ಆ್ಯಪ್ನಗರ

ಕಿತ್ತೂರು ಉತ್ಸವ ಜ್ಯೋತಿ ನೇರವಾಗಿ ಕಿತ್ತೂರಿಗೆ

ಕಿತ್ತೂರು: ಜಿಲ್ಲಾದ್ಯಂತ ನೆರೆ ಹಾವಳಿಯ ಹಿನ್ನೆಲೆಯಲ್ಲಿಅಧಿಕಾರಿಗಳು ಸಂತ್ರಸ್ತರ ...

Vijaya Karnataka 6 Oct 2019, 5:00 am
ಕಿತ್ತೂರು: ಜಿಲ್ಲಾದ್ಯಂತ ನೆರೆ ಹಾವಳಿಯ ಹಿನ್ನೆಲೆಯಲ್ಲಿಅಧಿಕಾರಿಗಳು ಸಂತ್ರಸ್ತರ ನೆರವು ಕಾರ್ಯದಲ್ಲಿನಿರತರಾಗಿದ್ದಾರೆ. ಹೀಗಾಗಿ ಈ ಸಲದ ಕಿತ್ತೂರು ಉತ್ಸವ ಜ್ಯೋತಿಯು ಜಿಲ್ಲಾದ್ಯಂತ ತೆರಳದೆ ಬೈಲಹೊಂಗಲ ಚನ್ನಮ್ಮಾಜಿ ಸಮಾಧಿಯಿಂದ ಅ. 23ರಂದು ಬೆಳಗ್ಗೆ ನೇರವಾಗಿ ಕಿತ್ತೂರಿಗೆ ಆಗಮಿಸುತ್ತದೆ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.
Vijaya Karnataka Web 5 KITTUR PHOTO 4_53


ಸ್ಥಳೀಯ ರಾಜಗುರು ಸಂಸ್ಥಾನ ಕಲ್ಮಠದ ಸಭಾ ಭವನದಲ್ಲಿಶನಿವಾರ ಸಂಜೆ ಕಿತ್ತೂರು ಉತ್ಸವದ ಪೂರ್ವ ತಯಾರಿ ಬಗ್ಗೆ ಅಧಿಕಾರಿಗಳ ಸಭೆ ಕರೆದು ಅವರು ಮಾತನಾಡಿದರು. ''ಜಿಲ್ಲೆಯ ಯಾವ ತಾಲೂಕಿನಿಂದಲೂ ಯಾವುದೇ ಅಧಿಕಾರಿಗಳು ಉತ್ಸವದ ಪೂರ್ವ ತಯಾರಿಯಲ್ಲಿಭಾಗವಹಿಸುವುದಿಲ್ಲ. ಅವರೆಲ್ಲನೆರೆ ಸಂತ್ರಸ್ತರ ಸಹಾಯ ಕಾರ್ಯದಲ್ಲಿನಿರತರಾಗಿದ್ದಾರೆ. ಹೀಗಾಗಿ ಬೈಲಹೊಂಗಲ ಹಾಗೂ ಕಿತ್ತೂರು ತಾಲೂಕಿನ ಎಲ್ಲಅಧಿಕಾರಿಗಳು ಎಲ್ಲಜವಾಬ್ದಾರಿ ಹೊತ್ತು ಉತ್ಸವ ಯಶಸ್ವಿಗೊಳಿಸುವಲ್ಲಿಕಾರ್ಯನಿರತರಾಗಬೇಕು. ಯಾವುದೇ ಕುಂಟು ನೆಪ ಹೇಳಿ ಕರ್ತವ್ಯ ಚ್ಯುತಿಗೊಳಿಸುವಂತಿಲ್ಲ'', ಎಂದು ಅಧಿಕಾರಿಗಳಿಗೆ ಆದೇಶಿಸಿದರು.

''ಈ ಸಲ ಉತ್ಸವದಲ್ಲಿಜಾನಪದ ಕಲಾ ಮೇಳ, ವಿಚಾರ ಸಂಕಿರಣ ಹಾಗೂ ರೈತ ಗೋಷ್ಠಿಗಳು ಜರುಗುವವು. ಕೋಟೆ ಆವರಣ ಸ್ವಚ್ಛಗೊಳಿಸಲು ಗುತ್ತಿಗೆದಾರಿಗೆ ನೀಡಲಾಗುವುದು. ಪಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಟ್ಟಣ ಅಂದವಾಗಿಸುವಲ್ಲಿಶ್ರಮ ವಹಿಸಬೇಕು. ಪಟ್ಟಣಕ್ಕೆ ಕೂಡುವ ಎಲ್ಲರಸ್ತೆಗಳ ದುರಸ್ತಿ ಕಾರ್ಯಗಳನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಡಬೇಕು'', ಎಂದು ಸ್ಥಳದಲ್ಲಿಉಪಸ್ಥಿತರಿದ್ದ ಲೋಕೋಪಯೋಗಿ ಅಧಿಕಾರಿಗಳಿಗೆ ನಿರ್ದೇಶಿಸಿದರು.

''ಸರಕಾರ ಉತ್ಸವಕ್ಕೆಂದು 1 ಕೋಟಿ ರೂ. ಅನುದಾನ ನೀಡುತ್ತಿದ್ದು ಅನುದಾನ ಸದ್ಬಳಕೆ ಮಾಡಿಕೊಂಡು ಅರ್ಥಪೂರ್ಣವಾಗಿ ಉತ್ಸವ ಆಚರಿಸೋಣ'', ಎಂದು ಶಾಸಕ ಹೇಳಿದರು.

ಬೈಲಹೊಂಗಲ ಉಪವಿಭಾಗ ಅಧಿಕಾರಿ ಶಿವಾನಂದ ಭಂಜತ್ರಿ, ಉತ್ಸವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು ನಾಡಿನ ನಾಗರಿಕರು ಹಾಗೂ ಬೈಲಹೊಂಗಲ ಮತ್ತು ಕಿತ್ತೂರು ತಾಲೂಕಿನ ಎಲ್ಲಸರಕಾರಿ ಅಧಿಕಾರಿಗಳು ಉತ್ಸವ ಯಶಸ್ವಿ ಆಗುವಲ್ಲಿಸಹಕರಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿಉತ್ಸವದ 13 ಸಮಿತಿಗಳು ಹಾಗೂ ಅವುಗಳ ಕರ್ತವ್ಯ ಕುರಿತು ವಿವರಿಸಿದರು.

ಉಳವಪ್ಪ ಉಳ್ಳೇಗಡ್ಡಿ, ಬಸವರಾಜ ಪರವಣ್ಣವರ, ಸಂದೀಪ ದೇಶಪಾಂಡೆ, ಬಸನಗೌಡ ಸಿದ್ರಾಮಣಿ, ಎಸ್‌.ಆರ್‌. ಪಾಟೀಲ ಅವರು ಮೆರವಣಿಗೆ ಹಾಗೂ ಇನ್ನಿತರ ವಿಷಯ ಕುರಿತು ಸಲಹೆಗಳನ್ನು ನೀಡಿದರು. ತಹಸೀಲ್ದಾರ ಪ್ರವೀಣ ಜೈನ್‌, ಸಿಪಿಐ ಶ್ರೀಕಾಂತ ತೋಟಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

99 ಸಾವಿರ ರೂ.ಗೆ ಪೆಂಡಾಲ್‌ ಟೆಂಡರ್‌:
ಕಳೆದ ಸಾಲಿನಲ್ಲಿಉತ್ಸವದ ಪೆಂಡಾಲ್‌ ಟೆಂಡರ್‌ ಕರೆದಾಗ ಅದನ್ನು 6.50 ಲಕ್ಷ ರೂ.ಗೆ ಕೃಷ್ಣಾ ಬಾಳೇಕುಂದ್ರಿ ಪಡೆದಿದ್ದರು. ಈ ಸಲ ಈ ಟೆಂಡರ್‌ ವಿಷಯವೇ ತಾರಕಕ್ಕೇರಿ ಸ್ಪರ್ಧಾತ್ಮಕವಾಗಿ ಕೊನೆಗೆ ಕೇವಲ 99 ಸಾವಿರ ರೂ.ಗೆ ಕೃಷ್ಣಾ ಬಾಳೇಕುಂದ್ರಿ ಅವರೇ ಪಡೆದುಕೊಂಡು ನೆರದಿದ್ದ ಅಧಿಕಾರಿಗಳ ಹಾಗೂ ಜನರ ಹುಬ್ಬೇರಿಸುವಂತೆ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ