ಆ್ಯಪ್ನಗರ

ಮಲ್ಲಮ್ಮನ ಉತ್ಸವಕ್ಕೆ ನಿರುತ್ಸಾಹ: ಅಸಮಾಧಾನ

ಮಲ್ಲಮ್ಮನ ಬೆಳವಡಿ: ಫೆ 28 ಹಾಗೂ ಮಾ...

Vijaya Karnataka 27 Feb 2019, 5:00 am
ಮಲ್ಲಮ್ಮನ ಬೆಳವಡಿ : ಫೆ. 28 ಹಾಗೂ ಮಾ. 1ರಂದು ಜಿಲ್ಲಾಡಳಿತ ಬೆಳಗಾವಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಆಚರಿಸಲಾಗುತ್ತಿರುವ ಬೆಳವಡಿ ಮಲ್ಲಮ್ಮನ ಉತ್ಸವಕ್ಕೆ ಪೂರ್ವಭಾವಿ ಸಿದ್ಧತೆ ಕೈಗೊಳ್ಳಬೇಕಾದ ಸ್ಥಳೀಯ ಗ್ರಾಪಂ ಹಾಗೂ ತಾಲೂಕಾಡಳಿತದ ನೀರಸ ಕಾರ್ಯವೈಖರಿಯ ಬಗ್ಗೆ ಬೆಳವಡಿಯ ಸಾಮಾಜಿಕ ಕಾರ್ಯಕರ್ತ ಪ್ರಕಾಶ ಹುಂಬಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Vijaya Karnataka Web BEL-26 DWDP 3


ಗ್ರಾಮದಲ್ಲಿ ಅಲ್ಲಲ್ಲಿ ಕಾಟಾಚಾರಕ್ಕೆಂಬಂತೆ ಅರ್ಧಂಬರ್ಧ ಸ್ವಚ್ಛಗೊಳಿಸಲಾಗಿದೆ. ಸವದತ್ತಿ ರಾಜ್ಯ ಹೆದ್ದಾರಿ ರಸ್ತೆ ಪಕ್ಕದ ಖಾಸಗಿ ಜಾಗದಲ್ಲಿ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಹೆದ್ದಾರಿ ರಸ್ತೆ ಕಾಮಗಾರಿ ತೆವಳುತ್ತ ಕುಂಟುತ್ತ ಸಾಗಿದೆ. ಉತ್ಸವದ ವೇದಿಕೆ ಮುಂಭಾಗದ ರಸ್ತೆಯೇ ಅಪೂರ್ಣವಾಗಿ ಧೂಳುಮಯವಾಗಿದೆ. ಆ ಜಾಗ ಬಸ್‌ ನಿಲ್ದಾಣದಿಂದ ಸುಮಾರು 1 ಕಿಲೋ ಮೀಟರ್‌ ದೂರವಿದೆ. ಹೀಗಾಗಿ ಉತ್ಸವದಲ್ಲಿ ಪಾಲ್ಗೊಳ್ಳಲು ಬರುವವರಿಗೆ ತೊಂದರೆ ಆಗಲಿದೆ. ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮನವಿ ಮಾಡಿದಂತೆ ಖ್ಯಾತ ಚಲನಚಿತ್ರ ನಟರನ್ನು ಕರೆಸಲು ಬೇಡಿಕೆ ಇಡಲಾಗಿತ್ತು. ಅದರ ಬಗ್ಗೆಯೂ ಅಧಿಕಾರಿಗಳು ಗಮನ ಹರಿಸಿಲ್ಲ . ಪ್ರತಿ ವರ್ಷ ಗ್ರಾಮಸ್ಥರ ಮನವಿಗಳಿಗೆ ಹಾರಿಕೆ ಉತ್ತರ ನೀಡುತ್ತಿರುವ ಅಧಿಕಾರಿಗಳ ನಿರ್ಲಕ್ಷ್ಯ ಖಂಡನೀಯ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ