ಆ್ಯಪ್ನಗರ

ಮಣ್ಣಿನ ಕೊರತೆ: ಸಾಂಪ್ರದಾಯಿಕ ಗಣಪತಿಗೆ ಕೊಕ್‌

ಬೋರಗಾಂವ: ಇನ್ನು ಕೇವಲ 15 ದಿನಗಳಲ್ಲೇ ಗಣೇಶ ಚತುರ್ಥಿ ಇರುವುದರಿಂದ ಇಚಲಕರಂಜಿ ಸೇರಿದಂತೆ ಗಡಿ ಗ್ರಾಮಗಳಲ್ಲಿಯ ಕುಂಬಾರ ಕಲಾವಿದರು ವಿಭಿನ್ನ ಬಗೆಯ ಗಣೇಶ ...

Vijaya Karnataka 31 Aug 2018, 5:00 am
ಬೋರಗಾಂವ: ಇನ್ನು ಕೇವಲ 15 ದಿನಗಳಲ್ಲೇ ಗಣೇಶ ಚತುರ್ಥಿ ಇರುವುದರಿಂದ ಇಚಲಕರಂಜಿ ಸೇರಿದಂತೆ ಗಡಿ ಗ್ರಾಮಗಳಲ್ಲಿಯ ಕುಂಬಾರ ಕಲಾವಿದರು ವಿಭಿನ್ನ ಬಗೆಯ ಗಣೇಶ ಮೂರ್ತಿಗಳನ್ನು ತಯಾರಿಸುವಲ್ಲಿ ಮಗ್ನರಾಗಿದ್ದಾರೆ ಆದರೆ ಮಣ್ಣಿನ ಕೊರತೆ ಸಾಂಪ್ರದಾಯಿಕ ಗಣೇಶ ವಿಗ್ರಹ ಬಿಟ್ಟು ಪಿಒಪಿ ಮೊರೆ ಹೋಗುವ ಅನಿವಾರ್ಯತೆ ತಂದೊಡ್ಡಿದೆ.
Vijaya Karnataka Web BEL-30ICH2


ಸದ್ಯ ಮೂರ್ತಿ ಕಲಾವಿದರ ಚಿತ್ತ ಬೆನಕನ ಸೃಷ್ಟಿಯತ್ತ ಕೇಂದ್ರಿಕೃತವಾಗಿದೆ. ನಾನಾ ಆಕಾರ, ವಿನ್ಯಾಸಗಳ ಗಣೇಶ ಮೂರ್ತಿಗಳು ಕಲಾವಿದರ ಕುಂಚಗಳಿಗೆ ಮೈಯೊಡ್ಡಿ ಜೀವ ತಳೆಯತ್ತಿವೆ. 9 ಅಂಗುಲ ಮೂರ್ತಿಗಳಿಂದ ಹಿಡಿದು 12 ಅಡಿಗಳವರೆಗಿನ ವಿನಾಯಕನ ಮೂರ್ತಿಗಳಿಗೆ ಕಲಾವಿದರು ಬಣ್ಣ ತುಂಬುತ್ತಾರೆ. ಅತಿ ವಿಶಿಷ್ಟ ಆಕಾರ ಹೊಂದಿರುವ ಲಂಬೋದರ ನಾನಾ ಭಂಗಿಗಳಲ್ಲಿ ಆಸನಗಳಲ್ಲಿ ಕುಳಿತ ಮೂರ್ತಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.

ಬೇಡಕಿಹಾಳದಲ್ಲಿ ಕಳೆದ ಐದು ದಶಕಗಳಿಂದ ಈ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕಲಾವಿದ ಶಂಕರ ಕುಂಬಾರ ತಮ್ಮ ಕಲಾನೈಪುಣ್ಯತೆ ವೃತ್ತಿಪರತೆಯಿಂದ ಈ ಭಾಗದಲ್ಲಿ ಮನೆ ಮಾತಾಗಿದ್ದಾರೆ. 400ಕ್ಕೂ ಅಧಿಕ ಹೆಚ್ಚು ವಿಗ್ರಹ ತಯಾರಿಸುವ ಇವರು ನೂರಕ್ಕೂ ಅಧಿಕ ಸಾರ್ವಜನಿಕ ಮಂಡಳಿಗಳಿಂದ ಮೂರ್ತಿಗೆ ಬೇಡಿಕೆ ಬಂದಿವೆ. ಎಂದು ಹೇಳುತ್ತಾರೆ. ಈ ವೃತ್ತಿಯಲ್ಲಿಯೇ ಆತ್ಮತೃಪ್ತಿ ಕಂಡುಕೊಂಡ ಅವರು ಹೆಚ್ಚುತ್ತಿರುವ ಬೇಡಿಕೆಗನುಸಾರವಾಗಿ ಅಲ್ಲದೆ ಮಣ್ಣಿನ ಕೊರತೆಯಾಗಿದ್ದರಿಂದ ಸಾಂಪ್ರದಾಯಿಕ, ಪದ್ಧತಿ ಕೈಬಿಟ್ಟು ಪಿಒಪಿ ಬಳಸಿ ವಿಗ್ರಹ ತಯಾರಿಸುವುದು ಅನಿವಾರ್ಯ ಎನ್ನುತ್ತಾರೆ.

ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಕಾನೂನಾತ್ಮಕ ಕಟ್ಟಳೆಗಳ ಹಿನ್ನೆಲೆಯಲ್ಲಿ ಮಣ್ಣಿನ ವಿಗ್ರಹ ತಯಾರಿಕೆಯಿಂದ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಮಣ್ಣಿನ ಕೊರತೆಯಾಗುತ್ತಿದೆ. ಹಾಗೂ ಮಣ್ಣಿನ ದರದಲ್ಲಿ ಹೆಚ್ಚಳವಾಗಿದ್ದರಿಂದ ಬೇಡಿಕೆಗನ್ವಯ ಪೂರೈಸುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹೊಸ ಪದ್ದತಿಯ ಪಿಒಪಿಯ ಗಣಪತಿಗಳನ್ನು ತಯಾರಿಸದೆ ವಿಧಿಯಿಲ್ಲ ಎನ್ನುತ್ತಾರೆ ಅವರು.

ಪ್ರಸಕ್ತ ವರ್ಷ ಶಾಡೂ, ಬಣ್ಣ, ಕಚ್ಚಾ ಸಾಮಗ್ರಿಗಳ ಬೆಲೆಯಲ್ಲಿ ಕಳೆದ ವರ್ಷಕ್ಕಿಂತ ಶೇ. 20ರಷ್ಟು ಹೆಚ್ಚಾಗಿದ್ದರಿಂದ ಬೆನಕನೂ ಈ ಬಾರಿ ದುಬಾರಿಯಾಗಲಿದ್ದಾನೆ. ಕುಂಬಾರ ಓಣಿಯಲ್ಲಿಯ ಕಲಾವಿದರೀಗ ಗಣೇಶನ ಮೂರ್ತಿ ವಿನ್ಯಾಸಕ್ಕೆ ಅಂತಿಮ ಸ್ಪರ್ಶನೀಡುತ್ತಿದ್ದು ದಗಡುಶೇಠ, ಪ್ರಭಾವಳಿ,ಪಾಟೀಲ ಗಣಪತಿ, ಜಾಸವಂತಿ, ಕಮಲ, ಚೌರಂಗದಲ್ಲಿ ಕುಳಿತ ಗಣಪತಿ ಸೇರಿದಂತೆ ವಿವಿಧ ಅವತಾರದಲ್ಲಿ ರೂಪಗೊಳ್ಳುವ ರಾಮ, ಭೀಮ, ಕೃಷ್ಣ, ಅರ್ಜುನ, ತಿರುಪತಿ ವೆಂಕಟೇಶ, ಸಾಯಿ, ವಿಠ್ಠಲ, ಈಶ್ವರನಿಂದ ಹಿಡಿದು ಇಂದಿನ ಕಂಪ್ಯೂಟರ್‌, ಮೊಬೈಲ್‌ ಜತೆ ಆಟವಾಡುವ ಬಾಲ ಗಣೇಶ,ಸೈನಿಕವೇಶದ ವಿಗ್ರಹಗಳು ರೂಪಗೊಳ್ಳುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ