ಆ್ಯಪ್ನಗರ

ಠುಸ್ಸೆಂದ ಖಾನಾಪುರ ಬಂದ್‌ ಕರೆ

ಖಾನಾಪುರ: ಮರಾಠಿ ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ನಿಪ್ಪಾಣಿ, ಕಾರವಾರ, ಬೀದರ್‌, ಭಾಲ್ಕಿ, ಬೆಳಗಾವಿ, ಖಾನಾಪುರ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ...

Vijaya Karnataka 2 Nov 2018, 5:00 am
ಖಾನಾಪುರ : ಮರಾಠಿ ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ನಿಪ್ಪಾಣಿ, ಕಾರವಾರ, ಬೀದರ್‌, ಭಾಲ್ಕಿ, ಬೆಳಗಾವಿ, ಖಾನಾಪುರ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಹಗಲುಕನಸು ಕಾಣುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮುಖಂಡರು ಗುರುವಾರ ಕರೆ ನೀಡಿದ್ದ ಖಾನಾಪುರ ಬಂದ್‌ ಠುಸ್ಸಾಯಿತು. ಸ್ಥಳೀಯ ಮರಾಠಿಗರೂ ಸೇರಿದಂತೆ ನಾಗರಿಕರು, ವ್ಯಾಪಾರಸ್ಥರು ಸ್ಪಂದಿಸದ ಕಾರಣ ತೀವ್ರ ಮುಖಭಂಗ ಅನುಭವಿಸಿದರು.
Vijaya Karnataka Web khanapur bandh call flop
ಠುಸ್ಸೆಂದ ಖಾನಾಪುರ ಬಂದ್‌ ಕರೆ


ಅಲ್ಲದೆ, ರಾಜ್ಯೋತ್ಸವಕ್ಕೆ ಪ್ರತಿಯಾಗಿ ಆಯೋಜಿಸಿದ್ದ ಕರಾಳ ದಿನಾಚರಣೆಯಲ್ಲೂ ಬೆರಳೆಣಿಕೆಯಷ್ಟು ಜನರಿದ್ದರು. ಕರಾಳ ದಿನಾಚರಣೆಯ ಸಭೆಯಲ್ಲಿ ಭಾಗವಹಿಸಿದ್ದ ಎಂಇಎಸ್‌ ಧುರೀಣರು, ಎಂದಿನಂತೆ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿ, ನೆರೆದ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. 'ಝಾಲಾಚ್‌ ಪಾಹಿಜೇ' ಮತ್ತು 'ಜೈ ಮಹಾರಾಷ್ಟ್ರ' ಘೋಷಣೆಗಳು ಮೊಳಗಿದವು.

ಮಾಜಿ ಶಾಸಕರಾದ ಅರವಿಂದ ಪಾಟೀಲ, ದಿಗಂಬರ ಪಾಟೀಲ, ಜಿಪಂ ಸದಸ್ಯರಾದ ನಾರಾಯಣ ಕಾರ್ವೇಕರ, ಸುಪ್ರಿಯಾ ಕುಟ್ರೆ, ಜಯರಾಂ ದೇಸಾಯಿ ಮತ್ತಿತರರು ಕರಾಳ ದಿನಾಚರಣೆಯಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ