ಆ್ಯಪ್ನಗರ

ಲೋಂಡಾ-ಹುಬ್ಬಳ್ಳಿ ರೈಲ್ವೆ ಮಾರ್ಗದಲ್ಲಿ ಭೂಕುಸಿತ ; ನಿರಂತರ ಮಳೆಯಿಂದಾಗಿ ದುರಸ್ತಿ ಕಾರ್ಯಕ್ಕೆ ಅಡ್ಡಿ

ಖಾನಾಪುರ (ಬೆಳಗಾವಿ): ನಿರಂತರ ಮಳೆ ಪರಿಣಾಮ ತಾಲೂಕಿನ ...

Vijaya Karnataka 18 Aug 2020, 5:00 am
ಖಾನಾಪುರ (ಬೆಳಗಾವಿ): ನಿರಂತರ ಮಳೆ ಪರಿಣಾಮ ತಾಲೂಕಿನ ಶಿವಠಾಣ ರೈಲು ನಿಲ್ದಾಣದ ಬಳಿ ಭಾನುವಾರ ರಾತ್ರಿ ಭೂಕುಸಿತ ಉಂಟಾಗಿದೆ. ಲೋಂಡಾ-ಹುಬ್ಬಳ್ಳಿ ಮಾರ್ಗ ಮಧ್ಯದ 554 ಕಿಮೀ ಬಳಿ ಜೋಡು ರೈಲ್ವೆ ಮಾರ್ಗದ ಪೈಕಿ ಉತ್ತರ ದಿಕ್ಕಿನ ಒಂದು ಮಾರ್ಗದ ಪಕ್ಕದ ಭೂಮಿ ಕುಸಿದಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
Vijaya Karnataka Web 17KHANAPUR3_53
ಖಾನಾಪುರ ತಾಲೂಕಿನ ಲೋಂಡಾ-ಹುಬ್ಬಳ್ಳಿ ರೈಲ್ವೆ ಮಾರ್ಗದ ಹಳಿಯ ಪಕ್ಕದಲ್ಲಿಭಾನುವಾರ ರಾತ್ರಿ ಭೂಕುಸಿತ ಸಂಭವಿಸಿರುವುದು.


ಭೂಕುಸಿತದ ಪರಿಣಾಮ ಗೋವಾ, ಮಹಾರಾಷ್ಟ್ರ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವ ಗೂಡ್ಸ್‌ ರೈಲುಗಳನ್ನು ಲೋಂಡಾ ನಿಲ್ದಾಣದಲ್ಲಿಮತ್ತು ಹುಬ್ಬಳ್ಳಿಯಿಂದ ಮಹಾರಾಷ್ಟ್ರ , ಗೋವಾದತ್ತ ತೆರಳುವ ರೈಲುಗಳನ್ನು ಅಳ್ನಾವರ ಮತ್ತು ನಾಗರಗಾಳಿ ನಿಲ್ದಾಣಗಳಲ್ಲಿತಡೆ ಹಿಡಿಯಲಾಗಿದೆ. ಜೋಡಿ ರೈಲ್ವೆ ಮಾರ್ಗದ ಪೈಕಿ ಒಂದು ಮಾರ್ಗದಲ್ಲಿಪ್ರತಿ ಗಂಟೆಗೆ 10 ಕಿಮೀ ವೇಗದಲ್ಲಿನಿಧಾನವಾಗಿ ರೈಲುಗಳನ್ನು ಓಡಿಸಲಾಗುತ್ತಿದೆ.

ರೈಲ್ವೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮತ್ತು ವಿಪತ್ತು ನಿರ್ವಹಣಾ ತಂಡದವರು ದುರಸ್ತಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಆದರೆ, ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ಶಿವಠಾಣ ರೈಲು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ