ಆ್ಯಪ್ನಗರ

ಕಾಶ್ಮೀರ ದಾಳಿ ಬಿಜೆಪಿಯವರ ಅಜೆಂಡಾ

ಬೆಳಗಾವಿ: ''ಬಿಜೆಪಿಯವರಿಗೆ ಕಾಶ್ಮೀರದ ದಾಳಿ ಒಂದು ಅಜೆಂಡಾ ಆಗಿದೆ...

Vijaya Karnataka 8 Apr 2019, 5:00 am
ಬೆಳಗಾವಿ : ''ಬಿಜೆಪಿಯವರಿಗೆ ಕಾಶ್ಮೀರದ ದಾಳಿ ಒಂದು ಅಜೆಂಡಾ ಆಗಿದೆ. ದೇಶದ ಜನರಿಗೆ ಹೇಳಲು ಅವರ ಬಳಿ ಯಾವುದೇ ಅಭಿವೃದ್ಧಿ ಕೆಲಸಗಳು ಇಲ್ಲ'' ಎಂದು ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ಆರೋಪಿಸಿದರು.
Vijaya Karnataka Web kashmir attack is the agenda of bjp
ಕಾಶ್ಮೀರ ದಾಳಿ ಬಿಜೆಪಿಯವರ ಅಜೆಂಡಾ


ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಯುವ ಕಾಂಗ್ರೆಸ್‌ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

''ಕಳೆದ ಐದು ವರ್ಷದ ಹಿಂದೆ ನರೇಂದ್ರ ಮೋದಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಸುಳ್ಳು ಆಶ್ವಾಸನೆ ನೀಡುವ ಮೂಲಕ ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಐದು ವರ್ಷದ ಮೋದಿ ಆಡಳಿತ ವೈಫಲ್ಯಗಳನ್ನು ಕಾಂಗ್ರೆಸ್‌ ಯುವ ಕಾರ್ಯಕರ್ತರು ಪ್ರತಿಯೊಂದು ಮನೆ ಮನೆಗೆ ತೆರಳಿ ಹೇಳಬೇಕು'' ಎಂದು ತಿಳಿಸಿದರು.

''ಕಳೆದ 15 ವರ್ಷದಲ್ಲಿ ಸುರೇಶ ಅಂಗಡಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಆದ್ದರಿಂದ ಕ್ಷೇತ್ರದ ಮತದಾರರಿಗೆ ಮೋದಿ ನೋಡಿ ಮತ ನೀಡಿ ಎಂದು ಹೇಳುತ್ತಿದ್ದಾರೆ. ಬೆಳಗಾವಿಯಲ್ಲಿ ಓವರ್‌ ಬ್ರಿಡ್ಜ್‌ ನಿರ್ಮಾಣ ಮಾಡಿದ್ದಾಗಿ ಅವರು ಹೇಳುತ್ತಾರೆ. ಆದರೆ, ಈ ಓವರ್‌ ಬ್ರಿಡ್ಜ್‌ ಅನ್ನು ಕೇಂದ್ರ ಹಾಗೂ ರಾಜ್ಯದ ಶೇ.50ರ ಅನುದಾನದಲ್ಲಿ ನಿರ್ಮಿಸಲಾಗಿದೆ. ಕೇಂದ್ರ ಸರಕಾರ ಮಾತ್ರ ಅನುದಾನ ನೀಡಲ್ಲ'' ಎಂದರು.

ಮಾಜಿ ಶಾಸಕ ಫಿರೋಜ್‌ ಸೇಠ್‌, ಗ್ರಾಮೀಣ ಕಾಂಗ್ರೆಸ್‌ ಘಟಕದ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕಾಂಗ್ರೆಸ್‌ ಮುಖಂಡರಾದ ಮೃಣಾಲ್‌ ಹೆಬ್ಬಾಳಕರ, ರಾಜು ಸೇಠ್‌, ಪೈಜಾನ್‌ ಸೇಠ್‌ ಮೊದಲಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ