ಆ್ಯಪ್ನಗರ

ಗಡಿಭಾಗದಲ್ಲಿ ಕನ್ನಡ ಭಾಷಾ ವಿಷಯ ನಿಷ್ಕ್ರಿಯ

ಹುಕ್ಕೇರಿ: ಗಡಿಭಾಗದಲ್ಲಿಕನ್ನಡ ಭಾಷಾ ವಿಷಯ ನಿಷ್ಕ್ರಿಯವಾಗಿದೆ ಎಂದು ...

Vijaya Karnataka 29 Dec 2019, 5:00 am
ಹುಕ್ಕೇರಿ: ಗಡಿಭಾಗದಲ್ಲಿಕನ್ನಡ ಭಾಷಾ ವಿಷಯ ನಿಷ್ಕಿ್ರಯವಾಗಿದೆ ಎಂದು ಹೇಳುವ ಮೂಲಕ ಚಿಕ್ಕೋಡಿ ಡಿಡಿಪಿಐ ಮೋಹನ ಹಂಚ್ಯಾಟಿ ಕನ್ನಡ ವಿಷಯ ಬೋಧಕರಲ್ಲಿಅಚ್ಚರಿ ಮೂಡಿಸಿದರು.
Vijaya Karnataka Web 28 HUKKERI 01_53
ಹುಕ್ಕೇರಿ ಪಟ್ಟಣದ ಎಸ್‌.ಕೆ.ಹೈಸ್ಕೂಲ್‌ನಲ್ಲಿಶನಿವಾರ ಜಿಲ್ಲಾಮಟ್ಟದ ಕನ್ನಡ ಭಾಷಾ ಬೋಧಕರ ಕಾರ್ಯಾಗಾರವನ್ನು ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಕಸಾಪ ತಾಲೂಕಾಧ್ಯಕ್ಷ ಪ್ರಕಾಶ ದೇಶಪಾಂಡೆ ಉದ್ಘಾಟಿಸಿದರು.


ಇಲ್ಲಿನ ಎಸ್‌.ಕೆ. ಹೈಸ್ಕೂಲ್‌ ಚಿನ್ನರ ಭವನದಲ್ಲಿನಡೆದ ಜಿಲ್ಲಾಮಟ್ಟದ ಕನ್ನಡ ಭಾಷಾ ಬೋಧಕರ ಕಾರ್ಯಾಗಾರ ಉದ್ದೇಶಿಸಿ ಶನಿವಾರ ಮಾತನಾಡಿದ ಅವರು, ''ಇಲ್ಲಿಯವರೆಗೆ ಇಂತಹ ಕಾರ್ಯಾಗಾರಗಳು ಜರುಗಿರಲಿಲ್ಲ. ಅದರಲ್ಲೂಗಡಿ ಭಾಗದಲ್ಲಿಕನ್ನಡ ಭಾಷಾ ವಿಷಯವಾಗಿ ಮಕ್ಕಳ ಕಲಿಕಾಸಕ್ತಿ ಹೆಚ್ಚಿಸಬೇಕಾಗಿದೆ. ಇಲ್ಲಿಕನ್ನಡ ಭಾಷಾ ವಿಷಯ ನಿಷ್ಕಿ್ರಯವಾಗಿರುವುದು ನಿಜ. ಕಲಿಕಾಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿಇಲಾಖೆ ಮುಂದಿನ ದಿನಗಳಲ್ಲಿಕ್ರಿಯಾಶೀಲವಾಗಿ ಕೆಲಸ ಮಾಡಲಿದೆ'', ಎಂದರು.

ಕಾರಾರ‍ಯಗಾರ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್‌ ತಾಲೂಕಾಧ್ಯಕ್ಷ ಪ್ರಕಾಶ ದೇಶಪಾಂಡೆ, ''ಈ ಹಿಂದಿನ ಸರಕಾರ ರಾಜ್ಯದಲ್ಲಿಒಂದು ಸಾವಿರ ಆಂಗ್ಲಶಾಲೆಗಳನ್ನು ತೆರೆಯುವ ಮೂಲಕ ಕನ್ನಡಕ್ಕೆ ಕುತ್ತು ತಂದಿದೆ'', ಎಂದು ಆಕ್ರೋಶ ವ್ಯಕ್ತಪಡಿಸಿದರು. ''ಇರುವ ಕನ್ನಡ ಶಾಲೆಗಳಿಗೆ ಸರಿಯಾದ ಸೌಲಭ್ಯ ನೀಡದೆ ಆಂಗ್ಲಶಾಲೆಗಳನ್ನು ಪ್ರಾರಂಭಿಸಲು ಮುಂದಾದ ಕ್ರಮ ಯಾವ ಪುರುಷಾರ್ಥಕ್ಕೆ?'', ಎಂದು ಪ್ರಶ್ನಿಸಿದ ಅವರು, ಈಗಿನ ಸರಕಾರ ಕನ್ನಡ ಶಾಲೆಗಳ ಉಳಿವಿಗೆ ಸಹಕರಿಸಬೇಕೆಂದು ಆಗ್ರಹಿಸಿದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ''ಕನ್ನಡ ಭಾಷೆ ಉಳಿದು ಬೆಳೆದಿರುವುದು ಭಾಷಾ ಶಿಕ್ಷಕರಿಂದ'', ಎಂದು ಶ್ಲಾಘಿಸಿದರು. ಇಂಥ ಕಾರ್ಯಾಗಾರಗಳನ್ನು ಶಿಕ್ಷಣ ಇಲಾಖೆ ರಾಜ್ಯವ್ಯಾಪಿ ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು.

ಹಳೆಗನ್ನಡ ಬೋಧನೆಯ ಸವಾಲುಗಳ ಕುರಿತು ಹಾರೂಗೇರಿಯ ಡಾ.ವಿ.ಎಸ್‌.ಮಾಳಿ, ಕನ್ನಡ ಭಾಷಾ ಬೋಧನೆಯಲ್ಲಿಯ ಮೌಲ್ಯಗಳ ಕುರಿತು ಬನಹಟ್ಟಿಯ ಡಾ.ಎಸ್‌.ಬಿ.ಮಟೋಳಿ ಉಪನ್ಯಾಸ ನೀಡಿದರು.

ಎಸ್‌.ಕೆ. ಪಬ್ಲಿಕ್‌ ಸ್ಕೂಲ್‌ ಅಧ್ಯಕ್ಷ ಪಿಂಟು ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದಲ್ಲಿಬಿಇಒ ಮೋಹನ ದಂಡಿನ, ನಿಪ್ಪಾಣಿ ಬಿಇಒ ರೇವತಿ ಮಠದ, ಜಿಲ್ಲಾಕನ್ನಡ ವಿಷಯ ಪರಿವೀಕ್ಷಕ ಅರಿಹಂತ ಬಿರಾದಾರ ಪಾಟೀಲ, ಧಾರವಾಡದ ಡಾ. ಪೂರ್ಣಿಮಾ ಮುಕ್ಕುಂದಿ ಇತರರಿದ್ದರು. ಸಿರಿಗನ್ನಡ ಶಿಕ್ಷಕರ ವೇದಿಕೆ ಜಿಲ್ಲಾಧ್ಯಕ್ಷ ಶಿವಾನಂದ ಗುಂಡಾಳಿ ಸ್ವಾಗತಿಸಿದರು. ಸಿ.ಎಂ.ದರಬಾರೆ ವಂದಿಸಿದರು.

ಹುಕ್ಕೇರಿ ತಾಲೂಕು ಕೇಂದ್ರವಾಗಿದ್ದರೂ ಸರಕಾರಿ ಪ್ರೌಢಶಾಲೆ ಇಲ್ಲದಿರುವುದು ವಿಷಾದಕರ. ಆದಷ್ಟು ಬೇಗ ಇಲಾಖೆ ಈ ಬೇಡಿಕೆಯನ್ನು ಪರಿಗಣಿಸಬೇಕು.
- ಪ್ರಕಾಶ ದೇಶಪಾಂಡೆ, ಕಸಾಪ ತಾಲೂಕಾಧ್ಯಕ್ಷ

ಹುಕ್ಕೇರಿಯಲ್ಲಿಸರಕಾರಿ ಪ್ರೌಢಶಾಲೆ ಪ್ರಾರಂಭಿಸಲು ಶಾಸಕರು ಒತ್ತಾಯಿಸಿ ಪತ್ರ ವ್ಯವಹಾರ ನಡೆಸಿದ್ದಾರೆ. ಬರುವ ಶೈಕ್ಷಣಿಕ ವರ್ಷದಿಂದ ಆ ಬೇಡಿಕೆ ಇಲಾಖೆ ಈಡೇರಿಸಲು ಕ್ರಮ ಕೈಗೊಳ್ಳುತ್ತದೆ.
- ಮೋಹನ ಹಂಚ್ಯಾಟಿ, ಚಿಕ್ಕೋಡಿ ಡಿಡಿಪಿಐ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ