ಆ್ಯಪ್ನಗರ

ಬುದ್ದಿ ಹೇಳಿದರೂ ಧಮ್ಕಿ ಅಂತಾರೆ: ಹೆಬ್ಬಾಳ್ಕರ್‌

'ವಿಜಯ ತಳವಾರ ತಪ್ಪು ಮಾಡಿದ್ದು, ಅದಕ್ಕೆ ಬುದ್ದಿ ಹೇಳಿರುವುದನ್ನೇ ಧಮ್ಕಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ,' ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ.

Vijaya Karnataka Web 16 Oct 2017, 12:59 pm
ಬೆಳಗಾವಿ: 'ವಿಜಯ ತಳವಾರ ತಪ್ಪು ಮಾಡಿದ್ದು, ಅದಕ್ಕೆ ಬುದ್ದಿ ಹೇಳಿರುವುದನ್ನೇ ಧಮ್ಕಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ, 'ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ.
Vijaya Karnataka Web lakshmi hebbalkar in new controversy
ಬುದ್ದಿ ಹೇಳಿದರೂ ಧಮ್ಕಿ ಅಂತಾರೆ: ಹೆಬ್ಬಾಳ್ಕರ್‌


'ವಿಜಯ ತಳವಾರ ಎನ್ನುವ ಯುವಕ ನನಗೆ ಚಿರಪರಿಚಿತ. ಅವರು ತಪ್ಪು ಮಾಡಿದ್ದಾರೆ. ಅವರಿಗೆ ಬುದ್ದಿ ಹೇಳಿದ್ದೇನೆ. ಬುದ್ದಿ ಹೇಳಿರುವುದನ್ನು ಧಮ್ಕಿ ಅಂದರೆ ನಾನೇನು ಮಾಡಲು ಆಗುವುದಿಲ್ಲ,' ಎಂದು ಹೆಬ್ಬಾಳ್ಕರ್‌ ಹೇಳಿದ್ದಾರೆ. ಹೆಬ್ಬಾಳ್ಕರ್‌ ಅವರು ಸತೀಶ್ ಜಾರಕಿಕೊಳಿ ಅವರ ಆಪ್ತ ವಿಜಯ ತಳವಾರ ಅವರಿಗೆ ಕರೆ ಮಾಡಿ ಧಮ್ಕಿ ಹಾಕಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.

'ಬೈಲಹೊಂಗಲ ತಾಲೂಕಿನ ವಿಜಯ ತಳವಾರ ಅವರು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಅಭಿಮಾನಿಗಳಿಗೆ ಜೀವ ಬೆದರಿಕೆ ಹಾಕಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಭಿಮಾನಿಗಳ ದೂರಿನ ಹಿನ್ನಲೆಯಲ್ಲಿ ನಾನೇ ಕರೆ ಮಾಡಿ ಬೈದಿದ್ದೇನೆ,' ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ತಿಳಿಸಿದ್ದಾರೆ.

'ಆತ ತಪ್ಪು ಮಾಡಿದ್ದಾನೆ. ಪರಿಚಯ ಇರುವುದರಿಂದ ಬುದ್ದಿ ಹೇಳಿದ್ದೇನೆ. ಕೆಲವರು ನನ್ನ ಏಳಿಗೆ ಸಹಿಸದೆ ಅಪಪ್ರಚಾರ ಮಾಡುತ್ತಿದ್ದಾರೆ. ಎಲ್ಲರಿಗೂ ಚುನಾವಣೆ ಮುಗಿದ ಮೇಲೆ ತಕ್ಕ ಉತ್ತರ ನೀಡುತ್ತೇನೆ,' ಎಂದು ಅವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ