ಆ್ಯಪ್ನಗರ

ಕೊಕಟನೂರು ಯಲ್ಲಮ್ಮದೇವಿ ಜಾತ್ರೆ ಸಮಾರೋಪ

ಐಗಳಿ: ಒಂದು ವಾರಗಳ ಕಾಲ ನಡೆದ ಕೊಕಟನೂರ ಯಲ್ಲಮ್ಮದೇವಿ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೆ, ಸಂಭ್ರಮದಿಂದ ಸಂಪನ್ನಗೊಳ್ಳಲು ಸಹಕರಿಸಿದ ಎಲ್ಲ ಇಲಾಖೆಯ ...

Vijaya Karnataka 7 Jan 2019, 5:00 am
ಐಗಳಿ : ಒಂದು ವಾರಗಳ ಕಾಲ ನಡೆದ ಕೊಕಟನೂರ ಯಲ್ಲಮ್ಮದೇವಿ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೆ, ಸಂಭ್ರಮದಿಂದ ಸಂಪನ್ನಗೊಳ್ಳಲು ಸಹಕರಿಸಿದ ಎಲ್ಲ ಇಲಾಖೆಯ ಸಿಬ್ಬಂದಿಗೆ ಜಿಪಂ ಸದಸ್ಯ ಸಿದ್ದಪ್ಪ ಮುದಕಣ್ಣವರ ಅಭಿನಂದನೆ ಸಲ್ಲಿಸಿದರು.
Vijaya Karnataka Web BEL-6 AIGALI 1


ಅವರು ಸಮೀಪದ ಕೊಕಟನೂರ ಗ್ರಾಮದ ಯಲ್ಲಮ್ಮದೇವಿ ಜಾತ್ರಾ ಕಮಿಟಿ ವತಿಯಿಂದ ಭಾನುವಾರ ನಡೆದ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ಭದ್ರತೆ ಒದಗಿಸಿದ ಪೊಲೀಸ ಇಲಾಖೆ, ಬೆಳಕಿನ ವ್ಯವಸ್ಥೆ ಮಾಡಿದ ಹೆಸ್ಕಾಂ, ಆರೋಗ್ಯ ಇಲಾಖೆ, ನೀರಾವರಿ ಇಲಾಖೆ ಹಾಗೂ ಸ್ವಚ್ಛತೆ ಕೈಗೊಂಡ ಗ್ರಾಪಂ ಅಧಿಕಾರಿಗಳು, ನೌಕರರ ಸಹಕಾರ ಜಾತ್ರೆಯ ಯಶಸ್ಸಿಗೆ ಕಾರಣವಾಗಿದೆ ಎಂದು ಶ್ಲಾಘಿಸಿದರು.

ಅರ್ಚಕ ಶಾಮರಾವ ಪೂಜಾರಿ ಮಾತನಾಡಿ, ಜಾತ್ರೆಯಲ್ಲಿ ಯಾವುದೇ ಮೌಢ್ಯಾಚರಣೆಗೂ ಅವಕಾಶ ನೀಡದೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಜಾತ್ರಾ ಕಮಿಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಅತ್ಯಂತ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿವೆ ಎಂದು ಶ್ಲಾಘಿಸಿದರು.

ಈ ವೇಳೆ ಜಿಪಂ ಮಾಜಿ ಸದಸ್ಯ ಪ್ರಹ್ಲಾದ ಪೂಜಾರಿ, ಜಾತ್ರಾ ಕಮಿಟಿ ಅಧ್ಯಕ್ಷ ಬಾಪುಗೌಡ ಬುಲಗೌಡ, ಕಾರ್ಯದರ್ಶಿ ಪ್ರಭಾಕರ ಚವ್ಹಾಣ, ಅರ್ಜುನ ಜಾಧವ, ಐಗಳಿ ಪಿಎಸ್‌ಐ ರಾಕೇಶ ಬಗಲಿ, ಗ್ರಾಪಂ ಅಧ್ಯಕ್ಷೆ ಸವಿತಾ ಹೋನವಾಡಕರ, ಶಂಕರ ಸವದಿ, ಎಂ.ಎಸ್‌. ಚೌದರಿ, ರಮೇಶ ಮುದಕಣ್ಣವರ ಮತ್ತಿತರರು ಇದ್ದರು.

ಪಿಡಿಒ ವೈ.ಎಸ್‌. ಕೊಲೂರ ಸ್ವಾಗತಿಸಿದರು. ಸುಭಾಷ ಪಾಟಣಕರ ನಿರೂಪಿಸಿದರು, ಪ್ರಭಾಕರ ಚವ್ಹಾಣ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ