ಆ್ಯಪ್ನಗರ

ಖಾನಾಪುರ: ಹಲವು ಗ್ರಾಮಗಳಿಗೆ ಸಂಪರ್ಕ ಕಡಿತ

ಖಾನಾಪುರ: ತಾಲೂಕಿನ ಹಲವೆಡೆ ಇಡೀ ದಿನ ಸುರಿದ ಮಳೆ ಇಳೆಗೆ ವಿಶೇಷವಾದ ಜೀವಕಳೆ ತಂದಿದೆ...

Vijaya Karnataka 6 Jul 2018, 5:00 am
ಖಾನಾಪುರ: ತಾಲೂಕಿನ ಹಲವೆಡೆ ಇಡೀ ದಿನ ಸುರಿದ ಮಳೆ ಇಳೆಗೆ ವಿಶೇಷವಾದ ಜೀವಕಳೆ ತಂದಿದೆ. ಭೀಮಗಡ, ಕಣಕುಂಬಿ, ಲೋಂಡಾ, ಜಾಂಬೋಟಿ, ನಾಗರಗಾಳಿ ಮತ್ತು ಗುಂಜಿ ಕಾಡಿನಲ್ಲಿ ಮಳೆಗಾಲದ ವೈಭವ ಇಮ್ಮಡಿಸಿದೆ. ಮಲಪ್ರಭಾ, ಮಹದಾಯಿ, ಪಾಂಡರಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದ್ದು, ಕಳಸಾ, ಬಂಡೂರಿ, ಅಲಾತ್ರಿ, ಪಣಸೂರಿ, ತಟ್ಟಿ, ಮಂಗೇತ್ರಿ, ಕುಂಬಾರ, ಬೈಲ್‌ ಮತ್ತಿತರ ಹಳ್ಳಗಳೂ ಸಹ ತುಂಬಿ ಹರಿಯಲಾರಂಭಿಸಿವೆ.
Vijaya Karnataka Web BEL-5KHANAPUR1


ಮಹದಾಯಿ ನದಿ ಉಕ್ಕಿ ಹರಿಯುತ್ತಿರುವ ಕಾರಣ ತಾಲೂಕಿನ ಕೊಂಗಳಾ, ಪಾಸ್ತೋಳಿ, ಗವ್ವಾಳಿ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಮಲಪ್ರಭಾ ತೀರದಲ್ಲಿರುವ ಓಲಮನಿ-ಉಚವಡೆ ಹಾಗೂ ಮಂಗೇತ್ರಿ ಹಳ್ಳದ ಮೋದೆಕೊಪ್ಪ-ಕೌಲಾಪುರವಾಡಾ ನಡುವಿನ ಸೇತುವೆಗಳ ಮೇಲೆ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿರುವ ಕಾರಣ ಗುರುವಾರ ಮಧ್ಯಾಹ್ನದಿಂದ ಈ ಗ್ರಾಮಗಳ ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಅರಣ್ಯದಂಚಿನ ಗ್ರಾಮಗಳಲ್ಲಿ ಸತತವಾಗಿ ಮಳೆ ಸುರಿದ ಪರಿಣಾಮ ಭತ್ತದ ಗದ್ದೆಗಳಲ್ಲಿ ನೀರು ತುಂಬಿಕೊಂಡಿದೆ. ಚೋರ್ಲಾ ಘಟ್ಟ ಪ್ರದೇಶದ ಮಾನ, ಸಡಾ, ಚೋರ್ಲಾ, ಸೂರಲ್‌, ಪಾರವಾಡ, ಚಿಕಲೆ, ಕಣಕುಂಬಿ ಭಾಗದಲ್ಲಿ ಮಳೆಯ ಜತೆಗೆ ಮಂಜು ಆವರಿಸಿದ ಪರಿಣಾಮ ಬೆಳಗಾವಿ-ಪಣಜಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.

ತಹಸೀಲ್ದಾರ್‌ ಕಚೇರಿಯ ಮೂಲಗಳ ಪ್ರಕಾರ, ಕಣಕುಂಬಿಯಲ್ಲಿ 7.5 ಸೆಂ.ಮೀ, ಜಾಂಬೋಟಿಯಲ್ಲಿ 6.4 ಸೆಂ.ಮೀ, ಗುಂಜಿಯಲ್ಲಿ 4 ಸೆಂ.ಮೀ, ಖಾನಾಪುರ 2 ಸೆಂ.ಮೀ, ನಾಗರಗಾಳಿ 3.1 ಸೆಂ.ಮೀ ಮತ್ತು ಲೋಂಡಾ ಸುತ್ತಮುತ್ತ 6 ಸೆಂ.ಮೀ ಮಳೆ ಸುರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ