ಆ್ಯಪ್ನಗರ

ಕೆ. ಕಲ್ಯಾಣ್‌ ದಾಂಪತ್ಯ ಕಲಹ: ಪೂಜೆ ಹೆಸರಲ್ಲಿ ಕೋಟಿ ಕೋಟಿ ದೋಚಿದ್ದ ಕಪಟ ಮಂತ್ರವಾದಿ!

​​ ಕೆ. ಕಲ್ಯಾಣ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಮೋಸ ಹಾಗೂ ಅಪಹರಣ ಕೇಸ್ ದಾಖಲಾಗಿತ್ತು. ಈ ಪ್ರಕರಣ ತನಿಖೆ ಆರಂಭಿಸಿದಾಗ ಪೊಲೀಸರಿಗೆ ಶಿವಾನಂದ ವಾಲಿ ಮಾಡಿದ್ದ ಕುತಂತ್ರದ ಬಗ್ಗೆ ಮಾಹಿತಿ ಲಭಿಸಿತು ಎಂದು ಪ್ರಕರಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

Vijaya Karnataka 14 Oct 2020, 8:05 am
ಬೆಳಗಾವಿ : ಖ್ಯಾತ ಗೀತ ಸಾಹಿತಿ ಕೆ. ಕಲ್ಯಾಣ್ ದಾಂಪತ್ಯ ಕಲಹಕ್ಕೆ ಕಾರಣರಾಗಿ ಅಪಹರಣ ಮತ್ತು ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿರುವ ಮಂತ್ರವಾದಿ ಶಿವಾನಂದ ವಾಲಿ ಚಿನ್ನ ಬೆಳ್ಳಿ ಸೇರಿದಂತೆ ಲಕ್ಷಾಂತರ ರೂ. ದೋಚಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಿಸಿಪಿ ವಿಕ್ರಮ್ ಆಮಟೆ ಮಾಹಿತಿ ನೀಡಿದ್ದಾರೆ.
Vijaya Karnataka Web Lyricist K Kalyan


ಕೆ. ಕಲ್ಯಾಣ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಮೋಸ ಹಾಗೂ ಅಪಹರಣ ಕೇಸ್ ದಾಖಲಾಗಿತ್ತು. ಈ ಪ್ರಕರಣ ತನಿಖೆ ಆರಂಭಿಸಿದಾಗ ಪೊಲೀಸರಿಗೆ ಶಿವಾನಂದ ವಾಲಿ ಮಾಡಿದ್ದ ಕುತಂತ್ರದ ಬಗ್ಗೆ ಮಾಹಿತಿ ಲಭಿಸಿತು ಎಂದು ಪ್ರಕರಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿವಾನಂದ ವಾಲಿ ಎಂಬ ಮಂತ್ರವಾದಿಯನ್ನು ವಿಚಾರಣೆ ಮಾಡಿದ್ದೇವೆ, ಕೆ. ಕಲ್ಯಾಣ್ ಪತ್ನಿಗೆ ಕಂಟಕ ಇದೆ ಸರಿಪಡಿಸುವೆ ಎಂದು ಮನೆ ಕೆಲಸದವಳಾದ ಗಂಗಾ ಕುಲಕರ್ಣಿ ಬಳಸಿಕೊಂಡು ಈ ಭೂಪ ಹಣ ಲಪಟಾಯಿಸಿದ್ದಾನೆ. ಪೊಲೀಸರು ನೀಡಿದ ಮಾಹಿತಿಯಂತೆ. ಇಲ್ಲಿಯವರೆಗೆ 350 ಗ್ರಾಂ ಚಿನ್ನ, 6 ಕೆಜಿ ಬೆಳ್ಳಿ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಅನೇಕ ಕಡೆಗಳಲ್ಲಿ ಅವರಿಂದ ಆರು ಕೋಟಿ ಆಸ್ತಿಯನ್ನು ಶಿವಾನಂದ ವಾಲಿ ಹೆಸರಿಗೆ ಬರೆಸಿಕೊಂಡಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ತಿಳಿಸಿದ್ದಾನೆ.

ಮುಂಗಾರು ಬೆಳೆಗೆ ಕುತ್ತು ತಂದ ಮಳೆ; ಸುಗ್ಗಿ ಸಮಯದಲ್ಲೇ ವರ್ಷಧಾರೆ

ಗಂಗಾ ಕುಲಕರ್ಣಿ ಅವರನ್ನು ಮನೆಗೆ ಕಳುಹಿಸಿ ಅವರ ಪತಿಯಿಂದಲೇ ಅವರ ಪತ್ನಿಗೆ ಕಂಟಕ ಇದೆ ಎಂದು ಪೂಜೆ ಮಾಡಿಸುವುದಾಗಿ ಲಕ್ಷಾಂತರ ರೂ. ಹಣ ವಾಲಿ ಅವರ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಅಲ್ಲದೆ ವಾಲಿ ಅವರ ಮೈ ಮೇಲೆ ದೇವರು ಬರುತ್ತದೆ ಎಂದು ಅವರ ಆಸ್ತಿ ಲಪಟಾಯಿಸಿದ್ದಾರೆ.

ಇನ್ನೂ ತನಿಖೆ ಹಂತದಲ್ಲಿದ್ದು ಇನ್ನಷ್ಟು ಆಸ್ತಿ ಎಲ್ಲಿ ಎನ್ನುವುದನ್ನು ಪತ್ತೆ ಹಚ್ಚಬೇಕು ಎಂದರು. ಇನ್ನು ಇದೆ ವೇಳೆ ಡಿಸಿಪಿ ವಿಕ್ರಮ್‌, ಸಾರ್ವಜನಿಕರು ಇಂಥ ಮಾಟ ಮಂತ್ರ ಎಂದು ಅನುಮಾನ ಬಂದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ