ಆ್ಯಪ್ನಗರ

ಕಕಮರಿ: ಪಿಡಿಒ ಶಿವಣ್ಣಗೋಳ ವರ್ಗಾವಣೆಗೆ ವಿರೋಧ

ಕಕಮರಿ: ಇಲ್ಲಿನ ಪಿಡಿಒ ಕೆಆರ್‌...

Vijaya Karnataka 28 Jun 2019, 5:00 am
ಕಕಮರಿ: ಇಲ್ಲಿನ ಪಿಡಿಒ ಕೆ.ಆರ್‌. ಶಿವಣ್ಣಗೋಳ ವಿರುದ್ಧ ಮಾಡಿರುವ ಆರೋಪಗಳು ನಿರಾಧಾರವಾಗಿದ್ದು, ಪಿಡಿಒ ಅವರನ್ನು ವರ್ಗ ಮಾಡಕೂಡದು ಎಂದು ಗುರುವಾರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸುಮಾರು 2ಗಂಟೆಗಳ ಕಾಲ ಪರಸ್ಪರ ಆರೋಪ, ಪ್ರತ್ಯಾರೋಪ, ಗದ್ದಲ ನಡೆಯಿತು.
Vijaya Karnataka Web BLG-2706-2-52-27 KAKAMARI 2


ಈ ಹಿಂದಿನ ಪಿಡಿಒ ಹಗರಣ ಸಾಕಷ್ಟಿದೆ. ಗ್ರಾಮ ಪಂಚಾಯಿತಿಗೆ ಬಾರದೆ ಅಥಣಿಯಲ್ಲಿಯೇ ಇರುತ್ತಿದ್ದರು. ಈಗ ಬಂದಿರುವ ಪಿಡಿಒ ಗ್ರಾಮಕ್ಕೆ ಬರುತ್ತಾರೆ. ಇಂಥವರ ವಿರುದ್ಧ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಒಂದು ಗುಂಪು ಆಕ್ರೋಶ ವ್ಯಕ್ತಪಡಿಸಿತು. ಅಧ್ಯಕ್ಷ ಅಪ್ಪಾಸಾಬ ಪೂಜಾರಿ ಕೂಡ ಹಾಲಿ ಪಿಡಿಒ ಪರ ಮಾತನಾಡಿದರು.

ಹಿಂದೆ ಮಾಡಿದ ಕಾಮಗಾರಿಗಳಿಗೆ ನಾಮಫಲಕವನ್ನೇ ಹಾಕಿಲ್ಲ. ಸಾಕಷ್ಟು ಬೋಗಸ್‌ ಬಿಲ್‌ ತೆಗೆಯಲಾಗಿದೆ ಎಂದು ಅವರು ಹೇಳಿದಾಗ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ಜೋರಾಯಿತು. ಮಾತಿನ ಜಗಳ ತಾರಕಕ್ಕೇರಿತು.

ಹಿರಿಯರು ಮಧ್ಯ ಪ್ರವೇಶಿಸಿ ಸಮಾಧಾನ ಪಡಿಸಿದ್ದಲ್ಲದೆ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಯಾರೂ ವೈಯಕ್ತಿಕ ನಿಂದನೆ ಮಾಡಿಕೊಳ್ಳುವುದು ಬೇಡ. ಪದೇಪದೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಮೇಲೆ ಆರೋಪ ಮಾಡುವುದರಿಂದ ಗ್ರಾಮದ ಹೆಸರಿಗೆ ಕಳಂಕ ಬರುತ್ತದೆ. ಅದೇನಿದ್ದರೂ ಗ್ರಾಮದ ಅಭಿವೃದ್ಧಿಯತ್ತ ಗಮನಕೊಡುವಂತಾಗಬೇಕು. ಪಿಡಿಒ ನಿತ್ಯ ಗ್ರಾಪಂಗೆ ಬರುತ್ತಿದ್ದಾರೆ. ತಪ್ಪು ಮಾಡಿದರೆ ಕ್ರಮ ಕೈಗೊಳ್ಳೋಣ ಎಂದು ಶಾಂತಪಡಿಸಿ ಪಿಡಿಒ ಇಲ್ಲಿಯೇ ಇರುವಂತೆ ಬೆಂಬಲ ಪ್ರದರ್ಶಿಸಿ ಸಭೆ ಮುಕ್ತಾಯಗೊಳಿಸಿದರು.

ಜಿಪಂ ಸದಸ್ಯ ಗುರಪ್ಪ ದಾಶ್ಯಾಳ, ಮಾಜಿ ತಾಪಂ ಸದಸ್ಯ ಅಪ್ಪಾಸಾಬ ಈರಗೌಡ, ಹಿರಿಯರಾದ ಲಕ್ಷ ್ಮಣ ಗುರ್ಕಿ, ಯುವ ಮುಖಂಡ ಶ್ರೀಶೈಲ ಜನಗೌಡ, ಗಿರಿಮಲ್ಲ ಬಸರಗಿ, ಗ್ರಾಪಂ ಅಧ್ಯಕ್ಷ ಅಪ್ಪಾಸಾಬ ಪೂಜಾರಿ, ಉಪಾಧ್ಯಕ್ಷೆ ಸುಜಾತಾ ಈರಗೌಡ, ಗ್ರಾಪಂ ಸದಸ್ಯರುಗಳಾದ ಅಶೋಕ ಶಿರಗುಪ್ಪಿ, ಈರಣ್ಣ ವಾಲಿ, ಉಮೇಶ ತಂಗಡಿ, ಚಿಕ್ಕಯ್ಯಾ ಕಾಂಬಳೆ, ಕಲ್ಲಪ್ಪ ನಾಟೀಕಾರ, ಮಲ್ಲಿಕಾರ್ಜುನ ಕನಮಡಿ, ಅಶೋಕ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ