ಆ್ಯಪ್ನಗರ

'ಉದ್ಧವ್ ಠಾಕ್ರೆ ಅವಿವೇಕತನದ ಹೇಳಿಕೆ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ': ಲಕ್ಷ್ಮಣ ಸವದಿ

'ಬೆಳಗಾವಿ ಯಾವತ್ತಿಗೂ ಕರ್ನಾಟಕದ ಅವಿಭಾಜ್ಯ ಅಂಗ. ಯಾರೇ ಬಂದರೂ ಬೆಳಗಾವಿ ಬಿಟ್ಟು ಕೊಡುವ ಮಾತಿಲ್ಲ. ಗಡಿ ವಿಷಯ ಸುಪ್ರೀಂ ಕೋರ್ಟ್‌ನಲ್ಲಿದೆ. ರಾಜ್ಯದ ಪರ ತೀರ್ಪು ಬರುವ ವಿಶ್ವಾಸವಿದೆ’ - ಲಕ್ಷ್ಮಣ್ ಸವದಿ

Vijaya Karnataka Web 6 Jan 2020, 6:22 pm
ಬೆಳಗಾವಿ: ‘ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಅವಿವೇಕತನದ ಹೇಳಿಕೆ ನೀಡುವುದು ಉದ್ಧವ್‌ ಠಾಕ್ರೆಗೆ ಶೋಭೆ ತರುವುದಿಲ್ಲ’ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಗಡಿ ವಿವಾದವನ್ನು ಕಾಶ್ಮೀರ ವಿವಾದಕ್ಕೆ ಹೋಲಿಸಿ ಮಾತನಾಡಿದ್ದ ಠಾಕ್ರೆ ಹೇಳಿಕೆಗೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
Vijaya Karnataka Web laxman savadi
'ಉದ್ಧವ್ ಠಾಕ್ರೆ ಅವಿವೇಕತನದ ಹೇಳಿಕೆ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ': ಲಕ್ಷ್ಮಣ ಸವದಿ


ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎರಡು ವರ್ಷಗಳ ಹಿಂದೆ ರಾಜ್‌ ಠಾಕ್ರೆ ನೀಡಿರುವ ಹೇಳಿಕೆ ನೆನಪಿಸಿಕೊಳ್ಳಬೇಕು. ಬೆಳಗಾವಿ ಯಾವತ್ತಿಗೂ ಕರ್ನಾಟಕದ ಅವಿಭಾಜ್ಯ ಅಂಗ. ಯಾರೇ ಬಂದರೂ ಬೆಳಗಾವಿ ಬಿಟ್ಟು ಕೊಡುವ ಮಾತಿಲ್ಲ. ಗಡಿ ವಿಷಯ ಸುಪ್ರೀಂ ಕೋರ್ಟ್‌ನಲ್ಲಿದೆ. ರಾಜ್ಯದ ಪರ ತೀರ್ಪು ಬರುವ ವಿಶ್ವಾಸವಿದೆ’ ಎಂದು ಲಕ್ಷ್ಮಣ್ ಸವದಿ ಹೇಳಿದರು.

ಚಂದಗಡ ಶಾಸಕ ರಾಜೇಶ ಪಾಟೀಲ ಬೆಳಗಾವಿಗೆ ಆಗಮಿಸಿ ನಾಡದ್ರೋಹಿ ಹೇಳಿಕೆ ನೀಡುತ್ತಿರುವ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಸವದಿ, ‘ನಾಯಿ ಬೊಗಳಿದ ಮೇಲೆ ಕಚ್ಚಲು ಹೋಗುವುದಿಲ್ಲ’ ಎಂದು ವ್ಯಂಗ್ಯವಾಡಿದರು.

'ಪಾಕಿಸ್ತಾನ ಸೈನ್ಯ ಹಾಗೂ ಶಿವಸೇನೆ ಒಂದೇ ನಾಣ್ಯದ 2 ಮುಖಗಳಿದ್ದಂತೆ': ಕರವೇ ನಾರಾಯಣಗೌಡ ಬಣ್ಣನೆ..!

ಗಡಿ ಪ್ರಾಧಿಕಾರಕ್ಕೆ ಅಧ್ಯಕ್ಷ ರ ನೇಮಕ ಶೀಘ್ರ

‘ಗಡಿ ಪ್ರಾಧಿಕಾರಕ್ಕೆ ಸಚಿವರನ್ನು ನೇಮಕ ಮಾಡುವ ಪದ್ಧತಿ ರಾಜ್ಯದಲ್ಲಿಇಲ್ಲ. ಗಡಿ ಪ್ರಾಧಿಕಾರಕ್ಕೆ ಶೀಘ್ರದಲ್ಲೇ ಅಧ್ಯಕ್ಷರನ್ನು ನೇಮಿಸಲಾಗುವುದು’ ಎಂದು ಲಕ್ಷ್ಮಣ ಸವದಿ ಹೇಳಿದರು.

‘ಒಂದು ಇಂಚು ಜಾಗ ಬಿಟ್ಟುಕೊಡಲ್ಲ’ ಮಹಾ ಪುಂಡಾಟಕ್ಕೆ ಬಿಎಸ್‌ವೈ ಗರಂ

‘ಸಚಿವ ಕೆ.ಎಸ್‌.ಈಶ್ವರಪ್ಪ ಅವರಿಗೆ ಬೆದರಿಕೆ ಕರೆ ಬಂದಿರುವ ವಿಷಯವನ್ನು ಕೇಂದ್ರದ ಗೃಹ ಮತ್ತು ರಕ್ಷಣಾ ಇಲಾಖೆಗೆ ತಿಳಿಸಲಾಗಿದೆ. ಮೊದಲಿನಿಂದಲೂ ಪ್ರಬಲವಾಗಿ ಹಿಂದುತ್ವ ವಾದ ಮಂಡಿಸುತ್ತಾ ಬಂದಿರುವ ಈಶ್ವರಪ್ಪ ಅವರು ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ. ಆದರೂ, ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅವರಿಗೆ ಸೂಕ್ತ ಭದ್ರತೆ ಒದಗಿಸುವ ಅವಶ್ಯಕತೆಯಿದೆ’ ಎಂದು ಸವದಿ ಹೇಳಿದರು.

ಮಹಾರಾಷ್ಟ್ರದಲ್ಲಿ ಶಿವಸೇನೆ ಪುಂಡಾಟ; ಕರ್ನಾಟಕದಲ್ಲಿ ವ್ಯಕ್ತವಾಗುತ್ತಿದೆ ಆಕ್ರೋಶ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ