ಚನ್ನಮ್ಮನ ಕಿತ್ತೂರು : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 230 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು , ಅವುಗಳಲ್ಲಿ 40 ಅತೀ ಸೂಕ್ಷ ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ರಾಜೇಂದ್ರ ಬೇಕಲ್ ಹೇಳಿದರು.
ಚುನಾವಣೆಗೆ ಮಾಡಿಕೊಂಡ ಸಿದ್ಧತೆಗಳ ಕುರಿತು ಮಾತನಾಡಿದ ಅವರು, ಚುನಾವಣಾರ್ಥ ವಿವಿಧ ತಾಲೂಕುಗಳಿಂದ ಸಿಬ್ಬಂದಿ ನೇಮಕವಾಗಿದ್ದು, ಖಾನಾಪೂರ ತಾಲೂಕಿನಿಂದ 147, ಕಿತ್ತೂರು ತಾಲೂಕಿನಿಂದ 379, ಬೈಲಹೊಂಗಲ ತಾಲೂಕಿನಿಂದ 111, ಸವದತ್ತಿ ತಾಲೂಕಿನಿಂದ 164, ಬೆಳಗಾವಿ ದಕ್ಷಿಣದಿಂದ 149, ಬೆಳಗಾವಿ ಉತ್ತರದಿಂದ 32, ಬೆಳಗಾವಿ ಗ್ರಾಮೀಣ ಭಾಗದಿಂದ 54 ಹೀಗೆ ಒಟ್ಟು 1036 ಚುನಾವಣಾ ಸಿಬ್ಬಂದಿ ಕಿತ್ತೂರ ಕ್ಷೇತ್ರದಲ್ಲಿ ಕಾರ್ಯೋನ್ಮಖರಾಗಿದ್ದಾರೆ ಎಂದರು.
ಕ್ಷೇತ್ರದ ಎಲ್ಲೆಡೆ ಸಿಬ್ಬಂದಿಯನ್ನು ಸಾಗಿಸಲು ಕೆಎಸ್ಆರ್ಟಿಸಿಯಿಂದ 311 ಬಸ್ಗಳು ಹಾಗೂ 4 ಕ್ರೂಸರ್ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ವಾಹನಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೂಡ ಮಾಡಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ಸಿಸಿ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮತಗಟ್ಟೆಯಲ್ಲಿ 5 ಜನ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಎಲ್ಲ ಮತಗಟ್ಟೆಗಳಲ್ಲಿ ಕನಿಷ್ಟ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿಶೇಷಚೇತನರ ನೆರವಿಗಾಗಿ ರಾರಯಂಪ್ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ತಹಸೀಲ್ದಾರ ವಿವೇಕ ಶೆಣೈ ಮಾತನಾಡಿ, ''ಮಾದರಿ ನೀತಿ ಸಂಹಿತೆ ಮತ್ತು ಚುನಾವಣಾ ಕಾರ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಕೊಳ್ಳಲಾಗುವುದು. ಮದ್ಯದಂಗಡಿಗಳನ್ನು ಮುಚ್ಚಲು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಕ್ಷೇತ್ರದಲ್ಲಿ 1815 ವಿಶೇಷಚೇತನ ಮತದಾರರಿದ್ದಾರೆ. ಅವರ ಅನುಕೂಲಕ್ಕೆ ಅವರ ಜೊತೆ ಒಬ್ಬರನ್ನು ಸಹಾಯಕರನ್ನಾಗಿ ಕರೆತರಲು ಅನುಮತಿ ನೀಡಲಾಗಿದೆ. ಕಿತ್ತೂರಲ್ಲಿನ 221 ಮತಗಟ್ಟೆಯನ್ನು ಮಾತ್ರ ಪಿಂಕ್ ಮತಗಟ್ಟೆಯನ್ನಾಗಿ ಮಾಡಲಾಗಿದೆ. ಮತಪೆಟ್ಟಿಗೆಗಳನ್ನು ಕಳುಹಿಸಲು ಹಾಗೂ ಮತದಾನದ ನಂತರ ಅವುಗಳನ್ನು ಹಿಂಪಡೆಯಲು ಕಿತ್ತೂರ ನಾಡ ವಿದ್ಯಾವರ್ಧಕ ಸಂಘದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ'', ಎಂದರು.
ಚುನಾವಣೆಗೆ ಮಾಡಿಕೊಂಡ ಸಿದ್ಧತೆಗಳ ಕುರಿತು ಮಾತನಾಡಿದ ಅವರು, ಚುನಾವಣಾರ್ಥ ವಿವಿಧ ತಾಲೂಕುಗಳಿಂದ ಸಿಬ್ಬಂದಿ ನೇಮಕವಾಗಿದ್ದು, ಖಾನಾಪೂರ ತಾಲೂಕಿನಿಂದ 147, ಕಿತ್ತೂರು ತಾಲೂಕಿನಿಂದ 379, ಬೈಲಹೊಂಗಲ ತಾಲೂಕಿನಿಂದ 111, ಸವದತ್ತಿ ತಾಲೂಕಿನಿಂದ 164, ಬೆಳಗಾವಿ ದಕ್ಷಿಣದಿಂದ 149, ಬೆಳಗಾವಿ ಉತ್ತರದಿಂದ 32, ಬೆಳಗಾವಿ ಗ್ರಾಮೀಣ ಭಾಗದಿಂದ 54 ಹೀಗೆ ಒಟ್ಟು 1036 ಚುನಾವಣಾ ಸಿಬ್ಬಂದಿ ಕಿತ್ತೂರ ಕ್ಷೇತ್ರದಲ್ಲಿ ಕಾರ್ಯೋನ್ಮಖರಾಗಿದ್ದಾರೆ ಎಂದರು.
ಕ್ಷೇತ್ರದ ಎಲ್ಲೆಡೆ ಸಿಬ್ಬಂದಿಯನ್ನು ಸಾಗಿಸಲು ಕೆಎಸ್ಆರ್ಟಿಸಿಯಿಂದ 311 ಬಸ್ಗಳು ಹಾಗೂ 4 ಕ್ರೂಸರ್ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ವಾಹನಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೂಡ ಮಾಡಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ಸಿಸಿ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮತಗಟ್ಟೆಯಲ್ಲಿ 5 ಜನ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಎಲ್ಲ ಮತಗಟ್ಟೆಗಳಲ್ಲಿ ಕನಿಷ್ಟ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿಶೇಷಚೇತನರ ನೆರವಿಗಾಗಿ ರಾರಯಂಪ್ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ತಹಸೀಲ್ದಾರ ವಿವೇಕ ಶೆಣೈ ಮಾತನಾಡಿ, ''ಮಾದರಿ ನೀತಿ ಸಂಹಿತೆ ಮತ್ತು ಚುನಾವಣಾ ಕಾರ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಕೊಳ್ಳಲಾಗುವುದು. ಮದ್ಯದಂಗಡಿಗಳನ್ನು ಮುಚ್ಚಲು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಕ್ಷೇತ್ರದಲ್ಲಿ 1815 ವಿಶೇಷಚೇತನ ಮತದಾರರಿದ್ದಾರೆ. ಅವರ ಅನುಕೂಲಕ್ಕೆ ಅವರ ಜೊತೆ ಒಬ್ಬರನ್ನು ಸಹಾಯಕರನ್ನಾಗಿ ಕರೆತರಲು ಅನುಮತಿ ನೀಡಲಾಗಿದೆ. ಕಿತ್ತೂರಲ್ಲಿನ 221 ಮತಗಟ್ಟೆಯನ್ನು ಮಾತ್ರ ಪಿಂಕ್ ಮತಗಟ್ಟೆಯನ್ನಾಗಿ ಮಾಡಲಾಗಿದೆ. ಮತಪೆಟ್ಟಿಗೆಗಳನ್ನು ಕಳುಹಿಸಲು ಹಾಗೂ ಮತದಾನದ ನಂತರ ಅವುಗಳನ್ನು ಹಿಂಪಡೆಯಲು ಕಿತ್ತೂರ ನಾಡ ವಿದ್ಯಾವರ್ಧಕ ಸಂಘದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ'', ಎಂದರು.