ಆ್ಯಪ್ನಗರ

ಕೊಲ್ಲಾಪುರದಲ್ಲಿ ಕಿರಣೋತ್ಸವ ಸಂಭ್ರಮ

ಇಚಲಕರಂಜಿ: ಕೊಲ್ಲಾಪುರ ಮಹಾಲಕ್ಷ್ಮೀ ದೇವಿಗೆ ಸೂರ್ಯ ರಶ್ಮಿ ...

Vijaya Karnataka 11 Nov 2019, 5:00 am
ಇಚಲಕರಂಜಿ: ಕೊಲ್ಲಾಪುರ ಮಹಾಲಕ್ಷ್ಮೀ ದೇವಿಗೆ ಸೂರ್ಯ ರಶ್ಮಿ ಸ್ಪರ್ಶಿಸುವ ಅಪರೂಪದ ಹಾಗೂ ವಿಶೇಷವಾದ ಕಿರಣೋತ್ಸವ ಭಾನುವಾರ ಅಪಾರ ಭಕ್ತರ ಸಮ್ಮುಖದಲ್ಲಿಜರುಗಿತು.
Vijaya Karnataka Web PHOTO11075607
ಕೊಲ್ಲಾಪುರ ಮಹಾಲಕ್ಷ್ಮೀ ಮಂದಿರದಲ್ಲಿ ಭಾನುವಾರ ಸಂಜೆ 5.49ಕ್ಕೆ ಸೂರ್ಯನ ಕಿರಣಗಳು ಮಹಾಲಕ್ಷ್ಮೀ ಪ್ರತಿಮೆಯನ್ನು ಸ್ಪರ್ಶಿಸಿದ ನೋಟ.


ಸೂರ್ಯಾಸ್ತದ ಸಮಯದಲ್ಲಿದೇವಸ್ಥಾನದ ಪ್ರವೇಶದ ದ್ವಾರದಿಂದ ಲಕ್ಷ್ಮೀ ದೇವಿ ಮೂರ್ತಿಗೆ ಭಾಗಶಃ ಸೂರ್ಯ ರಶ್ಮಿ ಸ್ಪರ್ಶಿಸಿತು. ಕಿರಣೋತ್ಸವದ ವೇಳೆ ದೇವಿಗೆ ವಿಶೇಷ ಆರತಿ ಸಲ್ಲಿಸಲಾಯಿತು. ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಸಹಸ್ರಾರು ಭಕ್ತರು ದೇವಿ ದರ್ಶನ ಪಡೆದರು.

ವರ್ಷಕ್ಕೆ ಎರಡು ಬಾರಿ: ಪ್ರತಿ ಉತ್ತರಾಯಣ ಮತ್ತು ದಕ್ಷಿಣಾಯಣದಲ್ಲಿಸೂರ್ಯ ರಶ್ಮಿ ದೇವಿ ಮೂರ್ತಿಯನ್ನು ಸ್ಪರ್ಶಿಸುತ್ತದೆಯಾದರೂ ಕಳೆದ ಎರಡು ವರ್ಷ ಮಳೆ, ಮೋಡದ ನಿಮಿತ್ತ ಈ ಅಪರೂಪದ ಕ್ಷಣದಿಂದ ಭಕ್ತರು ವಂಚಿತರಾಗಿದ್ದರು. ಪ್ರತಿ ವರ್ಷ ಜನವರಿ 31ರಿಂದ ಫೆ.2ರ ವರೆಗೆ ಹಾಗೂ ನ.9ರಿಂದ 11ರ ವರೆಗೆ ಮಹಾಲಕ್ಷ್ಮೀ ದೇವಸ್ಥಾನದಲ್ಲಿಕಿರಣೋತ್ಸವ ಜರುಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ