ಆ್ಯಪ್ನಗರ

ಖಾನಾಪುರ: ಶಾಂತವಾದ ಮಳೆ

ಖಾನಾಪುರ: ಜು6ರಿಂದ ಮಂಗಳವಾರದವರೆಗೆ ಬಿಟ್ಟೂ ಬಿಡದೇ ಸುರಿದು ಹಲವು ಅವಾಂತರಗಳನ್ನು ಸೃಷ್ಟಿಸಿದ್ದ ಮಳೆ ಬುಧವಾರ ಶಾಂತಗೊಂಡಿದೆ...

Vijaya Karnataka 19 Jul 2018, 5:00 am
ಖಾನಾಪುರ: ಜು.6ರಿಂದ ಮಂಗಳವಾರದವರೆಗೆ ಬಿಟ್ಟೂ ಬಿಡದೇ ಸುರಿದು ಹಲವು ಅವಾಂತರಗಳನ್ನು ಸೃಷ್ಟಿಸಿದ್ದ ಮಳೆ ಬುಧವಾರ ಶಾಂತಗೊಂಡಿದೆ. ಆದರೆ, ಸತತ ಮಳೆಯ ಕಾರಣ ನದಿಗಳು ಹಾಗೂ ಹಳ್ಳ-ಕೊಳ್ಳಗಳು ಇನ್ನೂ ತುಂಬಿ ಹರಿಯುತ್ತಿವೆ. ಹಬ್ಬನಹಟ್ಟಿ ಬಳಿಯ ಆಂಜನೇಯ ಮತ್ತು ಇಟಗಿ ಬಳಿಯ ಮರುಳ ಶಂಕರ ದೇಗುಲಗಳು ಬುಧವಾರವೂ ಮಲಪ್ರಭೆಯಲ್ಲಿ ಮುಳುಗಿದ ಸ್ಥಿತಿಯಲ್ಲಿವೆ.
Vijaya Karnataka Web BEL-18KHANAPUR3


ಜೂನ್‌ ತಿಂಗಳಿನಿಂದ ಜುಲೈ 18ರವರೆಗೆ ತಾಲೂಕಿನ ವಿವಿಧೆಡೆ ಮಳೆಯಿಂದಾಗಿ ಒಟ್ಟು 53 ಮನೆಗಳಿಗೆ ಹಾನಿಯಾಗಿದೆ ಎಂದು ತಾಲೂಕು ಆಡಳಿತ ತಿಳಿಸಿದೆ. ಇವುಗಳ ಪೈಕಿ ಈಗಾಗಲೇ 30ಕ್ಕೂ ಹೆಚ್ಚು ಮನೆಗಳ ಮಾಲೀಕರಿಗೆ ಪರಿಹಾರ ಧನ ವಿತರಿಸಲಾಗಿದೆ. ತಾಲೂಕಿನ ನೀಲಾವಡೆ, ಅಸೋಗಾ, ಶಿಂಗಿನಕೊಪ್ಪ, ಕಸಮಳಗಿ, ಗೋಧೋಳಿ, ಗೋದಗೇರಿ, ಉಮ್ರಪಾಣಿಗಳಲ್ಲಿ ಬುಧವಾರ ತಲಾ ಒಂದೊಂದು ಮನೆಗಳಿಗೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.

.

18ಖಾನಾಪುರ3 -

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ