ಆ್ಯಪ್ನಗರ

ಪುಣ್ಯಸ್ನಾನಗೈದವರ ಪಾಪ ತೊಳೆದ ಕೃಷ್ಣೆಯೇ ಈಗ ಮಲಿನ

ಇಂಗಳಿ: ಸಮೀಪದ ಕಲ್ಲೋಳ ಗ್ರಾಮದ ಬಳಿಯಿರುವ ಕೃಷ್ಣಾ ನದಿಗೆ ...

Vijaya Karnataka 5 Feb 2020, 5:00 am
ಇಂಗಳಿ: ಸಮೀಪದ ಕಲ್ಲೋಳ ಗ್ರಾಮದ ಬಳಿಯಿರುವ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಬಾಂದಾರಬಳಿ ಈ ವರ್ಷವೂ ಅವರಾತ್ರಿ ಅಮವಾಸ್ಯೆ ನಿಮಿತ್ತ 2-3 ದಿನಗಳ ಕಾಲ ಸಹಸ್ರಾರು ಜನ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಆದರೆ ನದಿಯ ದಂಡೆಯ ಮೇಲೆ ಬಿದ್ದಿರುವ ತ್ಯಾಜ್ಯ ವಸ್ತುಗಳನ್ನು ನೊಡಿದರೆ ಮೈ ಜುಮ್ಮೆನ್ನುತ್ತಿದೆ.
Vijaya Karnataka Web 4INGALI2_53
ಕಲ್ಲೋಳ ಗ್ರಾಮದ ಬಳಿ ಕಲುಷಿತಗೊಂಡ ಕೃಷ್ಣಾ ನದಿ.


ಭಕ್ತರು ನದಿಯಲ್ಲಿತ್ಯಾಜ್ಯ ವಸ್ತುಗಳನ್ನು ಒಗೆದು ಹೋಗಿರುವುದರಿಂದ ನದಿಯು ಮಲಿನವಾಗುತ್ತಿದ್ದು ಇದನ್ನು ಕುಡಿಯಲು ಬಳಸುವ ಗ್ರಾಮಗಳ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬಿರುವ ಆತಂಕ ಶುರುವಾಗಿದೆ. ಕಲ್ಲೋಳ ಗ್ರಾಮದ ಬಳಿ ಬಿದ್ದ ತ್ಯಾಜ್ಯ ವಸ್ತುಗಳನ್ನು ಹೊರ ತೆಗೆದು ಅವುಗಳನ್ನು ಸುಟ್ಟು ಹಾಕುವುದರ ಜತೆಗೆಅಲ್ಲಿನ ಪರಿಸರ ಶುಚಿಗೊಳಿಸುವ ಅವಶ್ಯಕತೆಯಿದೆ.

ಜಾತ್ರೆಯ ಸಂದರ್ಭದಲ್ಲಿಭಕ್ತರು ಪ್ಲಾಸ್ಟಿಕ್‌ ಊಟದ ತಟ್ಟೆಗಳು, ಗ್ಲಾಸುಗಳು, ಹರಕು ಬಟ್ಟೆಗಳು, ಪೂಜೆಯ ಸಾಹಿತ್ಯ ಮತ್ತು ದೇವರುಗಳ ಭಾವಚಿತ್ರಗಳು ನದಿಯಲ್ಲಿಒಗೆದು ಹೋಗಿರುವುದರಿಂದ ಇಲ್ಲಿನ ಪರಿಸರ ಗಬ್ಬು ನಾರುತ್ತಿದೆ. ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಹರಿಸಿ ಅನಾಹುತ ಸಂಭವಿಸುವ ಮೂದಲೇ ಈ ಪರಿಸರವನ್ನು ಶುಚಿಗೊಳಿಸಬೇಕೆಂಬ ಒತ್ತಾಯ ಸಾರ್ವಜನಿಕರದ್ದಾಗಿದೆ.

ಅನೇಕ ವರ್ಷಗಳಿಂದ ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯದಿಂದಾಗಿ ನದಿ ತೀರದ ಗ್ರಾಮಗಳ ತ್ಯಾಜ್ಯ ಮತ್ತು ಗಟಾರ ನೀರು ನದಿಗಳಲ್ಲಿಸೇರುತಿದ್ದು, ಅನೇಕ ಕಾಯಿಲೆಗಳಿಗೆ ಸಾರ್ವಜನಿಕರ ಜತೆಗೆ ಜಾನುವಾರುಗಳೂ ಸಹ ತೊಂದರೆಅನುಭವಿಸುವ ಪ್ರಸಂಗ ಬಂದೊದಗಿದೆ. ನದಿಗಳ ಸ್ವಚ್ಛತೆ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ಆಡಳಿತ ಜಾರಿಗೊಳಿಸಬೇಕು ಎಂಬುದು ಜನತೆಯ ಆಗ್ರಹವಾಗಿದೆ.

ಜನಜಾಗೃತಿಗೆ ಕ್ರಮಗಳಾಗಲಿ:
ಹಬ್ಬ ಹರಿದಿನಗಳು ಹಾಗೂ ವಿಶೇಷ ದಿನಗಳಂದು ಜನ ನದಿ ಸ್ನಾನ ಪೂರೈಸುವುದು ಪರಂಪರಾಗತ. ಆದರೆ ಅದರ ಜತೆಗೇ ತಮ್ಮನ್ನು ಪವಿತ್ರಗೊಳಿಸುವ ನದಿ ಕೂಡ ಪವಿತ್ರವಾಗಿರಬೇಕೆಂಬ ಬಗ್ಗೆ ಜನರಲ್ಲಿಜಾಗೃತಿ ಮೂಡಿಸಬೇಕಾದ ಅಗತ್ಯ ಕಂಡುಬಂದಿದೆ. ಜತೆಗೇ ಹಲವರು ಮೌಢ್ಯಾಚರಣೆಗಳ ಮೂಲಕ ಬಟ್ಟೆಬರೆಗಳನ್ನು, ಇತರ ತ್ಯಾಜ್ಯಗಳನ್ನು ನದಿಗೆ ಎಸೆಯುವಂಥ ಪದ್ಧತಿ ನಿಲ್ಲಿಸಲು ಸೂಕ್ತ ಜಾಗೃತಿ ಕ್ರಮಗಳಾಗಬೇಕಿದೆ ಎಂಬುದು ಪ್ರಜ್ಞಾವಂತರ ಆಗ್ರಹ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ