ಆ್ಯಪ್ನಗರ

ಮೊಟ್ಟೆ ತಿಂದ ಜೊಲ್ಲೆ ಇನ್ಮುಂದೆ ‘ವಾರ ಬಂತಮ್ಮ’ ಎಂದು ರಾಯರ ಜಪ ಮಾಡಲಿ; ಸತೀಶ್ ಜಾರಕಿಹೊಳಿ

ಈ ಬಾರಿ ಅವರಿಗೆ ದೇವರ ಖಾತೆ ನೀಡಿದ್ದಾರೆ, ಸದ್ಯ ದೇವರ ಜಪ ತಪ ಮಾಡಲಿ. ಎಲ್ಲ ಗುಡಿಗಳಿಗೆ ಒಳ್ಳೆದು ಮಾಡಲಿ ಎಂದು ಈ ಖಾತೆ ನೀಡಿದ್ದಾರೆ. ಈ ಮೊದ್ಲು ಮೊಟ್ಟೆ ತಿಂದಿದ್ದರು, ಮುಂದೇನು ತಿನ್ನುತ್ತಿದ್ದರೋ ಏನೋ, ಹೀಗಾಗಿ ಸಿಎಂ ಖಾತೆ ಬದಲಾವಣೆ ಮಾಡಿ ಒಳ್ಳೆಯದು ಮಾಡಿದ್ದಾರೆ. ಇನ್ನು ಮುಂದೆ ವಾರ ಬಂತಮ್ಮ ಗುರುವಾರ ಬಂತಮ್ಮ‌ ಎಂದು ರಾಯರ ಜಪ ಮಾಡುವಂತಾಗಿದೆ ಎಂದು ಸತೀಶ್ ಜಾರಕಿಹೊಳಿ ಕುಹಕವಾಡಿದರು.

Vijaya Karnataka Web 14 Aug 2021, 2:04 pm
ಬೆಳಗಾವಿ: ರಾಜ್ಯ ಬಿಜೆಪಿ ಸರಕಾರದ ನಾಯಕರೆಲ್ಲರೂ ಕೂಡಿಕೊಂಡು ಒಂದು ರೀತಿಯ ಕಲೆಕ್ಟಿವಿಟಿ ರೀತಿಯ ಕರಪ್ಷನ್ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
Vijaya Karnataka Web Satish Jarkiholi.


ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಬಿಜೆಪಿಯಲ್ಲಿ ಒಬ್ಬರಿಗಿಂತ ಒಬ್ಬರು ಡಿಫರೆಂಟ್ ಆಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಮತ್ತು ಅದನ್ನು ಒಬ್ಬರಿಗೊಬ್ಬರು ಡಿಫೆಂಡ್ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದರು. ಇದೆ ವೇಳೆ, ಸಚಿವ ಶಶಿಕಲಾ ಜೊಲ್ಲೆ ವಿರುದ್ದದ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್ ಪಕ್ಷ ಯಾವುದೇ ಕಾರಣಕ್ಜೂ ಸುಮ್ಮನೆ ಕುಳಿತುಕೊಳ್ಳಲ್ಲ ಎಂದ ಅವರು ಈ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತುತ್ತೆವೆ ಎಂದು ಕಿಡಿಕಾರಿದರು.
ಮಳೆಯಿಂದ ಅತೀವೃಷ್ಟಿ; ಸಂತ್ರಸ್ತರಿಗೆ ಪರಿಹಾರ ಘೋಷಿಸಿದ ಸರ್ಕಾರ; ಯಾರ್ಯಾರಿಗೆ ಎಷ್ಟೆಷ್ಟು? ಇಲ್ಲಿದೆ ವಿವರ
ಅಷ್ಟೊಂದು ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದರೂ ಸರಕಾರ ಮತ್ತೆ ಅವರಿಗೆ ಸಚಿವ ಸ್ಥಾನ ಕೊಟ್ಟಿದೆ ಅಂದರೆ ಬಿಜೆಪಿ ಪಕ್ಷ ಯಾವ ಮಟ್ಟಿಗೆ ಭ್ರಷ್ಟಾಚಾರದಲ್ಲಿ ತೊಡಗಿರಬಹುದೆಂದು ಉಹಿಸಿಕೊಳ್ಳಿ ಎಂದು ಪ್ರಶ್ನೆ ಮಾಡಿದ ಸತೀಶ್ ಜಾರಕಿಹೊಳಿ, ಪುಣ್ಯ ಈ ಬಾರಿ ಅವರಿಗೆ ದೇವರ ಖಾತೆ ನೀಡಿದ್ದಾರೆ, ಸದ್ಯ ದೇವರ ಜಪ ತಪ ಮಾಡಲಿ. ಎಲ್ಲ ಗುಡಿಗಳಿಗೆ ಒಳ್ಳೆದು ಮಾಡಲಿ ಎಂದು ಈ ಖಾತೆ ನೀಡಿದ್ದಾರೆ. ಈ ಮೊದ್ಲು ಮೊಟ್ಟೆ ತಿಂದಿದ್ದರು, ಮುಂದೇನು ತಿನ್ನುತ್ತಿದ್ದರೋ ಏನೋ, ಹೀಗಾಗಿ ಸಿಎಂ ಖಾತೆ ಬದಲಾವಣೆ ಮಾಡಿ ಒಳ್ಳೆಯದು ಮಾಡಿದ್ದಾರೆ. ಇನ್ನು ಮುಂದೆ ವಾರ ಬಂತಮ್ಮ ಗುರುವಾರ ಬಂತಮ್ಮ‌ ಎಂದು ರಾಯರ ಜಪ ಮಾಡುವಂತಾಗಿದೆ ಎಂದು ಕುಹಕವಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ