ಸ್ಥಾನಗಳನ್ನು ನೀಡುವ ಮೂಲಕ ಪ್ರಾದೇಶಿಕ ನ್ಯಾಯ ಸರಿದೂಗಿಸಿದಂತಾಗಿದೆ ಎಂದು ನೂತನ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

Vijaya Karnataka 26 Dec 2018, 5:00 am
ಚನ್ನಮ್ಮನ ಕಿತ್ತೂರು: ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಆರು ಸಚಿವ ಸ್ಥಾನಗಳನ್ನು ನೀಡುವ ಮೂಲಕ ಪ್ರಾದೇಶಿಕ ನ್ಯಾಯ ಸರಿದೂಗಿಸಿದಂತಾಗಿದೆ ಎಂದು ನೂತನ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Vijaya Karnataka Web BEL-25 KITTUR PHOTO 1


ಅವರು ಸಚಿವ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕರಿಸಿದ ನಂತರ ಬೆಳಗಾವಿಗೆ ಹಿಂದಿರುಗುವ ವೇಳೆ ಸೋಮವಾರ ರಾತ್ರಿ ಕಿತ್ತೂರಿಗೆ ಆಗಮಿಸಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚನ್ನಮ್ಮಾ ವೃತ್ತದಲ್ಲಿ ಸೇರಿದ್ದ ನೂರಾರು ಅಭಿಮಾನಿಗಳಿಗೆ ಅಭಿನಂದನೆ ಸ್ವೀಕರಿಸಿ ನಂತರ ಚನ್ನಮ್ಮಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಇನ್ನೆರಡು ದಿನಗಳಲ್ಲಿ ಖಾತೆಗಳ ಹಂಚಿಕೆ ನಡೆಯುತ್ತದೆ. ಸರಕಾರ ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇನೆ. ಸಚಿವ ಸ್ಥಾನದಿಂದ ಕೈಬಿಟ್ಟವರನ್ನು ಹಾಗೂ ಆಕಾಂಕ್ಷಿಗಳಾಗಿ ಭ್ರಮ ನಿರಸಗೊಂಡವರನ್ನು ಹೈಕಮಾಂಡ ಸಂಭಾಳಿಸುತ್ತದೆ. ಸಹೋದರ ರಮೇಶ ಜಾರಕಿಹೊಳಿ ಅವರು ರಾಜೀನಾಮೆ ನೀಡುವುದಿಲ್ಲ. ಸರಕಾರ ಸುಭದ್ರವಾಗಿರುತ್ತದೆ ಸಂಶಯಬೇಡ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳಿಗೆ ನಮ್ಮ ಪಕ್ಷ ದವರನ್ನಷ್ಟೇ ನೇಮಿಸಲಾಗಿದೆ. ಜೆಡಿಎಸ್‌ ಕೋಟಾದಲ್ಲಿ ನಮ್ಮ ಪಕ್ಷ ಕೈಯಾಡಿಸಿಲ್ಲ. ಅವರ ಪಕ್ಷ ದವರನ್ನು ಅವರೇ ನೇಮಿಸುತ್ತಾರೆ ಎಂದು ಹೇಳಿದರು.

ಜಿಪಂ ಸದಸ್ಯ ನಿಂಗಪ್ಪ ಅರಕೇರಿ, ಕಾಂಗ್ರೆಸ್‌ ಕಿಸಾನ ಸೆಲ್‌ ಅಧ್ಯಕ್ಷ ರಮೇಶ ಮೊಕಾಸಿ, ಮಾಜಿ ಜಿಪಂ ಸದಸ್ಯ ಬಾಬಾಸಾಹೇಬ್‌ ಪಾಟೀಲ, ಪಪಂ ಉಪಾಧ್ಯಕ್ಷ ಕಿರಣ ವಾಳದ, ಸದ್ಯರಾದ ಕೃಷ್ಣಾ ಬಾಳೇಕುಂದ್ರಿ, ಮುಸ್ತಾಕ ಸುತಗಟ್ಟಿ, ಕಿತ್ತೂರ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಹಬೀಬ ಶಿಲೇದಾರ, ನಿಂಗಪ್ಪ ತಡಕೋಡ, ಶಿವನಸಿಂಗ್‌ ಮೊಕಾಸಿ, ಶಂಕರ ಹೊಳಿ, ನಿಂಗಪ್ಪ ಹಣಜಿ ಮತ್ತಿತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ