ಬಸವರಾಜ ಟಿ. ಆಯಟ್ಟಿ, ಯರಗಟ್ಟಿ
ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ ್ಯದಿಂದ ಯರಗಟ್ಟಿ ಗ್ರಾಮದಲ್ಲಿನ ಕೆರೆ ಅವನತಿಯತ್ತ ಸಾಗುತ್ತಿದೆ.
ಅಸಮರ್ಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ ಕೊಳವೆ ಬಾವಿಗಳು ಬಂದ್ ಆಗಿ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ನೀರಿನ ಅಭಾವವಿದ್ದರೂ ಅಧಿಕಾರಿಗಳು ಮಾತ್ರ ಕೆರೆ ನಿರ್ವಹಣೆಗೆ ಮುಂದಾಗುತ್ತಿಲ್ಲ. ಹೀಗಾಗಿ ಈ ಕೆರೆ ಸ್ವಚ್ಛತೆ ಕಾಣದೆ ಬಹಿರ್ದೆಸೆಯ ತಾಣವಾಗಿ ನಿರುಪಯುಕ್ತವಾಗಿದೆ.
ಗ್ರಾಪಂ ವ್ಯಾಪ್ತಿಯ ಈ ಕೆರೆ ಕಂದಾಯ ಇಲಾಖೆಯ ಸರ್ವೆ ನಂ.1ರ ಪ್ರಕಾರ 2.36 ಎಕರೆ ವಿಸ್ತೀರ್ಣ ಹೊಂದಿದ್ದು, 1971-72ರಲ್ಲಿ ನಿರ್ಮಾಣವಾಗಿದೆ. ಆರಂಭದಲ್ಲಿ ಯರಗಟ್ಟಿ ಜನರು ಕುಡಿಯುವ ನೀರಿಗಾಗಿ ಇದೇ ಕೆರೆಯನ್ನು ಅವಲಂಬಿಸಿದ್ದರು.
ಆದರೆ ಈಗ ಗ್ರಾಮ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕೆರೆಯ ಸುತ್ತ ಗಿಡಗಂಟಿಗಳು ಬೆಳೆದಿವೆ. ಈ ಮೊದಲು ಕಾಲುವೆಗಳ ಮುಖಾಂತರ ಮಳೆಯಾದಾಗ ನೀರು ಹರಿದು ಬರುತ್ತಿತ್ತು, ಈಗ ಎಲ್ಲ ಕಾಲುವೆಗಳು ಮುಚ್ಚಿ ನೀರಿನ ಹರಿವು ಬಂದಾಗಿದೆ.
ಸರಕಾರ ಕೆರೆಗಳ ಅಭಿವೃದ್ಧಿಗೆ ನೂರಾರು ಕೋಟಿ ರೂ.ಬಿಡುಗಡೆ ಮಾಡುತ್ತಿದ್ದರೂ ಜನರ ಜೀವನಾಡಿ ಆದ ಯರಗಟ್ಟಿ ಕೆರೆ ಸ್ವಚ್ಛತೆಗೆ ಮಾತ್ರ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೂಳೆತ್ತಿ, ಸ್ವಚ್ಛತೆ ಕಾರ್ಯಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಯರಗಟ್ಟಿ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.
* ವಿಶಾಲವಾದ ಕೆರೆ ಅಧಿಕಾರಿಗಳ ನಿರ್ಲಕ್ಷ ್ಯಕ್ಕೆ ಒಳಗಾಗಿದೆ. ಕೆರೆಯಲ್ಲಿರುವ ಹೂಳು ತೆಗೆದು ನೀರು ಸಂಗ್ರಹ ಮಾಡಿದರೆ ಗ್ರಾಮಸ್ಥರಿಗೆ ಅನುಕೂಲವಾಗಲಿದೆ.
- ರಫೀಕ ಡಿ.ಕೆ., ಕರವೇ ಅಧ್ಯಕ್ಷ ರು, ಯರಗಟ್ಟಿ
* ಕೆರೆಯ ಸುತ್ತ ವಿಶಾಲ ಸ್ಥಳವಿದ್ದು, ಅದನ್ನು ಉದ್ಯಾನವನ ಮಾಡಬೇಕು. ಕೂಡಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೆರೆ ಅಭಿವೃದ್ಧಿಗೆ ಮುಂದಾಗಬೇಕು.
- ರಾಜೇಂದ್ರ ವಾಲಿ, ಅಧ್ಯಕ್ಷ ರು, ಕಸಾಪ ಯರಗಟ್ಟಿ ತಾಲೂಕು ಘಟಕ
ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ ್ಯದಿಂದ ಯರಗಟ್ಟಿ ಗ್ರಾಮದಲ್ಲಿನ ಕೆರೆ ಅವನತಿಯತ್ತ ಸಾಗುತ್ತಿದೆ.
ಅಸಮರ್ಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ ಕೊಳವೆ ಬಾವಿಗಳು ಬಂದ್ ಆಗಿ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ನೀರಿನ ಅಭಾವವಿದ್ದರೂ ಅಧಿಕಾರಿಗಳು ಮಾತ್ರ ಕೆರೆ ನಿರ್ವಹಣೆಗೆ ಮುಂದಾಗುತ್ತಿಲ್ಲ. ಹೀಗಾಗಿ ಈ ಕೆರೆ ಸ್ವಚ್ಛತೆ ಕಾಣದೆ ಬಹಿರ್ದೆಸೆಯ ತಾಣವಾಗಿ ನಿರುಪಯುಕ್ತವಾಗಿದೆ.
ಗ್ರಾಪಂ ವ್ಯಾಪ್ತಿಯ ಈ ಕೆರೆ ಕಂದಾಯ ಇಲಾಖೆಯ ಸರ್ವೆ ನಂ.1ರ ಪ್ರಕಾರ 2.36 ಎಕರೆ ವಿಸ್ತೀರ್ಣ ಹೊಂದಿದ್ದು, 1971-72ರಲ್ಲಿ ನಿರ್ಮಾಣವಾಗಿದೆ. ಆರಂಭದಲ್ಲಿ ಯರಗಟ್ಟಿ ಜನರು ಕುಡಿಯುವ ನೀರಿಗಾಗಿ ಇದೇ ಕೆರೆಯನ್ನು ಅವಲಂಬಿಸಿದ್ದರು.
ಆದರೆ ಈಗ ಗ್ರಾಮ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕೆರೆಯ ಸುತ್ತ ಗಿಡಗಂಟಿಗಳು ಬೆಳೆದಿವೆ. ಈ ಮೊದಲು ಕಾಲುವೆಗಳ ಮುಖಾಂತರ ಮಳೆಯಾದಾಗ ನೀರು ಹರಿದು ಬರುತ್ತಿತ್ತು, ಈಗ ಎಲ್ಲ ಕಾಲುವೆಗಳು ಮುಚ್ಚಿ ನೀರಿನ ಹರಿವು ಬಂದಾಗಿದೆ.
ಸರಕಾರ ಕೆರೆಗಳ ಅಭಿವೃದ್ಧಿಗೆ ನೂರಾರು ಕೋಟಿ ರೂ.ಬಿಡುಗಡೆ ಮಾಡುತ್ತಿದ್ದರೂ ಜನರ ಜೀವನಾಡಿ ಆದ ಯರಗಟ್ಟಿ ಕೆರೆ ಸ್ವಚ್ಛತೆಗೆ ಮಾತ್ರ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೂಳೆತ್ತಿ, ಸ್ವಚ್ಛತೆ ಕಾರ್ಯಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಯರಗಟ್ಟಿ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದ್ದಾರೆ.
* ವಿಶಾಲವಾದ ಕೆರೆ ಅಧಿಕಾರಿಗಳ ನಿರ್ಲಕ್ಷ ್ಯಕ್ಕೆ ಒಳಗಾಗಿದೆ. ಕೆರೆಯಲ್ಲಿರುವ ಹೂಳು ತೆಗೆದು ನೀರು ಸಂಗ್ರಹ ಮಾಡಿದರೆ ಗ್ರಾಮಸ್ಥರಿಗೆ ಅನುಕೂಲವಾಗಲಿದೆ.
- ರಫೀಕ ಡಿ.ಕೆ., ಕರವೇ ಅಧ್ಯಕ್ಷ ರು, ಯರಗಟ್ಟಿ
* ಕೆರೆಯ ಸುತ್ತ ವಿಶಾಲ ಸ್ಥಳವಿದ್ದು, ಅದನ್ನು ಉದ್ಯಾನವನ ಮಾಡಬೇಕು. ಕೂಡಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೆರೆ ಅಭಿವೃದ್ಧಿಗೆ ಮುಂದಾಗಬೇಕು.
- ರಾಜೇಂದ್ರ ವಾಲಿ, ಅಧ್ಯಕ್ಷ ರು, ಕಸಾಪ ಯರಗಟ್ಟಿ ತಾಲೂಕು ಘಟಕ