ಆ್ಯಪ್ನಗರ

ಕೆಕೆ ಕೊಪ್ಪ ಮಹಿಳೆ ಸಾವು ಪ್ರಕರಣ: ತನಿಖೆಗೆ ಸಿಎಂ ಸಚಿವಾಲಯದ ಉಪ ಕಾರ‍್ಯದರ್ಶಿ ಸೂಚನೆ

ಬೆಳಗಾವಿ: ತಾಲೂಕಿನ ಕೆಕೆ...

Vijaya Karnataka 30 Sep 2018, 5:00 am
ಬೆಳಗಾವಿ: ತಾಲೂಕಿನ ಕೆ.ಕೆ.ಕೊಪ್ಪದ ಗ್ರಾಮದ ಗಂಗಮ್ಮ ನೀಲಕಂಠ ಕುರುವಿನಶೆಟ್ಟಿ (70) ಸಾವು ಪ್ರಕರಣವನ್ನು ಸೂಕ್ತ ವಿಚಾರಣೆಗೆ ಒಳಪಡಿಸಿ, ಸಾವಿಗೆ ಕಾರಣರಾದವರನ್ನು ಶಿಕ್ಷೆಗೆ ಗುರಿಪಡಿಸಲು ಕ್ರಮ ಜರುಗಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠರಿಗೆ ಮುಖ್ಯಮಂತ್ರಿ ಸಚಿವಾಲಯದ ಉಪ ಕಾರ್ಯದರ್ಶಿ ಅರುಣ ಪುರ್ಟಾಡೋ ಸೂಚನೆ ನೀಡಿದ್ದಾರೆ.
Vijaya Karnataka Web kk koppa woman death case deputy secretarys order for inquiry
ಕೆಕೆ ಕೊಪ್ಪ ಮಹಿಳೆ ಸಾವು ಪ್ರಕರಣ: ತನಿಖೆಗೆ ಸಿಎಂ ಸಚಿವಾಲಯದ ಉಪ ಕಾರ‍್ಯದರ್ಶಿ ಸೂಚನೆ


ಹಿರೇಬಾಗೇವಾಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ಕೆ.ಕೆ.ಕೊಪ್ಪ ಗ್ರಾಮದಲ್ಲಿ ಸುಟ್ಟು ಗಾಯಗೊಂಡಿದ್ದ ಗಂಗಮ್ಮ ಕುರುವಿನಶೆಟ್ಟಿ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಜೂ.14ರಂದು ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. 'ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆಯಲ್ಲಿಯೇ ಮೃತಪಟ್ಟಿರುವ ಕುರಿತು ಸಂಶಯವಿದೆ. ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು' ಎಂದು ಮೃತ ಮಹಿಳೆಯ ಪುತ್ರಿ, ದೇಶನೂರ ಗ್ರಾಮದ ಸುಲೋಚನಾ ಅಶೋಕ ಕಿಚಡಿ ಹಿರೇಬಾಗೇವಾಡಿ ಪೊಲೀಸ್‌ ಠಾಣೆಗೆ ಜೂ.15ರಂದು ದೂರು ನೀಡಿದ್ದರು.

ಆದರೆ, ಪ್ರಕರಣದ ಕುರಿತಂತೆ ಪೊಲೀಸರು ಯಾವುದೇ ತನಿಖೆ ಕೈಗೊಳ್ಳದ ಹಿನ್ನೆಲೆಯಲ್ಲಿ ಸುಲೋನಾ ಕಿಚಡಿ ಈಚೆಗೆ ಸುವರ್ಣ ವಿಧಾನಸೌಧದಲ್ಲಿ ನಡೆದ ಜನತಾ ದರ್ಶನದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸರಿಗೆ ಮುಖ್ಯಮಂತ್ರಿ ಸಚಿವಾಲಯದ ಉಪ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ